ಮತ್ತೆ “ಎ’ ಗ್ರೇಡ್‌ಗೇರಿದ ದಕ್ಷಿಣ ಕನ್ನಡ, ಸಮತೋಲನ ಕಾಯ್ದುಕೊಂಡ ಉಡುಪಿ

ದ.ಕ.: 17 ವಿದ್ಯಾರ್ಥಿಗಳಿಗೆ 625 ಅಂಕ

Team Udayavani, May 19, 2022, 11:54 PM IST

ಮತ್ತೆ “ಎ’ ಗ್ರೇಡ್‌ಗೇರಿದ ದ.ಕ., ಸಮತೋಲನ ಕಾಯ್ದುಕೊಂಡ ಉಡುಪಿ

ಮಂಗಳೂರು: ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು “ಎ’ (ಕಳೆದ ಬಾರಿ “ಬಿ’) ಗ್ರೇಡ್‌ನೊಂದಿಗೆ ಶೇ. 78.20 ಫಲಿತಾಂಶ ದಾಖಲಿಸಿದೆ. 17 ವಿದ್ಯಾರ್ಥಿಗಳು ತಲಾ 625 ಅಂಕ ಗಳಿಸಿದ್ದಾರೆ. ಜಿಲ್ಲೆಯ 75 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿದೆ.

ಜಿಲ್ಲೆಯಲ್ಲಿ ಒಟ್ಟು 28,638 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 25,052 ಮಂದಿ ಉತ್ತೀರ್ಣರಾಗಿದ್ದಾರೆ.

ಒಟ್ಟು 523 ಶಾಲೆಗಳ ಪೈಕಿ 322 ಶಾಲೆಗಳು (ಸರಕಾರಿ 89, ಅನುದಾನಿತ 51, ಅನುದಾನ ರಹಿತ 182) “ಎ’ ಗ್ರೇಡ್‌, 148 ಶಾಲೆಗಳು (ಸರಕಾರಿ 69, ಅನುದಾನಿತ 40, ಅನುದಾನ ರಹಿತ 39) “ಬಿ’ ಗ್ರೇಡ್‌ ಹಾಗೂ 53 ಶಾಲೆಗಳು (ಸರಕಾರಿ 31, ಅನುದಾನಿತ 13, ಅನುದಾನ ರಹಿತ 9) “ಸಿ’ ಗ್ರೇಡ್‌ ಗಳಿಸಿವೆ.

ಶಿಕ್ಷಣಾಧಿಕಾರಿ ವ್ಯಾಪ್ತಿಯ ಬಂಟ್ವಾಳ ತಾಲೂಕು ಶೇ. 75.27 (ಕಳೆದ ವರ್ಷ 80.90), ಬೆಳ್ತಂಗಡಿ ತಾಲೂಕು ಶೇ. 80.52 (ಶೇ. 82.77), ಮಂಗಳೂರು ಉತ್ತರ ಶೇ. 80.60 (ಶೇ. 81.12), ಮಂಗಳೂರು ದಕ್ಷಿಣ ಶೇ. 74.59 (78.78), ಮೂಡುಬಿದಿರೆ ಶೇ. 82.00 (ಶೇ. 81.59), ಪುತ್ತೂರು ಶೇ. 79.86 (ಶೇ. 79.64) ಹಾಗೂ ಸುಳ್ಯ ತಾಲೂಕು ಶೇ. 77.62 (ಶೇ. 80.64) ಫಲಿತಾಂಶ ದಾಖಲಿಸಿದೆ.

ಬಂಟ್ವಾಳದಲ್ಲಿ 11 ಶಾಲೆಗಳು (ಸರಕಾರಿ 3, ಅನುದಾನ ರಹಿತ 8) ಶೇ.100 ಫಲಿತಾಂಶವನ್ನು ದಾಖಲಿಸಿವೆ. ಬೆಳ್ತಂಗಡಿಯಲ್ಲಿ 14 (ಸರಕಾರಿ 5, ಅನುದಾನ ರಹಿತ 9), ಮಂಗಳೂರು ಉತ್ತರ 12 (ಸರಕಾರಿ 3, ಅನುದಾನಿತ 1, ಅನುದಾನ ರಹಿತ 8), ಮಂಗಳೂರು ದಕ್ಷಿಣ 10 (ಸರಕಾರಿ 4, ಅನುದಾನಿತ 2, ಅನುದಾನ ರಹಿತ 4), ಮೂಡುಬಿದಿರೆ 7 (ಸರಕಾರಿ 1, ಅನುದಾನ ರಹಿತ 6), ಪುತ್ತೂರು 15 (ಸರಕಾರಿ 5, ಅನುದಾನಿತ 1, ಅನುದಾನರಹಿತ 5), ಸುಳ್ಯ 6 (ಸರಕಾರಿ 1, ಅನುದಾನ ರಹಿತ 5) ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ.

ಉಡುಪಿ: ಐದು ವಿದ್ಯಾರ್ಥಿಗಳಿಗೆ 625 ಅಂಕ
ಉಡುಪಿ, ಮೇ 19: ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 14,016 ವಿದ್ಯಾರ್ಥಿಗಳಲ್ಲಿ 12,267 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 1,749 ವಿದ್ಯಾರ್ಥಿಗಳು ಅನುತ್ತೀರ್ಣ ರಾಗಿದ್ದಾರೆ.
13,672 ಶಾಲಾ ವಿದ್ಯಾರ್ಥಿಗಳಲ್ಲಿ (ರೆಗ್ಯೂಲರ್‌) 12,231 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 89.46ರಷ್ಟು ಫ‌ಲಿತಾಂಶ ಬಂದಿದೆ. 297 ಖಾಸಗಿ ವಿದ್ಯಾರ್ಥಿಗಳಲ್ಲಿ 27 ಮಂದಿ ತೇರ್ಗಡೆ ಯಾಗಿದ್ದು, ಶೇ. 9.09ರಷ್ಟು ಫ‌ಲಿತಾಂಶ ದಾಖಲಾಗಿದೆ. 31 ರೆಗ್ಯೂಲರ್‌ ಪುನರಾವರ್ತಿ ವಿದ್ಯಾರ್ಥಿಗಳಲ್ಲಿ 8 (ಶೇ. 25.81) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 16 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಉತ್ತೀರ್ಣರಾಗಿದ್ದು ಶೇ. 6.25ರಷ್ಟು ಫ‌ಲಿತಾಂಶ ಬಂದಿದೆ.

ಈ ವರ್ಷವೂ ಎ ಶ್ರೇಣಿ
ಕಳೆದ ಎರಡು ವರ್ಷದಿಂದ ಜಿಲ್ಲಾವಾರು ರ್‍ಯಾಂಕ್‌ ಘೋಷಣೆ ಮಾಡದೆ ಶ್ರೇಣಿ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯು ಕಳೆದ ವರ್ಷದಂತೆ ಈ ವರ್ಷವೂ ಎ ಶ್ರೇಣಿ ಪಡೆದುಕೊಂಡಿದೆ. 2018-19ರಲ್ಲಿ 2ನೇ ಸ್ಥಾನ, 2017-18, 2016-17ರಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿತ್ತು. ಕಳೆದ ಐದು ವರ್ಷದಲ್ಲಿ ಜಿಲ್ಲೆಯು ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಸಮಾತೋಲನ ಕಾಯ್ದುಕೊಂಡು ಬರುತ್ತಿದೆ. 2015-16ರಿಂದ ಈಚೆಗೆ ಕ್ರಮವಾಗಿ ಶೇ. 89.64, ಶೇ. 84.23, ಶೇ. 88.18, ಶೇ. 89.49, ಶೇ. 89.98, ಶೇ. 100 (ಕೊರೊನಾದಿಂದ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿತ್ತು), ಶೇ. 89.46ರಷ್ಟು ಫ‌ಲಿತಾಂಶ ದಾಖಲಾಗಿದೆ.

ಶಾಲಾವಾರು ಫ‌ಲಿತಾಂಶ
13 ಸರಕಾರಿ, 2 ಅನುದಾನಿತ ಹಾಗೂ 26 ಅನುದಾನ ರಹಿತ ಪ್ರೌಢಶಾಲೆಗಳು ಶೇ. 100ರಷ್ಟು ಫ‌ಲಿತಾಂಶ ಪಡೆದಿವೆ. 38 ಶಾಲೆಗಳು ಶೇ. 95ಕ್ಕಿಂತ ಹೆಚ್ಚು, 65 ಶಾಲೆಗಳು ಶೇ. 90ಕ್ಕಿಂತ ಅಧಿಕ, 66 ಶಾಲೆಗಳು ಶೇ. 80ಕ್ಕಿಂತ ಹೆಚ್ಚು, 32 ಶಾಲೆಗಳು ಶೇ. 70ಕ್ಕಿಂತ ಅಧಿಕ, 14 ಶಾಲೆಗಳು ಶೇ. 60ಕ್ಕಿಂತ ಹೆಚ್ಚು, 8 ಶಾಲೆಗಳು ಶೇ. 50ಕ್ಕಿಂತ ಅಧಿಕ ಹಾಗೂ 2 ಶಾಲೆಗಳು ಮಾತ್ರ ಶೇ. 50ಕ್ಕಿಂತ ಕಡಿಮೆ ಫ‌ಲಿತಾಂಶ ಪಡೆದಿವೆ. ಶೂನ್ಯ ಫ‌ಲಿತಾಂಶದ ಯಾವುದೇ ಶಾಲೆ ಜಿಲ್ಲೆಯಲ್ಲಿ ಇಲ್ಲ.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.