ಜಕ್ರಿಬೆಟ್ಟು ಸಂಪರ್ಕ ರಸ್ತೆ ಕಾಮಗಾರಿಗೆ ವೇಗ


Team Udayavani, Apr 23, 2019, 5:05 AM IST

20

ರಾಷ್ಟ್ರೀಯ ಹೆದ್ದಾರಿ ಭಂಡಾರಿಬೆಟ್ಟು ಕಿರು ಸೇತುವೆ ನಿರ್ಮಾಣ.

ಬಂಟ್ವಾಳ: ಸುದೀರ್ಘ‌ ಅವಧಿ ಮೂವತ್ತು ವರ್ಷಗಳ ಬಳಿಕ ರಾಷ್ಟ್ರೀಯ ಹೆದ್ದಾರಿ ಬಿ.ಸಿ. ರೋಡ್‌ – ಜಕ್ರಿಬೆಟ್ಟು ಸಂಪರ್ಕದ 3.85 ಕಿ.ಮೀ. ಉದ್ದ ರಸ್ತೆ ವಿಸ್ತರಣೆ, ಉದ್ದೇಶಿತ ಕಾಂಕ್ರೀಟು ಕಾಮಗಾ ರಿಗೆ ರಸ್ತೆ ಬದಿ ಮರಗಿಡ ತೆರವು, ರಸ್ತೆ ನೇರ್ಪು, ವಿದ್ಯುತ್‌ ಸಂಪರ್ಕ ಜಾಲದ ಅಡಚಣೆಗಳ ನಿವಾರಣೆಯೊಂದಿಗೆ ವೇಗ ದೊರಕಿದೆ. ಮಳೆಗಾಲಕ್ಕೆ ಮೊದಲು ಬಿ.ಸಿ. ರೋಡ್‌ ಗಾಣದಪಡು³-ಜಕ್ರಿಬೆಟ್ಟು ಹೆದ್ದಾರಿ ಕಾಮಗಾರಿ ಮುಕ್ತಾಯಕ್ಕೆ ಯೋಜಿಸಿದ್ದು, ಕೆಲಸವನ್ನು ಹಂಚಿಕೊಂಡು ಏಕಕಾಲದಲ್ಲಿ ಎಲ್ಲೆಡೆ ನಡೆಯುತ್ತಿದೆ.

14 ಮೀ. ಅಗಲ
ಬಿ.ಸಿ. ರೋಡ್‌ ತಾಲೂಕು ಕೇಂದ್ರವಾ ಗಿದ್ದು, ನಗರ ವಿಸ್ತಾರವು ಬಿ.ಮೂಡ ಗ್ರಾಮದ ಜಕ್ರಿಬೆಟ್ಟು ಮಣಿಹಳ್ಳ ವರೆಗೆ ಇರುವುದರಿಂದ ನಗರ ವ್ಯಾಪ್ತಿ ತನಕ ರಸ್ತೆ ವಿಭಾಜಕ ಸಹಿತ 14 ಮೀ. ಅಗಲದ ಚತುಷ್ಪಥ ಕಾಂಕ್ರೀಟು ನಡೆಯುವುದು. ರಸ್ತೆ ವಿಸ್ತರಣೆ, ಸಮತಟ್ಟು ಕೆಲಸ, ಅಂತಿಮವಾಗಿ ಮಳೆಗಾಲ ಮುಗಿದ ಬಳಿಕ ಕಾಂಕ್ರೀಟು ಕಾಮಗಾರಿ ನಡೆಯುವುದಾಗಿ ಮಾಹಿತಿ ತಿಳಿಸಿದೆ.

ಜಕ್ರಿಬೆಟ್ಟು ಬಳಿಕ 16 ಕಿ.ಮೀ. ಪುಂಜಾಲಕಟ್ಟೆವರೆಗೆ 10 ಮೀ. ಅಗಲದ ವಿಭಾಜಕವಿಲ್ಲದ ದ್ವಿಪಥ ಡಾಮರು ರಸ್ತೆ ನಿರ್ಮಾಣ ಆಗಲಿದೆ. ಪ್ರಥಮ ಹಂತದಲ್ಲಿ ಬಿ.ಸಿ. ರೋಡ್‌- ಪುಂಜಾಲಕಟ್ಟೆವರೆಗಿನ 19.85 ಕಿ.ಮೀ.ರಸ್ತೆಯನ್ನು 157 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. 4 ಕಿರು ಸೇತುವೆಗಳು, 65 ಮೋರಿಗಳು ಇದರಲ್ಲಿ ಸೇರಿವೆ. ಈ ಮಳೆಗಾಲಕ್ಕೆ ಮೊದಲು 8 ಕಿ.ಮೀ. ಡಾಮರು ರಸ್ತೆ ಸಹಿತ ಭಂಡಾರಿಬೆಟ್ಟು ಕಿರುಸೇತುವೆ, ಜಕ್ರಿಬೆಟ್ಟು ಮಣಿಹಳ್ಳ ಕಿರು ಸೇತುವೆ ಕಾಮಗಾರಿ ಮುಕ್ತಾಯವಾಗಲಿದೆ. 35 ಮೋರಿಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಗುತ್ತಿಗೆ ನಿರ್ವಾಹಕರ ಪ್ರಕಾರ ಮೇ ತಿಂಗಳ ಒಳಗೆ ಇಲ್ಲಿನ ಎರಡು ಸೇತುವೆಗಳು ಪೂರ್ಣಗೊಳ್ಳಲಿವೆ. ಪುಂಜಾಲಕಟ್ಟೆ ಭಾಗದಿಂದ ಈಗಾಗಲೇ ಡಾಮರು ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ರಸ್ತೆ ಬದಿ ಸಮತಟ್ಟು ಕಾಮಗಾರಿ ನಡೆಸಲಾಗುತ್ತಿದೆ. ಮೋರಿಗಳ ನಿರ್ಮಾಣ ಕಾಮಗಾರಿಯನ್ನು ಮಳೆಗಾಲದಲ್ಲಿಯೂ ಮುಂದುವರಿಸಲು ಉದ್ದೇಶಿಸಲಾಗಿದೆ.

ಪ್ರಯೋಜನಕಾರಿ
ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ಹಾದು ಹೋಗುವ ಬೈಪಾಸ್‌ ರಸ್ತೆ ಎಂದೇ ಜನ ಮನ್ನಣೆ ಪಡೆದಿರುವ ಬಿ.ಸಿ. ರೋಡ್‌ – ಜಕ್ರಿಬೆಟ್ಟು ರಸ್ತೆಯ ಕಾಯಕಲ್ಪದಿಂದ ನಗರದ ಅಂದ ಹೆಚ್ಚಲಿದೆ. ರಸ್ತೆ ವಿಸ್ತರಣೆಯಿಂದ ವ್ಯವಹಾರದ ಅವಕಾಶಗಳು ತೆರೆದುಕೊಳ್ಳಲಿವೆ. ಮುಂದಕ್ಕೆ ಪುರಸಭೆ ನಗರ ವಲಯ ಗ್ರಾಮಾಂತರ ವಲಯ ವಿಂಗಡಣೆ ಮೂಲಕ ಸಮಗ್ರ ಅಭಿವೃದ್ಧಿಯ ಚಿಂತನೆ ಇದರ ಹಿಂದಿದೆ. ಸಂಚಾರದ ಅಡಚಣೆ ನಿವಾರಣೆ, ರಸ್ತೆ ಗುಣಮಟ್ಟ ಮೇಲ್ದರ್ಜೆಗೆ, ನಗರ ಸುತ್ತು ಪ್ರದಕ್ಷಿಣೆಗೆ ಯೋಗ್ಯ ರಸ್ತೆಯಾಗಿ ಸೌಲಭ್ಯಗಳನ್ನು ಪಡೆಯಲಿದೆ.

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Puttur ಶ್ರೀಗಂಧ ದಾಸ್ತಾನು ಪತ್ತೆ: ಓರ್ವ ಸೆರೆ

Puttur ಶ್ರೀಗಂಧ ದಾಸ್ತಾನು ಪತ್ತೆ: ಓರ್ವ ಸೆರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.