ಮೂಲ ಸೌಕರ್ಯದ ಬೇಡಿಕೆ ಸೌಹರ್ದದಿಂದ ಈಡೇರಿಕೆ
Team Udayavani, Jul 3, 2017, 3:25 AM IST
ಪಂಜ: ಪಂಜ ಗ್ರಾಮ ಪಂಚಾಯತ್ನ ಕಾಣಿಕೆ ಎಂಬ ಪ್ರದೇಶದಲ್ಲಿ ಅನೇಕ ಮನೆಗಳಿಗೆ ವಾಹನ ಸಂಚಾರಕ್ಕೆ ರಸ್ತೆಯೇ ಇಲ್ಲದೆ ಬಹಳಷ್ಟು ತೊಂದರೆಯನ್ನು ಅನುಭಸುತ್ತಿದ್ದರು. ಈ ಬಗ್ಗೆ ಅನೇಕ ವರುಷಗಳಿಂದ ಪಂಜ ಗ್ರಾಮ ಪಂಚಾಯತ್ಗೆ ಬೇಡಿಕೆ ಇಟ್ಟಿದ್ದರು. ಆದರೆ ಆ ಭಾಗದ ಜನರ ಒಮ್ಮತ ಇಲ್ಲದೆ ಬೇಡಿಕೆ ಈಡೇರಿಸಲು ಅಸಾಧ್ಯವಾಗಿತ್ತು. ಇದೀಗ ಪಂಜದ ಮುಖಂಡರು ಆ ಭಾಗದ ಜನರನ್ನು ಒಗ್ಗೂಡಿಸಿ ಸೌಹಾರ್ದ ಮಾತುಕತೆಯ ಮೂಲಕ ರಸ್ತೆ ನಿರ್ಮಿಸಿ ಶಾಶ್ವತ ಪರಿಹಾರ ಕಾಣಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಪಂಜ ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಗ್ರಾ.ಪಂ.ಸದಸ್ಯರಾದ ಲಿಗೋಧರ ಆಚಾರ್ಯ, ಲೋಕೇಶ್ ಬರೆಮೇಲು, ಜಗದೀಶ್ ಪುರಿಯ, ತ್ರೀವೇಣಿ ಬೊಳ್ಳಾಜೆ, ಸುಜಾತಾ ಕೆರೆಮೂಲೆ, ಎಪಿಎಂಸಿ ಸದಸ್ಯ ಮೋನಪ್ಪ ಗೌಡ ಬೊಳ್ಳಾಜೆ ಅವರು ಪಾಂಡಿಗದ್ದೆ ಶಾಲೆ ಸಮೀಪದಿಂದ ಕಾಣಿಕೆ ತನಕ ಮನೆಗಳನ್ನು ಸಂಪರ್ಕಿಸಿ. ಕಂದಾಯ ಇಲಾಖೆ ಮೂಲಕ ಸರ್ವೆ ನಡೆಸಿದರು. ನಂತರ ಸಭೆ ಕರೆದು ರಸ್ತೆ ನಿರ್ಮಿಸಲು ಸಹಕರಿಸುವಂತೆ ಅವರೆಲ್ಲರ ಮನವೊಲಿಸುವಲ್ಲಿ ಯಶಸ್ವಿಯಾದರು. ರಸ್ತೆಗೆ ಗುದ್ದಲಿ ಪೂಜೆ ನಡೆದು ಕಾಮಗಾರಿ ಆರಂಭಗೊಂಡಿತ್ತು. ರಸ್ತೆಗಾಗಿ ಅನೇಕ ಮನೆಯವರು ತಮ್ಮ ವರ್ಗ ಸ್ಥಳಗಳಲ್ಲಿ ರಸ್ತೆಗೆ ಎದುರಾಗುವ ಅಡಿಕೆ ಮರ ಕೂಡ ಕಡಿದು ಸ್ಥಳ ಬಿಟ್ಟು ಕೊಟ್ಟರು.
ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿಯವರು ಮತ್ತು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು ತೆಂಗಿನ ಕಾಯಿ ಒಡೆದು ಶುಭ ಹಾರೈಸಿದರು. ಹೊನ್ನಪ್ಪ ಗೌಡ ಕಂಬುì ಹಾರೆ ಹಾಕಿ ಚಾಲನೆ ನೀಡಿದರು. ಪಂಜ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರು ಷೋತ್ತಮ, ಸದಸ್ಯರಾದ ಲಿಗೋಧರ ಆಚಾರ್ಯ, ಲೋಕೇಶ್ ಬರೆಮೇಲು, ಜಗದೀಶ್ ಪುರಿಯ, ಸ್ಥಳ ದಾನಿಗಳಾದ ಮೋನಪ್ಪ ಗೌಡ ಚಳ್ಳಕೋಡಿ, ತಿಮ್ಮಪ್ಪ ಗೌಡ ದೊಡ್ಡಮನೆ, ಶಿವರಾಮ ಕಂಬುì ಪೂಜಾರಿ ಮನೆ, ಪುಟ್ಟಣ್ಣ ಗೌಡ ಕಂಬುì ದೊಡ್ಡಮನೆ, ದುಗ್ಗಪ್ಪ ಗೌಡ ಕಂಬುì ದೊಡ್ಡಮನೆ, ಹೊನ್ನಪ್ಪ ಗೌಡ ಕಂಬುì, ಬಾಲಕಿ ಹೆಂಗುÕ ಕಾಣಿಕೆ ಮೂಲೆ, ಹೊನ್ನಪ್ಪ ಗೌಡ ಕಾಣಿಕೆ ಮೂಲೆ, ರೋಜಪ್ಪ ಗೌಡ ಕಾಣಿಕೆ, ಜನಾರ್ದನ ಕಂಬಳ, ಚೀನಪ್ಪ ಕಾಣಿಕೆ, ರಾಘವ ಕಾಣಿಕೆ, ಕೇಶವ ಕಾಣಿಕೆ, ಪೆರ್ಗಡೆ ಕಾಣಿಕೆ, ಹೇಮಾವತಿ ಕಾಣಿಕೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಕುಶಾಲಪ್ಪ ಗೌಡ ದೊಡ್ಡಮನೆ, ರವಿ ಚಳ್ಳಕೋಡಿ, ಕುಶಾಲಪ್ಪ ಗೌಡ ಕಂಬುì, ರುಕ್ಮಯ್ಯ ಪೂಜಾರಿಮನೆ, ವಾಸುದೇವ ಮಲ್ಲಾರ, ಉಪಸ್ಥಿತರಿದ್ದರು. ಚೀನಪ್ಪ ಕಾಣಿಕೆ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ