ನೆಲ್ಯಾಡಿ ಬಳಿ ಟ್ಯಾಂಕರ್ ಪಲ್ಟಿ:ಗ್ಯಾಸ್ ಸೋರಿಕೆ
Team Udayavani, Mar 3, 2019, 12:58 PM IST
ಮಂಗಳೂರು : ಬೆಂಗಳೂರು -ಮಂಗಳೂರು ಹೆದ್ದಾರಿಯ ಪೆರಿಯಶಾಂತಿ ಬಳಿಯ ಲಾವತಡ್ಕದಲ್ಲಿ ಭಾನುವಾರ ಸಂಜೆ ಗ್ಯಾಸ್ ಟ್ಯಾಂಕರ್ವೊಂದು ಪಲ್ಟಿಯಾಗಿದ್ದು ಗ್ಯಾಸ್ ಸೋರಿಕೆಯಾಗುತ್ತಿದೆ.
ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆ ಹಿನ್ನಲೆಯಲ್ಲಿ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಗುಂಡ್ಯ -ಸುಬ್ರಹ್ಮಣ್ಯ ಮಾರ್ಗವಾಗಿ , ಪೆರಿಯಶಾಂತಿ-ಸುಬ್ರಹ್ಮಣ್ಯ ಬದಲಿ ಮಾರ್ಗವನ್ನು ವಾಹನ ಸವಾರರು ಬಳಸಿಕೊಳ್ಳಬೇಕಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಅಧಿಕಾರಿಗಳು, ಪೊಲೀಸರು ಮತ್ತು ಅಧಿಕಾರಿಗಳು ಆಗಮಿಸಿ ಟ್ಯಾಂಕರ್ ತೆರವಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಟ್ಯಾಂಕರ್ ಚಾಲಕನಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.