ಏಕಕಾಲಕ್ಕೆ ಸಂದೇಶ ರವಾನೆ-ತತ್‌ಕ್ಷಣ ಸ್ಪಂದನೆ

ಪಾಲಿಕೆಯ 60 ಮಂದಿ ಅಧಿಕಾರಿಗಳಿಗೆ ವಾಕಿ ಟಾಕಿ

Team Udayavani, Dec 5, 2019, 4:01 AM IST

fd-24

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯ ಕೆಲಸ ಕಾರ್ಯಗಳು ವೇಗ ಪಡೆಯಲು ಅಧಿಕಾರಿಗಳು ತತ್‌ಕ್ಷಣವೇ ಕಾರ್ಯಪ್ರವೃತ್ತರಾಗಬೇಕೆಂಬ ಸದುದ್ದೇಶದಿಂದ ಪಾಲಿಕೆಯಲ್ಲಿ ಇದೀಗ ವಾಕಿಟಾಕಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆ ಮೂಲಕ, ವಿವಿಧ ಫೀಲ್ಡ್‌ ಅಧಿಕಾರಿಗಳಿಗೆ 60 ವಾಕಿಟಾಕಿಗಳನ್ನು ನೀಡ ಲಾಗಿದ್ದು, ಒಂದೇ ತಿಂಗಳಲ್ಲಿ ಬದಲಾವಣೆಗಳು ಕಂಡು ಬರುತ್ತಿವೆ.

ಎಲ್ಲ ಅಧಿಕಾರಿಗಳಿಗೂ ಏಕಕಾಲದಲ್ಲಿ ಸಂದೇಶ, ಸೂಚನೆ ರವಾನಿಸಿ, ಸಂಬಂಧಪಟ್ಟ ಅಧಿಕಾರಿಗಳು ತತ್‌ಕ್ಷಣವೇ ಸ್ಪಂದಿಸುವುದು ಮತ್ತು ಸ್ಪಂದಿಸಿದ ಕೆಲಸ ಕಾರ್ಯಗಳ ಬಗ್ಗೆ ಪಾಲಿಕೆ ಆಯುಕ್ತರಿಗೆ ವರದಿ ನೀಡುವುದು ವಾಕಿಟಾಕಿ ವ್ಯವಸ್ಥೆ ಅಳವಡಿಕೆಯ ಉದ್ದೇಶವಾಗಿದೆ. ಅದರಂತೆ, ಪಾಲಿಕೆ ಚುನಾವಣೆಗೂ ಕೆಲವು ದಿನಗಳ ಮುನ್ನ 60 ವಾಕಿಟಾಕಿಗಳನ್ನು ತರಿಸಿ ಎಲ್ಲ ಹಿರಿಯ, ಕಿರಿಯ, ಸಹಾಯಕ, ಕಾರ್ಯಕಾರಿ ಅಭಿಯಂತರರು, ಆರೋಗ್ಯ ನಿರೀಕ್ಷಕರು ಸೇರಿದಂತೆ ಫೀಲ್ಡ್‌ ಅಧಿಕಾರಿಗಳಿಗೆ ನೀಡಲಾಗಿದೆ. ಅಧಿಕಾರಿಗಳಿಗೆ ವಾಕಿಟಾಕಿ ನೀಡಿದ ಅನಂತರ ಕೆಲಸ ಕಾರ್ಯಗಳು ವೇಗ ಪಡೆಯುತ್ತಿರುವುದು ಕಂಡು ಬರುತ್ತಿದ್ದು ಎನ್ನುತ್ತಾರೆ ಪಾಲಿಕೆ ಉಪ ಆಯುಕ್ತರು.

ಆಯುಕ್ತರು ಅಥವಾ ಇತರ ವಿಭಾಗ ಮುಖ್ಯಸ್ಥರು ನೀಡಿದ ಸೂಚನೆಗೆ ಫೀಲ್ಡ್‌ನಲ್ಲಿರುವ ಅಧಿಕಾರಿಗಳು ತತ್‌ಕ್ಷಣವೇ ಪ್ರತಿಕ್ರಿಯೆ ನೀಡಿ ಕ್ಷಿಪ್ರ ವಾಗಿ ಕಾಯೊ¾ìನ್ಮುಖರಾಗುತ್ತಿದ್ದಾರೆ. ಸುಲಭದಲ್ಲಿ ಪರಿಹರಿಸಬಹುದಾದ ನೀರು, ಒಳಚರಂಡಿ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಅಲ್ಲದೆ ಸಂಬಂಧಪಟ್ಟ ವಿಭಾಗಕ್ಕೆ ಪ್ರಗತಿ ವರದಿಯನ್ನೂ ತತ್‌ಕ್ಷಣವೇ ನೀಡುವಂತಹ ಬೆಳವಣಿಗೆ ವಾಕಿಟಾಕಿ ಅಳವಡಿಸಿದ ಅನಂತರ ಗಮನಿಸಿದ್ದೇವೆ ಎನ್ನುತ್ತಾರೆ ಅಧಿಕಾರಿಗಳು.

ಏಕಕಾಲಕ್ಕೆ ಸಂಪರ್ಕ
ಮೊಬೈಲ್‌ ಫೋನ್‌ ಬಳಕೆಯ ಯುಗ ವಾದರೂ ಮೊಬೈಲ್‌ ಮುಖಾಂತರ ಏಕಕಾಲಕ್ಕೆ ಎಲ್ಲ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯ ವಾಗುವುದಿಲ್ಲ. ಅಲ್ಲದೆ ಕೆಲವೊಮ್ಮೆ ಮೊಬೈಲ್‌ ನೆಟÌರ್ಕ್‌ ಸಿಗದಿರುವುದು, ಕರೆ ಸ್ವೀಕರಿಸದಿರುವುದು, ಸಂದೇಶ ನೋಡದಿರುವುದು ಮುಂತಾದ ಕಾರಣ ಗಳಿಂದಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ತತ್‌ಕ್ಷಣಕ್ಕೇ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಇದರಿಂದ ತತ್‌ಕ್ಷಣಕ್ಕೇ ಆಗಬೇಕಾದ ಕೆಲಸಗಳೂ ಬಾಕಿಯಾಗುತ್ತವೆ. ಈ ನಿಟ್ಟಿನಲ್ಲಿ ಯೋಚಿಸಿದ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್‌ ಹೆಗ್ಡೆ, ಪಾಲಿಕೆ ಕೆಲಸ ಕಾರ್ಯಗಳು ವೇಗ ಪಡೆಯಲು ವಾಕಿಟಾಕಿ ವ್ಯವಸ್ಥೆ ಅಳವಡಿಸಲು ಮುಂದಾದರು. ವಾಕಿಟಾಕಿಯ ಮೂಲಕ ಏಕಕಾಲಕ್ಕೆ ಎಲ್ಲ ಅಧಿಕಾರಿಗಳಿಗೆ ಸಂದೇಶ, ಸೂಚನೆ ರವಾನಿಸಲು ಸಾಧ್ಯವಾಗುತ್ತದೆ. ಕೆಲಸದ ಅವಧಿಯಲ್ಲಿ ಎಲ್ಲ ಅಧಿಕಾರಿಗಳು ವಾಕಿಟಾಕಿಯನ್ನು ಚಾಲೂ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಕಡ್ಡಾಯ.

ಪಾಲಿಕೆ ವ್ಯಾಪ್ತಿಗೆ ರೇಂಜ್‌ ನಿಗದಿ
ವಾಕಿಟಾಕಿಯ ನೆಟ್ವರ್ಕ್ ವಲಯವನ್ನು ಪಾಲಿಕೆ ವ್ಯಾಪ್ತಿಗೆ ನಿಗದಿ ಮಾಡಲಾಗಿದೆ. ಲಾಲ್‌ಬಾಗ್‌ನಲ್ಲಿರುವ ಪಾಲಿಕೆಯ ಮುಖ್ಯ ಕಚೇರಿಯಿಂದ ತುಂಬೆವರೆಗೆ ಮತ್ತು ಮುಖ್ಯ ಕಚೇರಿಯಿಂದ ಸುರತ್ಕಲ್‌ ವಿಭಾಗ, ಮುಕ್ಕ ಬಾರ್ಡರ್‌ವರೆಗೂ ವಾಕಿ ಟಾಕಿಯ ರೇಂಜ್‌ ನಿಗದಿಯಾಗಿದೆ. ಪಾಲಿಕೆಯಲ್ಲಿ ಕೆಲವು ವರ್ಷಗಳ ಹಿಂದೆಯೂ ಇದೇ ರೀತಿ ವಾಕಿ ಟಾಕಿ ವ್ಯವಸ್ಥೆ ಅಳವಡಿಸಿದ್ದು, ಬಳಿಕ ಅದನ್ನು ಕೈ ಬಿಡಲಾಗಿತ್ತು.

ತತ್‌ಕ್ಷಣ ಸ್ಪಂದಿಸಿ ಕ್ಷಿಪ್ರ ಕೆಲಸ
ವಾಕಿಟಾಕಿ ವ್ಯವಸ್ಥೆಯನ್ನು ಪಾಲಿಕೆಯಲ್ಲಿ ಅಳವಡಿಸಿ ಸುಮಾರು ಒಂದು ತಿಂಗಳಾಗಿದೆ. ಈ ವೇಳೆಯಲ್ಲಿ ಪಾಲಿಕೆಯ ಬಹುತೇಕ ಕೆಲಸ ಕಾರ್ಯಗಳು ವೇಗ ಪಡೆದುಕೊಳ್ಳುತ್ತಿರುವುದನ್ನು ಗಮನಿಸುತ್ತಿದ್ದೇವೆ. ಅಧಿಕಾರಿಗಳೂ ತತ್‌ಕ್ಷಣ ಸ್ಪಂದಿಸಿ ಕ್ಷಿಪ್ರ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಆದರೆ ಇದರಿಂದ ತತ್‌ಕ್ಷಣಕ್ಕೇ ಕೆಲಸಗಳಲ್ಲಿ ಶೇ.100ರಷ್ಟು ಯಶಸ್ಸು ಪಡೆಯಬಹುದು ಎಂದು ಹೇಳಲು ಸಾಧ್ಯವಿಲ್ಲ. ಕ್ರಮೇಣ ಇನ್ನಷ್ಟು ಫಲಿತಾಂಶ ಸಿಗಬಹುದು.
 - ಸಂತೋಷ್‌, ಉಪ ಆಯುಕ್ತರು, ಮಹಾನಗರ ಪಾಲಿಕೆ

- ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.