ಶ್ರೀ ಕಾಶೀ ಮಠಾಧೀಶರ ಚಾತುರ್ಮಾಸ್ಯ ವ್ರತಾರಂಭ
Team Udayavani, Jul 13, 2017, 4:00 AM IST
ಮಂಗಳೂರು: ಕೊಂಚಾಡಿಯಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠದ ಅಧೀನದಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತ ಆರಂಭಗೊಂಡಿದೆ.
ಸ್ವಾಮೀಜಿ ಅವರು ಜು. 3ರಂದು ತಮ್ಮ ಉಡುಪಿ ಮೊಕ್ಕಾಂನಿಂದ ಕೊಂಚಾಡಿಯ ಸ್ವಮಠಕ್ಕೆ ಆಗಮಿಸಿ
ದ್ದರು. ಜು. 10ರಂದು ಶ್ರೀಮತ್ ಸುಕೃತೀಂದ್ರತೀರ್ಥ ಸ್ವಾಮೀಜಿ ಅವರ ಪುಣ್ಯತಿಥಿ ಆರಾಧನೆಯ ಅಂಗ
ವಾಗಿ ಭಾವಚಿತ್ರ ಸಹಿತ ರಜತ ಪಲ್ಲಕಿ ಉತ್ಸವ, ಶ್ರೀ ಸುಕೃತೀಂದ್ರತೀರ್ಥ ಗುರುಗುಣಗಾನ, ಲಘುವಿಷ್ಣು ಅಭಿಷೇಕ, ಸ್ವರ್ಣ ಗರುಡ ವಾಹನ ಪೂಜೆ ನಡೆದಿದೆ. ಜು. 11ರಂದು ಸಂಸ್ಥಾನದ ದೇವರುಗಳಿಗೆ ಸಾನ್ನಿಧ್ಯಹವನಗಳು ನಡೆದಿವೆ. ಜು. 14ರಂದು ಶ್ರೀ ಸಂಸ್ಥಾನದ ದೇವರುಗಳಿಗೆ ಪಂಚಾಮೃತ ಅಭಿಷೇಕ, ಊಧ್ವರ್ಜನ, ಶತಕಲಶಾಭಿಷೇಕ, ಪವಮಾನಾಭಿಷೇಕ, ಕನಕಾಭಿಷೇಕ, ಮೃತ್ತಿಕಾನಯನ, ಮುದ್ರಾಧಾರಣ, ಮಹಾಪೂಜೆ, ಮೃತ್ತಿಕಾ ಪೂಜೆಗಳ ಬಳಿಕ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡಲಿದ್ದು, ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುವರು.
ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಆಗಮಿಸಲಿರುವ ಭಕ್ತರ ವಾಸ್ತವ್ಯ, ಊಟ ಹಾಗೂ ಇತರ ಅನುಕೂಲಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ.ಮಂಗಳೂರು ಮಹಾನಗರವೂ ಸೇರಿದಂತೆ, ಕಾವೂರಿನಿಂದ ವ್ಯಾಸನಗರದವರೆಗಿನ ಸಮಸ್ತ ಗೌಡಸಾರಸ್ವತ ಬ್ರಾಹ್ಮಣ ಸಮಾಜ ಸ್ತ್ರೀಪುರುಷ ಸಮವಸ್ತ್ರಧಾರೀ ಸ್ವಯಂ ಸೇವಕರ ತಂಡ ವಾರದ ಏಳು ದಿನಗಳಿಗೆ ಒಂದೊಂದು ವಿಭಿನ್ನ ತಂಡವಾಗಿ ಕರಸೇವೆಯಲ್ಲಿ ನಿರತವಾಗಿದೆ. ಶ್ರೀ ಮಠದ ದೇವರ ಬೆಳಗ್ಗಿನ ಪೂಜೆಯ ಸಮಯದಲ್ಲಿ ಸ್ತೋತ್ರ ಪಠಿಸುವ ಮಾತೆಯರ ತಂಡ ಮಧ್ಯಾಹ್ನ ಹಾಗೂ ರಾತ್ರಿ ಪೂಜಾ ಸಮಯದ ಭಜನಾ ತಂಡ ಹೂ, ತುಳಸಿ ಇತ್ಯಾದಿ ಪೋಣಿಸುವವರ ತಂಡ, ಭೋಜನಾ ಶಾಲೆ, ಪಾಕಶಾಲೆಗಳಲ್ಲಿ ಕಾರ್ಯನಿರತ ಸ್ವಯಂಸೇವಕರ ತಂಡ, ಕಾರ್ಯಾಲಯ, ಸ್ವಾಗತ ಸಮಿತಿ, ವಸತಿ ಸಮಿತಿ, ಉಗ್ರಾಣ ಸಮಿತಿ, ಪೂಜಾ ಸಮಿತಿ, ಸಾಂಸ್ಕೃತಿಕ ಸಮಿತಿ-ಹೀಗೆ ಹತ್ತು ಹಲವು ಸಮಿತಿಗಳು ರೂಪುಗೊಂಡು ಉತ್ಸಾಹದಿಂದ ಸೇವೆ ಸಲ್ಲಿಸುತ್ತಿವೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ