ನಾಗಮಂಡಲೋತ್ಸವ: ಭಕ್ತರಿಗೆ ಮಹಾ ಅನ್ನಸಂತರ್ಪಣೆ


Team Udayavani, Feb 2, 2020, 5:04 AM IST

0102BAJ3

ಬಜಪೆ: ಕಟೀಲಿನಲ್ಲಿ ಶನಿವಾರ ವಿಜೃಂಭಣೆಯಿಂದ ಜರಗಿದ ನಾಗಮಂಡಲೋತ್ಸವಕ್ಕೆ ಭಕ್ತ ಸಾಗರವೇ ಹರಿದುಬಂತು. ಸುಮಾರು 1.20 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ದರ್ಶನ ಪಡೆದರು. ನಾಗಮಂಡಲೋತ್ಸವದ ದಿನದಂದು ಭೋಜನ ಶಾಲೆಯಲ್ಲಿ ವಿವಿಧ ರುಚಿ ರುಚಿಯ ಖಾದ್ಯ ಭಕ್ತರ ಬಾಯಿ ರುಚಿಯನ್ನು ಹೆಚ್ಚಿಸಿತು.

ನಾಗಮಂಡಲೋತ್ಸವದ ಪ್ರಯುಕ್ತ ಕ್ಷೇತ್ರದಲ್ಲಿ ನಿರಂತರವಾಗಿ ಮಹಾಅನ್ನ ಸಂತರ್ಪಣೆ ಜರಗಿತು. ಸುಮಾರು 25 ಸಾವಿರ ಭಜಕ್ತರು ಬೆಳಗಿನ ಉಪಾಹಾರವನ್ನು ಸೇವಿಸಿದ್ದಾರೆ. ಬಿಸಿಬೆಳೆ ಬಾತ್‌, ಕಡ್ಲೆ , ಅವಲಕ್ಕಿ , ಮೊಸರು,ಲಡ್ಡು, ಚಹಾ, ಕಾಫಿ ಜತೆ ನೀಡಲಾಯಿತು.

ಅನಂತರ ನಡೆದ ಮಹಾಅನ್ನಪ್ರಸಾದದಲ್ಲಿ ಸುಮಾರು 1 ಲಕ್ಷಕ್ಕೂ ಆಧಿಕ ಭಕ್ತರು ಪ್ರಸಾದ ಸೇವಿಸಿದರು. ನಾಗಮಂಡಲೋತ್ಸವದ ಪ್ರಯುಕ್ತವಾಗಿ ಸುಮಾರು 2.50 ಲಕ್ಷಕ್ಕೂ ಅಧಿಕ ಲಡ್ಡು ತಯಾರಿಸಿದ್ದು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು.

ದುರ್ಗೆಗೆ ಪ್ರಿಯವಾದ ನೈವೇದ್ಯ ಗುಡಾನ್ನ
ದುರ್ಗೆಗೆ ಪ್ರಿಯವಾದ ನೈವೇದ್ಯ ಗುಡಾನ್ನ ಪಾಯಸವನ್ನು ಸುಮಾರು 2ಕ್ವಿಂಟಲ್‌ ತಯಾರಿಸಲಾಗಿತ್ತು. 80 ಬಾಣಸಿಗರು ಪ್ರಸಾದವನ್ನು ತಯಾರಿಗೆ ಕಾರ್ಯ ನಿರ್ವಹಿಸಿದ್ದಾರೆ.

10 ಅನ್ನ ಪ್ರಸಾದ ಕೌಂಟರ್‌
ಶನಿವಾರದಂದು ಅನ್ನಪ್ರಸಾದ ಸುವ್ಯವಸ್ಥೆಗಾಗಿ 10 ಕೌಂಟರ್‌ಗಳಿಗೆ ಹೆಚ್ಚಿಸಲಾಗಿತ್ತು. ಬಾಳೆ ಎಲೆಯಲ್ಲಿ ಅನ್ನಪ್ರಸಾದ ಸ್ವೀಕರಿಸುವ ಕಡೆಯಲ್ಲಿಯೂ 6 ಬದಲು 10 ಕೌಂಟರ್‌ಗಳನ್ನು ಮಾಡಲಾಯಿತು. ವಿಐಪಿ ಕೌಂಟರ್‌ಗಳನ್ನು ಕೂಡ ತೆರೆಯಲಾಯಿತು.

11 ದಿನಗಳಲ್ಲಿ ಕೆಎಂಎಫ್‌ನಿಂದ ಸುಮಾರು 3,000 ಲೀ. ಮೊಸರು, 22,000 ಲೀ. ಹಾಲು, 81,000ಲೀ. ಮಜ್ಜಿಗೆ ಈಗಾಗಲೇ ಬಳಕೆ ಆಗಿದೆ. ಶನಿವಾರ ನಾಗಮಂಡಲೋತ್ಸವಕ್ಕೆ 2,000 ಲೀ., 3,500 ಲೀ. ಹಾಲು, 22,000 ಲೀ. ಮಜ್ಜಿಗೆ ಉಪಯೋಗಿಸಲಾಗಿದೆ. 11 ದಿನಗಳಲ್ಲಿ ಶನಿವಾರವೇ ಅತೀ ಹೆಚ್ಚು ಬಳಕೆಯಾಗಿದೆ.

ಶರಬತ್‌ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವತಿಯಿಂದ ಶನಿವಾರ ಕೂಡ ಆಯುರ್ವೇದಿಕ್‌ ಬಿಸಿ ನೀರು ಬಂದ ಭಕ್ತರಿಗೆ ನೀಡಲಾಯಿತು. ಮಜ್ಜಿಗೆ, ಪುನರ್‌ಪುಳಿ ಜೂಸ್‌, ಜತೆಗೆ ಲಿಂಬೆ ಪಾನೀಯ (ಶರ್‌ಬತ್‌) ನೀಡಲಾಯಿತು.

ಇಂದಿನ ಸಾಂಸ್ಕೃತಿಕ ಕಾರ್ಯಕ್ರಮ
ಕಟೀಲು: ಸಂಜೆ 5 ಸಭಾ ಕಾರ್ಯಕ್ರಮ ರಾತ್ರಿ 7 ರಿಂದ ಪಂಡಿತ್‌ ಉದಯ ಬಾವಲ್ಕರ್‌ ಮತ್ತು ಬಳಗ ಪೂನಾ ಇವರಿಂದ ಶಾಸ್ತ್ರೀಯ ಸಂಗೀತ ರಾತ್ರಿ 9 ರಿಂದ ಶ್ರೀ ಕ್ಷೇತ್ರ ಕಟೀಲು ಕಾವ್ಯಚಿತ್ರ ರೂಪಕ ನಡೆಯಲಿದೆ. ಚಿತ್ರ : ನೀರ್ನಳ್ಳಿ ಗಣಪತಿ ಭಟ್‌, ಹಾಡುಗಾರಿಕೆ : ಬಲಿಪ ಶಿವಶಂಕರ, ಸಿದ್ಧಾರ್ಥ ಬೆಳ್ಮಣ್‌, ವೈಶ್ವಾನರ, ಚೆಂಡೆ:ಚೈತನ್ಯ, ಮದ್ದಳೆ: ರಾಜೇಶ್‌, ಹಾರ್ಮೊನಿಯಂ-ಸೂರ್ಯ ಉಪಾಧ್ಯಾಯ, ತಬಲ:ರೂಪಕ ಕಲ್ಲೂರ್‌ಕರ್‌, ವಯಲಿನ್‌: ಜನಾರ್ದನ, ಮೃದಂಗ: ನಾಗೇಂದ್ರ ಪ್ರಸಾದ್‌, ರಿದಂ: ಪ್ರಸನ್ನ, ನಿರೂಪಣೆ : ಶಂಕರನಾರಾಯಣ ಉಪಾಧ್ಯಾಯ, ಪರಿಕಲ್ಪನೆ : ಲಕ್ಷ್ಮೀನಾರಾಯಣ ಭಟ್‌.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.