ಸಸಿಹಿತ್ಲು: ಕುಸಿದ ಸ್ಟೇಜ್ ತಪ್ಪಿದ ಅನಾಹುತ : ಅಪಾಯದಿಂದ ಪಾರಾದ ಸಚಿವ ಯೋಗೇಶ್ವರ್
Team Udayavani, Mar 20, 2021, 11:10 PM IST
ಸಸಿಹಿತ್ಲು: ಇಲ್ಲಿನ ನಂದಿನಿ ಕಡಲತೀರದಲ್ಲಿ ಆಯೋಜಿಸಿದ್ದ ನಂದಿನಿ ಉತ್ಸವ ಉದ್ಘಾಟನೆ ಹಂತದಲ್ಲಿ ನಂದಿನಿ ತಟದಲ್ಲಿ ಹಾಕಿದ್ದ ಸ್ಟೇಜ್ ಕುಸಿದಿದ್ದು ಸಚಿವ ಯೋಗೇಶ್ವರ್ ಸಹಿತ ಗಣ್ಯರು ಪಾರಾಗಿದ್ದಾರೆ.
ನಂದಿನಿ ತಟದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ನಂದಿನಿ ಉತ್ಸವವನ್ನು ಉದ್ಘಾಟನೆ ಮಾಡಲು ಆಗಮಿಸಿದ್ದು ನಂದಿನಿ ನದಿಯ ತಟದಲ್ಲಿ ಹಾಕಿರುವ ವೇದಿಕೆಯ ಮೇಲೆ ಇತರ ಅತಿಥಿಗಳೊಡನೆ ಮೇಲೇರುತ್ತಿದ್ದಂತೆ ವೇದಿಕೆ ಏಕಾಏಕಿ ಕುಸಿದಿದೆ.
ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ವೇದಿಕೆ ಕುಸಿಯುತ್ತಿದ್ದಂತೆ ಸಚಿವರು ಹಾಗೂ ಕಟೀಲು ಕ್ಷೇತ್ರದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ ಸಹಿತ ಅತಿಥಿಗಳು ಕೆಳಗೆ ಬಿದ್ದಿದ್ದು ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಯಿತು.
ಕೂಡಲೇ ಸ್ವಯಂಸೇವಕರು ಕಾರ್ಯಪ್ರವೃತ್ತರಾಗಿ ಅತಿಥಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದರು. ಈ ನಡುವೆ ವೇದಿಕೆ ಕುಸಿತ ಕಂಡು ಗಲಿಬಿಲಿ ಜನಜಂಗುಳಿಯ ವಾತಾವರಣ ನಿರ್ಮಾಣವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ