ಸೆ.26: ಮಂಗಳೂರಿಗೆ ಶಿಲ್ಪಾ ಶೆಟ್ಟಿ
ಕೆಎಂಸಿ ಆಸ್ಪತ್ರೆಯಲ್ಲಿ "ವಾವ್ ಮಾಮ್' ಸ್ಪರ್ಧೆ
Team Udayavani, Sep 13, 2019, 5:36 AM IST
ಮಂಗಳೂರು: ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯಲ್ಲಿ “ವುಮೆನ್ ಆ್ಯಂಡ್ ಚೈಲ್ಡ್ ಸೆಂಟರ್’ (ಮಹಿಳಾ ಮತ್ತು ಮಕ್ಕಳ ಕೇಂದ್ರ) ಉದ್ಘಾಟನೆ ಸೆ.26ರಂದು ನಡೆಯಲಿದ್ದು, ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭಾಗವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಎಂಸಿ ಆಸ್ಪತ್ರೆ “ವಾವ್ ಮಾಮ್ ಕಾಂಟೆಸ್ಟ್’ ಅನ್ನು ಅನಾವರಣಗೊಳಿಸಲಿದ್ದು, ವಿಜೇತರಿಗೆ ಶಿಲ್ಪಾ ಶೆಟ್ಟಿ “ವಾವ್ ಮಾಮ್’ ಶೀರ್ಷಿಕೆಯ ಬಹುಮಾನ ನೀಡಲಿದ್ದಾರೆ.
ಈ ಸ್ಪರ್ಧೆ ಅತ್ಯಂತ ಸರಳವಾಗಿದ್ದು, ತಾಯಿಯಾಗಲಿರುವವರ ಎರಡು
ಮತ್ತು ಅವರ ಕುಟುಂಬದ ಒಂದು ಫೊಟೋ ನೀಡಬೇಕು. ತಾಯಿಯಾಗುವ ನಿರೀಕ್ಷೆಯಲ್ಲಿರುವ ಮಹಿಳೆಯರು ಮಂಗಳೂರು ಅಥವಾ ಸುತ್ತಮುತ್ತಲ ಪ್ರದೇಶದಲ್ಲಿ ವಾಸವಾಗಿರಬೇಕು. ಯಾವುದೇ ವಸ್ತುಗಳನ್ನು ಬಳಸಿಕೊಂಡು ಚಿತ್ರಗಳನ್ನು ತೆಗೆಯಬಹುದು (ಸೆಲ್ಫಿಗಳನ್ನು ಸ್ವೀಕರಿಸಲಾಗುವುದಿಲ್ಲ).
ಚಿತ್ರಗಳು ಉನ್ನತ ಸ್ಪಷ್ಟತೆ ಹೊಂದಿರಬೇಕಲ್ಲದೆ, ಪೂರ್ಣ ಗಾತ್ರದಲ್ಲಿರಬೇಕು (ಕುಳಿತಿರುವ ಸ್ಥಿತಿಯಲ್ಲಿ ತೆಗೆದ ಚಿತ್ರಗಳನ್ನು ಸ್ವೀಕರಿಸಲಾಗುವುದು).
ಆಯ್ಕೆ ಮಾಡಲಾದ ಸ್ಪರ್ಧಿಗಳಿಗೆ ಕೆಎಂಸಿ ಆರೋಗ್ಯ ಸೇವೆ ಸಮಿತಿಯ ತಜ್ಞರೊಂದಿಗೆ ಸಂವಾದ ಅಧಿವೇಶನದಲ್ಲಿ ಭಾಗವಹಿಸುವ ಅವಕಾಶವಿದೆ. ಈ ಅಧಿವೇಶನ ಸೆ.22ರಂದು ಜ್ಯೋತಿಯ ಕೆಎಂಸಿ ಆಸ್ಪತ್ರೆಯಲ್ಲಿ ನಡೆಯಲಿದೆ.
ಬಹುಮಾನಗಳ ವಿವರಗಳು: ಮೊದಲ ಸ್ಥಾನ-75,000 ರೂ., ದ್ವಿತೀಯ ಸ್ಥಾನ – 50,000 ರೂ., ಎಲ್ಲ ಫೈನಲ್ ತಲುಪಿದವರಿಗೆ ತಲಾ 3,500 ರೂ.ಗಳ ಬಹುಮಾನ ಮತ್ತು ಅತ್ಯುತ್ತಮ ಸಿಂಗಲ್ ಪೊಟೋ -5,000 ರೂ. ಹಾಗೂ ಅತ್ಯುತ್ತಮ ಕುಟುಂಬ ಪೊಟೋ-5000 ರೂ. ನೋಂದಣಿ ಮಾಡಿಕೊಳ್ಳಲು ನಿಮ್ಮ ನಾಮನಿರ್ದೇಶನವನ್ನು ಮೇಲ್ನಲ್ಲಿ ಕಳುಹಿಸಬಹುದು- www.manipalhospitals.com/wowmom ನಾಮನಿರ್ದೇಶನಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಸೆ. 20 ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
MUST WATCH
ಹೊಸ ಸೇರ್ಪಡೆ
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ