ಕಿರಿಕಿರಿಯಾಗುತ್ತದೆಂದು ಆಟವಾಡುತ್ತಿದ್ದ ಮಕ್ಕಳಿಗೆ ಚೂರಿ ಇರಿತ: ಆರೋಪಿ ಬಂಧನ
Team Udayavani, May 6, 2019, 6:10 AM IST
ಮಂಗಳೂರು : ಕಿರಿಕಿರಿ ಯಾಗುತ್ತಿದೆ ಎಂದು ಆಟವಾಡುತ್ತಿದ್ದ ಮಕ್ಕಳಿಗೆ ನೆರಮನೆಯ ವ್ಯಕ್ತಿಯೋರ್ವ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಶಕ್ತಿನಗರದ ಪ್ರೀತಿ ನಗರದಲ್ಲಿ ಶನಿವಾರ ನಡೆದಿದೆ.
ಆರೋಪಿ ಶಕ್ತಿನಗರ ನಿವಾಸಿ ದೇವರಾಜು ಅಲಿಯಾಸ್ ಅಣ್ಣು (40) ಎಂಬಾ ತನನ್ನು ಪೊಲೀಸರು ಪೊಲೀಸರು ಬಂಧಿಸಿದ್ದಾರೆ. ಗಾಯ ಗೊಂಡಿರುವ ಹಾರ್ದಿಕ್ (4) ಮತ್ತು ಚಿರಾಗ್ (9) ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಲೆಗೆ ರಜೆ ಇರುವ ಕಾರಣ ಸಹೋದರರಾದ ಹಾರ್ದಿಕ್ ಮತ್ತು ಚಿರಾಗ್ ಸ್ನೇಹಿತರೊಂದಿಗೆ ಮನೆಯ ಎದುರು ಆಡುತ್ತಿದ್ದರು. ಆಗ ತನಗೆ ಕಿರಿಕಿರಿಯಾಗುತ್ತಿದೆ ಎಂದು ಹೇಳಿ ದೇವರಾಜು ಚೂರಿ ಹಿಡಿದುಕೊಂಡು ಮಕ್ಕಳ ಮೇಲೆ ಹಲ್ಲೆಗೆ ಮುಂದಾದ. ಆಗ ಕೆಲವು ಮಕ್ಕಳು ಓಡಿ ಹೋದರು. ಈ ಸಂದರ್ಭ ಕೈಗೆ ಸಿಕ್ಕ ಹಾರ್ದಿಕ್, ಚಿರಾಗ್ಗೆ ಆರೋಪಿ ಚೂರಿಯಿಂದ ಇರಿದಿದ್ದು, ಮಕ್ಕಳ ಕೈ, ತಲೆ ಹಾಗೂ ಮುಖಕ್ಕೆ ಗಾಯವಾಗಿದೆ.
ಬೊಬ್ಬೆ ಧಾವಿಸಿ ಬಂದ ಪೋಷಕರು ಹಾಗೂ ಸ್ಥಳೀಯರು ಕೂಡಲೇ ಮಕ್ಕಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ಪೊಲೀಸರು ರವಿವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ