ಕುಕ್ಕೆಗೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ
Team Udayavani, May 24, 2018, 10:40 AM IST
ಸುಬ್ರಹ್ಮಣ್ಯ : ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬುಧವಾರ ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರೀ ಭೇಟಿ ನೀಡಿದರು.
ಆರಂಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರುಶನ ಪಡೆದರು. ದೇವಸ್ಥಾನದಲ್ಲಿ ಅರ್ಚಕರು ಅವರಿಗೆ ಶಾಲು ಹೊದೆಸಿ, ಮಹಾಪ್ರಸಾದ ನೀಡಿ, ಹರಸಿದರು. ಬಳಿಕ ಅವರು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿದರು. ಮಠ ದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ರವಿಶಾಸ್ತ್ರೀ ಅವರಿಗೆ ಶಾಲು ಹೊದೆಸಿ, ಫಲ ಮಂತ್ರಾಕ್ಷತೆ ನೀಡಿದರು.
ಇವರೊಂದಿಗೆ ಉಡುಪಿಯ ಲಾತವೀಯ ಆಚಾರ್, ವಾದಿರಾಜ ಪಿಜತ್ತಾಯ ಉಡುಪಿ ಆಗಮಿಸಿದ್ದರು. ಮಠದ ಗುರುಪ್ರಸಾದ್ ಭಟ್, ರವೀಂದ್ರ ಭಟ್, ವೇಣುಗೋಪಾಲ ಶಾಸ್ತ್ರೀ , ರಾಜಶೇಖರ ಭಟ್, ಪ್ರಜ್ವಲ್ ಭಟ್, ಕುಕ್ಕೆ ದೇವಸ್ಥಾನದ ನಿವೃತ್ತ ಶಿಷ್ಟಾಚಾರ ಅಧಿಕಾರಿ ಎ. ವೆಂಕಟ್ರಾಜ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ