“ಯಾಕೆ ಯೋಚನೆ ಮಾಡ್ತೀರಿ…ಇಷ್ಟು ಕಡಿಮೆ ರೊಕ್ಕಕ್ಕೆ ಬೇರೆಲ್ಲೂ ಡ್ರೆಸ್‌ ಸಿಗಲ್ಲ’

"ಸಂಡೇ ಬಜಾರ್‌'; ಸಿಟಿಯಲ್ಲೊಂದು "ಮಾಯಾಬಜಾರ್‌'!

Team Udayavani, Feb 24, 2020, 6:04 AM IST

2302MLR31

ಮಹಾನಗರ: “ಹಾಫ್‌ ರೇಟ್‌.. ಹಾಫ್‌ ರೇಟ್‌’ ಎಂದು ಒಬ್ಟಾತ ಹಳೆಯ ಬಟ್ಟೆಯನ್ನು ಕೈಯಲ್ಲಿ ಹಿಡಿದು ಗ್ರಾಹಕರನ್ನು ಕರೆಯುತ್ತಿದ್ದರೆ, “ಯಾಕೆ ಯೋಚನೆ ಮಾಡ್ತೀರಿ.. ಇಷ್ಟು ಕಡಿಮೆ ರೊಕ್ಕಕ್ಕೆ ಮಂಗಳೂರಲ್ಲಿ ಬೇರೆಲ್ಲೂ ಡ್ರೆಸ್‌ ಸಿಗಲ್ಲ’ ಅಂತ ಇನ್ನೊಬ್ಟಾತ ಗ್ರಾಹಕರ ಮನ ಸೆಳೆಯಲು ಪ್ರಯತ್ನಿಸಿದ. ಆದರೆ ಪಕ್ಕದಲ್ಲಿದ್ದ ಇನ್ನೊಬ್ಬ ಬಟ್ಟೆ ವ್ಯಾಪಾರಿ “ಇಲ್ಲಿ ಇನ್ನೂ ಕಡಿಮೆಗಿದೆ.. ಇಲ್ಲಿ ಬನ್ನಿ’ ಎಂದು ಆಹ್ವಾನ ನೀಡುತ್ತಲೇ ಇದ್ದ!

ನಗರದ ಪುರಭವನದ ಎಡಭಾಗದಲ್ಲಿರುವ ಫುಟ್‌ಪಾತ್‌ನಲ್ಲಿ ರವಿವಾರ ಬೆಳಗ್ಗಿನಿಂದ ಸಂಜೆಯವರೆಗೆ ಸಾಗಿದರೆ ನಿಮಗೆ ಇಂತಹ ಅನುಭವ ಆಗುತ್ತದೆ. ಕಾರಣ “ಸಂಡೇ ಬಜಾರ್‌’.

ಉ. ಕರ್ನಾಟಕ ಸಹಿತ ಬೇರೆ ಬೇರೆ ಜಿಲ್ಲೆ, ಬೇರೆ ರಾಜ್ಯದ ಬಟ್ಟೆ ವ್ಯಾಪಾರಿಗಳು ರವಿವಾರ ಮಂಗಳೂರಿಗೆ ಬರುತ್ತಾರೆ. ಜತೆಗೆ ತರಕಾರಿ, ಬ್ಯಾಗ್‌, ಶೇಂಗಾ, ತಿಂಡಿ ತಿನಿಸು ಸಹಿತ ಇತರ ಸಣ್ಣ ಪುಟ್ಟ ವಸ್ತುಗಳನ್ನು ಮಾರುವವರೂ ಇದೇ ವೇಳೆ ಬರುತ್ತಾರೆ. ವಿಶೇಷವೆಂದರೆ; ಇಲ್ಲಿ ಮಾರುವ ಬಟ್ಟೆಗಳು ಸೆಕೆಂಡ್‌ ಹ್ಯಾಂಡ್‌ ಸೇಲ್‌. ಅರ್ಥಾತ್‌ ಒಮ್ಮೆ ಬಳಕೆ ಮಾಡಿದ ಬಟ್ಟೆಗಳು ಇಲ್ಲಿ ಕಡಿಮೆ ದರಕ್ಕೆ ಸೇಲ್‌. ಕೆಲವನ್ನು ತೊಳೆದು, ಇಸ್ತ್ರಿ ಹಾಕಿ ಇಲ್ಲಿಗೆ ತರಲಾಗುತ್ತದೆ. ಮಂಗಳೂರಿನಲ್ಲಿ ಕೂಲಿ ಕೆಲಸ, ಕಟ್ಟಡ ಕೆಲಸ ಮಾಡುವ ಬಿಹಾರ, ಉತ್ತರಪ್ರದೇಶ ಸಹಿತ ನಮ್ಮ ರಾಜ್ಯದ ಬೇರೆ ಜಿಲ್ಲೆಯ ಕಾರ್ಮಿಕರೇ ಇವರ ಗ್ರಾಹಕರು. ಹೀಗಾಗಿ ಮಂಗಳೂರು ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಹಕರು ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿಲ್ಲ.

ರವಿವಾರವಿಡೀ ಭರ್ಜರಿ ಸಂತೆ
ಅಂದಹಾಗೆ, ರವಿವಾರ ಮುಂಜಾನೆಯಿಂದ ಸಂಜೆಯವರೆಗೆ ಇಲ್ಲಿನ ಸಂಡೇ ಬಜಾರ್‌ ಸಖತ್‌ ಬ್ಯುಸಿ. ಪ್ರತೀ ದಿನ ಪಾರ್ಕಿಂಗ್‌ ಸ್ಥಳವಾಗಿ ಮೀಸಲಾಗಿರುವ ನಗರದ ಕ್ಲಾಕ್‌ ಟವರ್‌ನಿಂದ ಲೇಡಿಗೋಷನ್‌ ಎದುರಿನ ಇಂದಿರಾ ಕ್ಯಾಂಟೀನ್‌ ಮುಂಭಾಗದವರೆಗಿನ ಸ್ಥಳ ರವಿವಾರವಿಡೀ ಭರ್ಜರಿ ಸಂತೆಯಾಗಿ ನಗರದಲ್ಲಿ ಫೇಮಸ್‌. ಸುಮಾರು 50ರಷ್ಟು ವ್ಯಾಪಾರಿಗಳು ಇಲ್ಲಿ ವ್ಯವಹಾರ ನಡೆಸುತ್ತಾರೆ. ಕಾರ್ಮಿಕರಾಗಿ ದುಡಿಯುತ್ತಿರುವ ಅದೆಷ್ಟೋ ಜನರು ಇಲ್ಲಿನ ಬಟ್ಟೆ ಬರೆಗಳನ್ನು ಖರೀದಿಸುತ್ತಾರೆ. ಹಾಗಾಗಿ ರವಿವಾರ ಇದು ಜನನಿಬಿಡ ಪ್ರದೇಶ.

ಮುಂಜಾನೆಯಿಂದ ಸಂಜೆಯವರೆಗೆ
ಮುಂಜಾನೆ 5, 6ರ ಸುಮಾರಿಗೆ ಇಲ್ಲಿ ವ್ಯಾಪಾರ ಶುರುವಾಗುತ್ತದೆ. ರವಿವಾರವೂ ಕೆಲಸ ಮಾಡುವವರಿದ್ದರೆ ಅವರು ಮುಂಜಾನೆಯೇ ಸಂತೆಗೆ ಬಂದು ಖರೀದಿ ಮಾಡಿ, ಮತ್ತೆ ಕೆಲಸಕ್ಕೆ ಹೋಗುತ್ತಾರೆ. ಉಳಿದಂತೆ ವ್ಯಾಪಾರ 10 ಗಂಟೆಯ ಬಳಿಕ ಬಿರುಸುಗೊಳ್ಳುತ್ತದೆ. ಸದ್ಯ ಬಿಸಿಲು ಜೋರಿರುವುದರಿಂದ ಮಧ್ಯಾಹ್ನ ವ್ಯಾಪಾರ ಕೊಂಚ ಕಡಿಮೆ. ಸಂಜೆ ವ್ಯಾಪಾರ ಮತ್ತೆ ಭರ್ಜರಿಯಾಗಿ ನಡೆಯುತ್ತದೆ.

“ನಾನು ಮತ್ತು ನನ್ನ ಮಗ ಮೈಸೂರಿನಿಂದ ಬಂದವರು. ನಿತ್ಯ ಅಲ್ಲೇ ಬಟ್ಟೆ ವ್ಯಾಪಾರ ಮಾಡುತ್ತೇವೆ. ಆದರೆ ರವಿವಾರ ಮಾತ್ರ ಮಂಗಳೂರಿಗೆ ಬರುತ್ತೇವೆ. ಹಳೆಯ ಬಟ್ಟೆಗಳು ಇಲ್ಲಿ ಕಾರ್ಮಿಕರಿಗೆ ಸೇಲ್‌ ಆಗುತ್ತವೆ. 20 ವರ್ಷಗಳಿಂದ ಈ ವ್ಯಾಪಾರ ಮಾಡುತ್ತಿದ್ದೇವೆ. ಹೀಗಾಗಿ ಮಂಗಳೂರು ನಮಗೆ ಚಿರಪರಿಚಿತ. ಉಳಿದಂತೆ ಧರ್ಮಸ್ಥಳ, ಶಿರಸಿ ಜಾತ್ರೆಯಲ್ಲಿಯೂ ವ್ಯಾಪಾರ ಮಾಡುತ್ತೇವೆ. ನಿತ್ಯ 2-3 ಸಾವಿರ ರೂ. ವ್ಯಾಪಾರ ಆಗುತ್ತದೆ. ಕೆಲವೊಮ್ಮೆ ಕಡಿಮೆ. ಬಾಡಿಗೆ ಮಾಡಿ ವಾಹನದಲ್ಲಿ ಬರುತ್ತೇವೆ’ ಎನ್ನುತ್ತಾರೆ ವ್ಯಾಪಾರಿ ಪಾಷಾ ಅವರು.

ಸೆಕೆಂಡ್‌ ಹ್ಯಾಂಡ್‌ ಬಟ್ಟೆಗಳ ವ್ಯಾಪಾರ!
ಕೇರಳ, ತಮಿಳುನಾಡು ಭಾಗದಿಂದ ಸೆಕೆಂಡ್‌ ಹ್ಯಾಂಡ್‌ ಬಟ್ಟೆಗಳನ್ನು ಮೈಸೂರು, ಮಂಡ್ಯ, ಹಾಸನ ಸಹಿತ ಬೇರೆ ಬೇರೆ ವ್ಯಾಪಾರಿಗಳಿಗೆ ನೀಡುತ್ತಾರೆ. ಇದರ ನಿರ್ವಹಣೆಗೆ ಮಧ್ಯವರ್ತಿಗಳಿದ್ದಾರೆ. ಹಾಗೆ ಪಡೆದುಕೊಂಡ ಬಟ್ಟೆಗಳನ್ನು ಒಟ್ಟು ಸೇರಿಸಿ ರವಿವಾರ ಮಂಗಳೂರಲ್ಲಿ ಸೇಲ್‌ಗೆ ಇಡುತ್ತಾರೆ. ಕನಿಷ್ಠ ದರವಿರುತ್ತದೆ. 30-40 ರೂ.ಗೆ ಬಟ್ಟೆ, 50-100 ರೂ.ಗೆ ಪ್ಯಾಂಟ್‌ ಕೂಡ ಸಿಗುತ್ತದೆ. ಕಟ್ಟಡ ಕಾರ್ಮಿಕರಿಗೆ ಇಂತಹ ಬಟ್ಟೆಗಳು ಅಗತ್ಯವಿರುವುದರಿಂದ ವ್ಯಾಪಾರ ಜೋರಾಗಿರುತ್ತದೆ. ಇನ್ನೊಂದು ವಿಶೇಷವೆಂದರೆ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಿಗೆ “ಹಳೆಯ ಬಟ್ಟೆ ಇದ್ದರೆ ಕೊಡಿ’ ಎಂದು ಕೇಳಿಕೊಂಡು ಬರುವವರಿದ್ದಾರೆ. ಹಾಗೆ ಪಡೆದುಕೊಂಡ ಬಟ್ಟೆಗಳನ್ನು ಕೂಡ ಇಲ್ಲಿ ವ್ಯಾಪಾರಕ್ಕೆ ಇಡಲಾಗುತ್ತದೆ. ಹಾಸ್ಟೆಲ್‌, ಗಾರ್ಮೆಂಟ್ಸ್‌, ಫ್ಲಾ$Âಟ್‌ಗಳಿಂದ ಡ್ಯಾಮೇಜ್‌ ಆದ ಬಟ್ಟೆಗಳನ್ನು ಪಡೆದವರು ಇಲ್ಲಿ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ಬಟ್ಟೆ ವ್ಯಾಪಾರಿಯೋರ್ವರು.

ಸಂತೆಯ ಮುನ್ನಾ ದಿನವೇ ಆಗಮನ!
ರವಿವಾರ ಸಂತೆಯಾದರೆ ಕೆಲವು ವ್ಯಾಪಾರಿಗಳು ಶನಿವಾರ ರಾತ್ರಿಯೇ ಬಂದು ರಸ್ತೆ ಬದಿಯಲ್ಲೇ ಮಲಗುತ್ತಾರೆ. ರೈಲು ಅಥವಾ ಬಸ್ಸಿನಲ್ಲಿ ಬಂದವರು ಶನಿವಾರ ಸಂಜೆಯಿಂದಲೇ ಕೆಲವರು ವ್ಯಾಪಾರ ಶುರು ಮಾಡುತ್ತಾರೆ. ದೂರದೂರಿನ ವ್ಯಾಪಾರಿಗಳಿಗೆ ದೂರದೂರಿನ ಗ್ರಾಹಕರಿಂದ ಮಾತ್ರ ವ್ಯವಹಾರ ಇರುವುದರಿಂದ ಅವರಿಗೆ ಮಾತ್ರ ಇದರ ನಿಜ ಕಥೆ ಗೊತ್ತಿದೆ. ಇನ್ನೂ ಕೆಲವರು ಶನಿವಾರ ರಾತ್ರಿ ಅವರ ಊರಿಂದ ಟೆಂಪೋದಲ್ಲಿ ಹೊರಟು ರವಿವಾರ ಮುಂಜಾನೆ ತಲುಪುತ್ತಾರೆ. ಒಂದು ಟೆಂಪೋದಲ್ಲಿ 5-6 ವ್ಯಾಪಾರಿಗಳು ಜತೆಯಾಗಿ ಬರುತ್ತಾರೆ. ಹೀಗಾಗಿ ಬಾಡಿಗೆ ನಿಭಾಯಿಸಲು ಸುಲಭವಾಗುತ್ತದೆ ಎಂಬುದು ಇವರ ಚಿಂತನೆ.

 -ದಿನೇಶ್‌ ಇರಾ

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.