ಗುಂಡ್ಯದಲ್ಲಿ ಮತ್ತೆ ಲಾರಿಗಳ ಪರದಾಟ
Team Udayavani, Nov 13, 2018, 10:20 AM IST
ನೆಲ್ಯಾಡಿ: ಶಿರಾಡಿ ಘಾಟಿಯಲ್ಲಿ ನ. 12ರಿಂದ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದೆಂದು ಮಾಧ್ಯಮಗಳಲ್ಲಿ ಪ್ರಕಟವಾದ ಜಿಲ್ಲಾಧಿಕಾರಿಗಳ ಹೇಳಿಕೆಗಳನ್ನು ನಂಬಿ ಬಂದ ಲಾರಿ, ಟ್ಯಾಂಕರ್ ಇತ್ಯಾದಿ ಘನ ವಾಹನಗಳು ಗುಂಡ್ಯದಲ್ಲಿ ಸೋಮವಾರ ಮತ್ತೆ ಸಂಕಷ್ಟಕ್ಕೆ ಸಿಲುಕಿದವು.
ಸೋಮವಾರ ಬೆಳಗ್ಗಿನಿಂದಲೇ ಹಾಸನ, ಸಕಲೇಶಪುರ ಕಡೆಯಿಂದ ಘನ ವಾಹನಗಳು ಘಾಟಿ ಇಳಿದು ಬಂದವು. ಅವುಗಳನ್ನು ಗುಂಡ್ಯದಲ್ಲಿ ತಡೆಯಲಾಯಿತು. ಅದೇ ರೀತಿ ಮಂಗಳೂರು ಕಡೆಯಿಂದ ಬಂದ ಲಾರಿಗಳನ್ನು ಮುಂದುವರಿಯಲು ಉಪ್ಪಿನಂಗಡಿ ಪೊಲೀಸರು ಬಿಡಲಿಲ್ಲ. ಸಂಜೆವರೆಗೂ ದ.ಕ. ಜಿಲ್ಲಾಧಿಕಾರಿ ಕಚೇರಿಯಿಂದ ಸ್ಪಷ್ಟ ಆದೇಶ ಬಾರದ ಕಾರಣ ಸ್ಥಳದಲ್ಲಿ ಗೊಂದಲ ಏರ್ಪಟ್ಟಿತು. ಟನ್ಗಟ್ಟಲೆ ಭಾರ ಹೇರಿಕೊಂಡು
ಘಾಟಿ ಇಳಿದು ಬಂದ ಕೆಲವು ಲಾರಿಗಳು ಅಪರಾಹ್ನ 3 ಗಂಟೆಯ ತನಕ ಕಾದು ಮರಳಿ ಘಾಟಿ ಮೂಲಕವೇ ಸಕಲೇಶಪುರದ ಕಡೆಗೆ ಸಾಗಿದ ಘಟನೆಯೂ ನಡೆಯಿತು.
ಜಿಲ್ಲಾಡಳಿತ ಸ್ಪಷ್ಟ ತೀರ್ಮಾನ ಕೈಗೊಳ್ಳದೇ ಇರುವುದರಿಂದ ಲಾರಿ ಚಾಲಕರು ದಿನಂಪ್ರತಿ ಸುತ್ತುಬಳಸಿ ಸಾಗುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಗುಂಡ್ಯದ ಗೇಟ್ನಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಲಾರಿಗಳನ್ನು ಮುಂದುವರಿಯಲು ಬಿಡಲಾರದೆ; ಚಾಲಕರ ಪ್ರಶ್ನೆಗಳಿಗೂ ಉತ್ತರಿಸಲಾಗದೆ ಹೈರಾಣಾಗಿದ್ದಾರೆ.
ಹಾಸನ ಜಿಲ್ಲಾಡಳಿತ ಶಿರಾಡಿ ಘಾಟಿ ರಸ್ತೆಯನ್ನು ಘನ ವಾಹನ ಸಂಚಾರಕ್ಕೆ ಮುಕ್ತ ಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತವೂ ಆದೇಶ ಹೊರಡಿಸಿಲ್ಲ. ಘನ ವಾಹನ ಸಂಚಾರಕ್ಕೆ ಉಭಯ ಜಿಲ್ಲಾಡಳಿತಗಳು ಕೆಲವೇ ದಿನಗಳಲ್ಲಿ ಏಕಕಾಲಕ್ಕೆ ಆದೇಶ ಹೊರಡಿಸಲಿವೆ. ಹಾಗಿದ್ದೂ ಕೆಲವು ಲಾರಿಗಳು ಘಾಟಿ ಇಳಿದಿರುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲ.
ಕುಮಾರ್, ಅಪರ ಜಿಲ್ಲಾಧಿಕಾರಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ