ಶಿರಾಡಿ: ಒಂಟಿ ಸಲಗ ದಾಳಿ
Team Udayavani, Apr 11, 2018, 9:12 AM IST
ಉಪ್ಪಿನಂಗಡಿ: ಶಿರಾಡಿ ಗ್ರಾಮದ ದಾನಾಜೆಯ ಅರಣ್ಯದ ಅಂಚಿನಲ್ಲಿ ಕಳೆದ 10 ದಿನಗಳಿಂದ ಕಾಡಾನೆಯೊಂದು ಬೀಡು ಬಿಟ್ಟಿದ್ದು, ರಾತ್ರಿ ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಶಿರಾಡಿ ಗ್ರಾಮದ ದಾನಾಜೆ ನಿವಾಸಿ ಎನ್.ಪಿ. ಥಾಮಸ್ ಅವರ ತೋಟಕ್ಕೆ ಕಳೆದ ಆರೆಂಟು ದಿನಗಳಿಂದ ರಾತ್ರಿ ವೇಳೆ ನುಗ್ಗಿ ದಾಂಧಲೆ ನಡೆಸಿದೆ. 6 ತೆಂಗು, ನೂರಾರು ಬಾಳೆ ಗಿಡಗಳನ್ನು ನಾಶಪಡಿಸಿದೆ. ಇದೇ ಪರಿಸರದ ಎನ್.ವಿ. ಥಾಮಸ್ ಅವರ ತೋಟದ 6 ತೆಂಗು, ಅಡಿಕೆ ಮರ, ಬಾಳೆ ಗಿಡಗಳನ್ನು ಕೆಡವಿದೆ.
ಅರಣ್ಯ ಇಲಾಖೆ ಸಿಬಂದಿಗೆ ದೂರು ನೀಡಿದ್ದೇವೆ, ಒಮ್ಮೆ ಬಂದು ನೋಡಿ ಹೋಗಿದ್ದಾರೆ. ಆದರೆ ಅದನ್ನು ಕಾಡಿಗೆ ಅಟ್ಟುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಆನೆ ಮನೆಯಂಗಳ ತನಕ ಬರಲಾರಂಭಿಸಿದ್ದು, ಮಲಗುವುದಕ್ಕೂ ಹೆದರಿಕೆ ಆಗುತ್ತಿದೆ ಎಂದು ಥಾಮಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ