ಪೊಳಲಿ: ಇಂದು ವಾರ್ಷಿಕ ಜಾತ್ರೆ ಸಂಪನ್ನ
Team Udayavani, Apr 12, 2019, 6:00 AM IST
ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಐದು ದಿನಗಳ ಚೆಂಡು ಸಂಪನ್ನಗೊಂಡಿದೆ.ದೇವಸ್ಥಾನದ ಸಮೀಪದ ವಿಶಾಲ ಗದ್ದೆಯಲ್ಲಿ ಐದು ದಿನಗಳವರೆಗೆ ಚೆಂಡು ಉತ್ಸವ ನಡೆದಿದ್ದು, ನೂರಾರು ಮಂದಿ ಉತ್ಸಾಹಿ ತರುಣರು ಪಾಲ್ಗೊಂಡಿದ್ದರು.
ಅಮ್ಮುಂಜೆ ಹಾಗೂ ಮಣೇಲ್(ಮಳಲಿ) ಊರುಗಳ ಪರಂಪ ರಾಗತವಾಗಿ ಮಧ್ಯೆ ಚೆಂಡಾಟ ನಡೆಯುತ್ತಾ ಬಂದಿದೆ. ಚೆಂಡಾಟ ನಡೆದ ಬಳಿಕ ಉತ್ಸವ ಬಲಿ ನಡೆಯುತ್ತಿದ್ದು, ಇದಾದ ಬಳಿಕ ಆಯಾ ದಿನಗಳ ಚೆಂಡಿನ ದಿವಸ ಆಯಾ ರಥೋತ್ಸವ ಜರಗಿತು.ಕಡೇ ಚೆಂಡಿನ ದಿನ ಆಳುಪಲ್ಲಕಿ ರಥ,ಬೆಳ್ಳಿ ರಥೋತ್ಸವ ಜರಗಿತು.ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿ ಯನ್ನು ವಸಂತ ಮಂಟಪದಲ್ಲಿ ಪೂಜೆ ಬಳಿಕ ಪಲ್ಲಕಿ ಸೇವೆ,ಧಾರ್ಮಿಕ ಕಾರ್ಯಗಳು ಜರಗಿದವು.
ರಥೋತ್ಸವ
ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಗುರುವಾರ ಮಧ್ಯಾಹ್ನ ದೇವರ ಪೂಜೆ ನಡೆದ ಬಳಿಕ ರಥಕ್ಕೆ ಕಳಸ ಪೂಜೆ ನೆರವೇರಿತು. ದೇಗುಲದ ತಂತ್ರಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದ ಅನಂತರ ಸುಬ್ರ ಹ್ಮಣ್ಯ ದೇವರ ಬಲಿ ಉತ್ಸವ ನೆರವೇರಿತು.ಅನಂತರ ರಥೋತ್ಸವ ಜರಗಿತು.
ಉಳ್ಳಾಕ್ಲು ಮಂಗೃಂತಾಯಿ ದೈವಗಳ ನೇಮ
ಈ ಬಾರಿ ಉಳ್ಳಾಕ್ಲು ಮಂಗೃಂತಾಯಿ ದೈವಗಳ ನೇಮ ಜರಗಲಿರುವುದು ವಿಶೇಷ. ಬ್ರಹ್ಮಕಲಶೋತ್ಸವದಂದು ಇದು ನಡೆದಿದ್ದು,ಇನ್ನು ಪ್ರತೀವರ್ಷ ಜಾತ್ರೆಯ ದಿನದಂದು ಈ ದೈವಗಳ ನೇಮ ಜರಗಲಿದೆ.ಜಾತ್ರೆಯ ಸಂದರ್ಭ ಪೂರ್ವಕಟ್ಟಳೆಗೆ ಅನುಸಾರವಾಗಿ ಅರ್ಕುಳ ಬೀಡಿನಿಂದ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿಗೆ ಎ. 12ರಂದು ಧ್ವಜಾವರೋಹಣದ ದಿನ ಆಗಮಿಸಿ ರಾತ್ರಿ ನೇಮ ಸೇವೆ ಸಂಪನ್ನ ಗೊಳ್ಳಲಿದೆ.ಎ. 12ರಂದು ಅರ್ಕುಳ ಬೀಡಿನಿಂದ ಪುಂಚಮೆ ಮಾರ್ಗವಾಗಿ ಶ್ರೀ ಕ್ಷೇತ್ರ ಪೊಳಲಿ ಶೋಭಾಯಾತ್ರೆ ಜರಗಲಿದೆ.
“ಪುರಲ್ದಪ್ಪೆನ ಜಾತ್ರೆದ ಪೊರ್ಲು’ ಅಲ್ಬಂ ಸಾಂಗ್ ಬಿಡುಗಡೆ
ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ನಿಮಿತ್ತ ಬುಧವಾರ “ಪುರಲ್ದಪ್ಪೆನ ಜಾತ್ರೆದ ಪೊರ್ಲು’ ಎಂಬ ಅಲ್ಬಂ ಸಾಂಗ್ ಅನ್ನು ಶಾಸಕ ರಾಜೇಶ್ ನಾೖಕ್ ಬಿಡುಗಡೆಗೊಳಿಸಿದರು.ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪ ಬೆಳಗಿಸಿದರು.
ಸ್ವಾಮಿ ಪ್ರಣವಾನಂದ ಸರಸ್ವತಿ,ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ತಾರಾನಾಥ ಆಳ್ವ ಉಳಿಪಾಡಿಗುತ್ತು,ಪ್ರವೀಣ್,ಹರೀಶ್ಚಂದ್ರ,ಅರ್ಚಕ ರಾಮ್ ಭಟ್, ಪೊಳಲಿ ಗಿರೀಶ್ ತಂತ್ರಿ,ಲೀಲಾಕ್ಷ ಕರ್ಕೇರ, ಕದ್ರಿ ನವನೀತ್ ಶೆಟ್ಟಿ,ವೆಂಕಟೇಶ್ ನಾವಡ, ಭಾಸ್ಕರ ಭಟ್, ಕೃಷ್ಣಾನಂದ ಹೊಳ್ಳ,ರಿತೇಶ್,ಅಮ್ಮುಂಜೆ ಗುತ್ತು ದೇವ್ದಾಸ್ ಹೆಗ್ಡೆ,ರಂಗನಾಥ ಶೆಟ್ಟಿ,ಸುಬ್ರಾಯ ಕಾರಂತ್, ಪ್ರಶಾಂತ್ ಗುರುಪುರ,ಭರತ್ ಗುರುಪುರ ಹಾಗೂ ವಾಮನ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.ದಿನೇಶ್ ರಾಯಿ ನಿರೂಪಿಸಿದರು.
ಇಂದು ಜಾತ್ರೆ ಸಂಪನ್ನ
ನಿತ್ಯಬಲಿ,ದಂಡಮಾಲೆ,ಐದು ದಿನಗಳ ಚೆಂಡಾಟ ರಥೋತ್ಸವ ಅನಂತರ ಎ.12ರಂದು ಫಲ್ಗುಣಿ ನದಿಯಲ್ಲಿ ಅವಭೃಥ ಸ್ನಾನ ನಡೆದು ಧ್ವಜಾವರೋಹಣದೊಂದಿಗೆ ಒಂದು ತಿಂಗಳ ಜಾತ್ರೆ ಸಂಪನ್ನಗೊಳ್ಳುತ್ತದೆ. ಈ ಬಾರಿ ಈ ದಿನ ಉಳ್ಳಾಕ್ಲು ದೈವಗಳ ಭಂಡಾರ ಆಗಮಿಸಿ ಈ ದೇವಗಳ ನೇಮ ನಡೆದು ಕೊನೆಗೆ.ಎ.13ರಂದು ಕೊಡಮಣಿತ್ತಾಯ ದೈವಗಳ ನೇಮ, ಎ.14ರಂದು ಸಂಪ್ರೋಕ್ಷಣೆ,ಮಂತ್ರಾಕ್ಷತೆ ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!
ಅಧಿಕಾರಕ್ಕಾಗಿ ಪಿಎಫ್ಐಯ ರಾಜಕೀಯ ಮುಖವಾದ ಎಸ್ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ: ನಳಿನ್
Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ
Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ
MUST WATCH
ಹೊಸ ಸೇರ್ಪಡೆ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ