ಸುರತ್ಕಲ್: ಕಚೇರಿಯ ಆನ್ಲೈನ್ ಸ್ತಬ್ಧ!
Team Udayavani, Oct 22, 2017, 10:22 AM IST
ಸುರತ್ಕಲ್ : ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ವಲಯ ಕಚೇರಿಯಲ್ಲಿ ದೂರವಾಣಿ ಸಂಪರ್ಕ ವ್ಯತ್ಯಯವಾಗಿದ್ದು, ಒಂದು ವಾರದಿಂದ ಆನ್ಲೈನ್ ಸ್ತಬ್ಧಗೊಂಡಿದೆ.
ಆನ್ಲೈನ್ ಸೇವೆಯ ಬಳಕೆಗಾಗಿ ಪಾಲಿಕೆ ಹಣ ಪಾವತಿಸದೇ ಇರುವುದರಿಂದ ದೂರಸಂಪರ್ಕ ಇಲಾಖೆ ಇಂಟರ್ನೆಟ್ ಸೌಲಭ್ಯಕ್ಕೇ ಕತ್ತರಿ ಹಾಕಿದೆ. ಇದರಿಂದಾಗಿ ನೀರಿನ ಬಿಲ್ ಪರಿಶೀಲನೆ, ನೋಂದಣಿ, ಅನುಮತಿ ಪತ್ರ ಮತ್ತಿತರ ದಾಖಲೆ ಪತ್ರ ಪಡೆಯಲಾಗದೆ ನಾಗರಿಕರು ಬರಿಗೈಯಲ್ಲಿ ಹಿಂದಿರುಗುವಂತಾಗಿದೆ.
ಇದೀಗ ಪಾಲಿಕೆಯ ಬಹುತೇಕ ಕೆಲಸ ಕಾರ್ಯಗಳು ಆನ್ಲೈನ್ ಮೂಲಕವೇ ನಡೆಯುತ್ತಿವೆ. ಇಲ್ಲಿನ ಪಾಲಿಕೆ ವ್ಯಾಪ್ತಿಯಲ್ಲಿ 12 ವಾರ್ಡ್ಗಳು ಬರುತ್ತಿದ್ದು, ವಲಯ ಕಚೇರಿಯಲ್ಲೇ ಎಲ್ಲ ದಾಖಲೆಗಳು ನಿರ್ವಹಣೆಯಾಗುತ್ತಿವೆ. ಹೀಗಾಗಿ ಸಹಜವಾಗಿಯೇ ಇಂಟರ್ನೆಟ್ ಬಳಕೆ ಅತಿಯಾಗುತ್ತಿದೆ. ಕಳೆದ ಸೋಮವಾರವೇ ಅಂತರ್ಜಾಲ ಸ್ತಬ್ಧಗೊಂಡಿದ್ದರೂ ದುರಸ್ತಿಗೆ ಹಬ್ಬದ ರಜಾ ದಿನಗಳು ಅಡ್ಡಿಯಾಗಿವೆ.
ಸೋಮವಾರದ ವೇಳೆಗೆ ಆನ್ ಲೈನ್ ವ್ಯವಸ್ಥೆ ಸರಿಯಾಗುವ ವಿಶ್ವಾಸವಿದೆ. ಇಂಟರ್ನೆಟ್ ಸಂಪರ್ಕ ಸರಿಹೋದರೂ ಸಿಬಂದಿಗೆ ಕೆಲಸದ ಒತ್ತಡ ಅಧಿಕವಾಗಲಿದೆ.
ಜನಪ್ರತಿನಿಧಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಮೂಲ ಸೌಕರ್ಯ ನೀಡಲು ಮುಂದಾಗಬೇಕು ಎಂದು ಹಿಂದೂಸ್ತಾನ್ ಹ್ಯೂಮನ್ ರೈಟ್ಸ್ ಅಧ್ಯಕ್ಷ ಉಸ್ಮಾನ್ ಎಂ.ಬಿ. ತಿಳಿಸಿದ್ದಾರೆ.
ತಾಸುಗಟ್ಟಲೆ ಸರತಿ ನಿಲ್ಲಬೇಕಾದ ಸ್ಥಿತಿ
ಆನ್ಲೈನ್ ಸ್ತಬ್ಧ ಹಾಗೂ ಹಬ್ಬದ ಕಾರಣಕ್ಕೆ ಒಂದು ವಾರದಿಂದ ಸ್ಥಗಿತ ಗೊಂಡಿದ್ದ ಎಲ್ಲ ಕೆಲಸಗಳಿಗಾಗಿ ನಾಗರಿಕರೂ ತಾಸುಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಸಾಧ್ಯತೆ ಇಲ್ಲದಿಲ್ಲ. ಸ್ಥಳೀಯ ನಾಗರಿಕರಿಗೆ ಮಂಗಳೂರಿನವರೆಗೆ ತೆರಳುವ ಬದಲು ಸುರತ್ಕಲ್ನಲ್ಲಿಯೇ ಸೌಲಭ್ಯ ದೊರೆಯಲಿ ಎಂದು ವಲಯ ಕಚೇರಿ ಮಾಡಲಾಗಿದೆ. ಕೆಲಸ ಕಾರ್ಯಗಳು ಅಂತರ್ಜಾಲ ಮೂಲಕ ನಿರ್ವಹಣೆಯಾಗುತ್ತಿವೆ. ಆದರೆ ಇಲ್ಲಿ ದೂರವಾಣಿ ಬಿಲ್ ಕಟ್ಟಲೂ ಹಣವಿಲ್ಲದ ಸ್ಥಿತಿಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ