ಆತಂಕದ ನಡುವೆ ಶಿರಾಡಿ ಘಾಟಿ ಸಂಚಾರ
Team Udayavani, Aug 12, 2019, 6:48 AM IST
ನೆಲ್ಯಾಡಿ: ಶಿರಾಡಿ ಘಾಟಿ ರಸ್ತೆಯಲ್ಲಿ ರವಿವಾರ ಆತಂಕದಿಂದಲೇ ವಾಹನ ಸಂಚಾರ ಪ್ರಾರಂಭವಾಗಿದೆ.
ರವಿವಾರ ಮಳೆ ತುಸು ಕಡಿಮೆಯಾದ ಹಿನ್ನೆಲೆಯಲ್ಲಿ ಘನ ವಾಹನ ಗಳ ಸಂಚಾರಕ್ಕೂ ಅನುಮತಿ ನೀಡಲಾಯಿತು. ಶನಿವಾರ ತಡರಾತ್ರಿ ಲಾರಿಯೊಂದು ಶಿರಾಡಿ ಗಡಿಯ ಮೇಲ್ಭಾಗದಲ್ಲಿ ಚರಂಡಿಗೆ ಬಿದ್ದ ಪರಿಣಾಮಸಂಚಾರಕ್ಕೆ ಸ್ವಲ್ಪಕಾಲ ತಡೆಯುಂಟಾಗಿತ್ತು. ರವಿವಾರ ಬೆಳಗ್ಗೆ 10 ಗಂಟೆಯ ಬಳಿಕ ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಘನ ವಾಹನಗಳಿಗೂ ಸಂಜೆ 6ರ ವರೆಗೆಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದ್ದು, ರಾತ್ರಿ ಗುಡ್ಡ ಕುಸಿತ ಭೀತಿಯ ಕಾರಣ ನಿರ್ಬಂಧ ಹೇರಲಾಗಿದೆ.
ಘನವಾಹನಗಳಿಂದ ಅಡಚಣೆ
ಶನಿವಾರ ರಾತ್ರಿಯಿಂದಲೇ ಘನ ವಾಹನಗಳನ್ನು ಗುಂಡ್ಯ ಪ್ರದೇಶದಲ್ಲಿ ಅಡ್ಡಾದಿಡ್ಡಿ ನಿಲುಗಡೆ ಮಾಡಿದ್ದರಿಂದ ಗುಂಡ್ಯ ಜಂಕ್ಷನ್ ಇಡೀ ಬ್ಲಾಕ್ ಆಗಿ ವಾಹನಗಳು ಪರದಾಡುವಂತಾಗಿತ್ತು. ಅಪಾರ ಸಂಖ್ಯೆಯಲ್ಲಿ ಇದ್ದ ವಾಹನ ಸವಾರರು ಮತ್ತು ಇತರರಿಗೆ ಆಹಾರದಕೊರತೆ ಎದುರಾಗಿತ್ತು. ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಪ್ರಶಾಂತ್ ಭಟ್ ಮಾಣಿಲ ಅವರು ಸುಬ್ರಹ್ಮಣ್ಯದ ಹೊಟೇಲ್ಗಳಿಂದ ಆಹಾರವನ್ನು ಸಂಗ್ರಹಿಸಿ ತಂದು ಗುಂಡ್ಯ ಭಾಗದ ಸಂತ್ರಸ್ತರಿಗೆ ವಿತರಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
ಗುಂಡಿ ಮುಚ್ಚುವ ಕಾರ್ಯ
ಇದೇವೇಳೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿಯಿಂದ ಗುಂಡ್ಯದ ವರೆಗಿನ ರಸ್ತೆಯಲ್ಲಿ ಅಪಾಯಕಾರಿ ಹೊಂಡಗಳು ಉಂಟಾಗಿದ್ದು, ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಆಗ್ರಹ, ಹೆದ್ದಾರಿ ಎಂಜಿನಿಯರ್ ಲಿಂಗೇಗೌಡ ಅವರ ಸೂಚನೆ ಮೇರೆಗೆ ಗುಂಡಿಮುಚ್ಚುವ ಕಾರ್ಯ ಪ್ರಾರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು