ನೇಜಿ ನಾಟಿಗೆ ಗಂಗಾವತಿಯ ಕೃಷಿ ಕಾರ್ಮಿಕರು


Team Udayavani, Jul 30, 2018, 10:05 AM IST

30-july-1.jpg

ಬಜಪೆ: ಮಳೆಯಿಂದಾಗಿ ಜಿಲ್ಲೆಯಲ್ಲಿ ಭತ್ತ ಬೇಸಾಯಕ್ಕೆ ಅಪಾರ ಹಾನಿಯಾಗಿದ್ದರೂ ಕಳೆದ ಒಂದು ವಾರದಿಂದ ಮಳೆ ಕೊಂಚ ಕಡಿಮೆಯಾಗಿದ್ದರಿಂದ ಕೃಷಿ ಚಟುವಟಿಕೆ ಬಿರುಸು ಗೊಂಡಿದೆ. ಈ ನಡುವೆ ಕೃಷಿ ಕಾರ್ಮಿಕರ ಕೊರತೆ ಎದುರಾಗಬಹುದು ಎಂಬ ಆತಂಕದಲ್ಲಿದ್ದ ರೈತರಿಗೆ ನೆರವಾಗಲು ಗಂಗಾವತಿಯ ಕಾರ್ಮಿಕ ತಂಡ ಬಂದಿದೆ.

125 ಕಾರ್ಮಿಕರು
ನೇಜಿ ನಾಟಿಗೆ ಕೊಪ್ಪಳದ ಗಂಗಾವತಿ ಪರಿಸರದ ಸುಮಾರು 125 ಕೃಷಿ ಕಾರ್ಮಿಕರ ಪಡೆ ಜೂ. 28ರಂದು ಜಿಲ್ಲೆಗೆ ಆಗಮಿಸಿದೆ. ಈ ತಂಡದಲ್ಲಿ 4 ಮಂದಿ ಮೇಸ್ತ್ರಿ (ಮೇಲ್ವಿಚಾರಕರು)ಗಳಿದ್ದಾರೆ. 15 ಕಾರ್ಮಿಕರ ಒಂದು ತಂಡ ಮಾಡಿ ಒಟ್ಟು 8 ತಂಡಗಳು ತಾಲೂಕಿನದ್ಯಾಂತ ಭತ್ತದ ನಾಟಿ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನಾಟಿ ಮಾಡುವ ಕೃಷಿ ಕಾರ್ಮಿಕ ರಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

50 ಎಕರೆ ಭತ್ತದ ನಾಟಿ
ಈ ತಂಡ ಈಗಾಗಲೇ ಮಂಗಳೂರು ತಾಲೂಕಿನ 50 ಎಕ್ರೆ ಭತ್ತದ ನಾಟಿಯನ್ನು ಮಾಡಿ ಮುಗಿಸಿದೆ. 8ದಿನಗಳಲ್ಲಿ 29 ಎಕ್ರೆ ಭತ್ತದ ನಾಟಿ ಮಾಡಿದೆ. ಕೆಲವು ಕೃಷಿ ಕಾರ್ಮಿಕರು ಸರಕಾರದ ವತಿ ಯಿಂದ ಮನೆ ನಿರ್ಮಾಣ ಕಾರ್ಯನಿಮಿತ್ತ ಊರಿಗೆ ತೆರಳಿದ್ದಾರೆ. ಬಳಿಕ 7 ಮಂದಿಯ ತಂಡಗಳು 9 ದಿನಗಳಲ್ಲಿ 21 ಎಕರೆ ಜಾಗ ನಾಟಿ ಮಾಡಿದೆ.

ಒಂದು ಎಕ್ರೆ ಜಾಗ ನಾಟಿಗೆ 4 ಸಾವಿರ ರೂ.
ಒಂದು ಎಕ್ರೆ ಜಾಗ ನಾಟಿ ಕಾರ್ಯಕ್ಕೆ ಒಟ್ಟು 4,000 ರೂ. ಮಾಜೂರಿಯಾಗುತ್ತದೆ. ಅವರಿಗೆ ಚಹಾ ಕೊಟ್ಟರೆ ಸಾಕು. ಇದರಿಂದ ಇಲ್ಲಿನ ರೈತರು ಈ ತಂಡದಿಂದ ಭತ್ತದ ನಾಟಿ ಮಾಡಿಸಲು ಮುಂದಾಗಿದ್ದಾರೆ. ಇಲ್ಲಿನ 22ಮಂದಿ ಕೃಷಿ ಕಾರ್ಮಿಕರು ದಿನಕ್ಕೆ ಒಂದು ಎಕ್ರೆ ಜಾಗ ನಾಟಿ ಮಾಡುತ್ತಾರೆ. ಅವರಿಗೆ ದಿನಕ್ಕೆ 350 ರೂಪಾಯಿ ಮಜೂರಿ ಮತ್ತು ಊಟ, 2 ಬಾರಿ ಚಹಾ ನೀಡಬೇಕು. ಒಟ್ಟು ಎಕರೆಗೆ ಸುಮಾರು 7,500 ರೂಪಾಯಿ ಮಜೂರಿಯಾ ಗುತ್ತದೆ. ಈಗ ಇಲ್ಲಿ ಕೃಷಿ ಕಾರ್ಮಿಕರೇ ಸಿಗುತ್ತಿಲ್ಲ ಎನ್ನುತ್ತಾರೆ ರೈತರು. ಗಂಗಾವತಿಯ ಈ 7 ಮಂದಿಯ ತಂಡ ಒಂದು ದಿನ 2 ಎಕರೆ ಜಾಗ ನಾಟಿ ಮಾಡುತ್ತದೆ. ಅವರಿಗೆ ಸಮಯವೂ ನಿಗದಿ ಇಲ್ಲ. ಬೆಳಗ್ಗೆ ಬೇಗ ಬರುತ್ತಾರೆ.

ರೈತರಲ್ಲಿ ತೃಪ್ತಿ
ಕೃಷಿ ಕಾರ್ಮಿಕರನ್ನು ಹುಡುಕುವ ಚಿಂತೆ ಈಗ ರೈತರಿಗಿಲ್ಲ. ಈಗಾಗಲೇ ಈ ತಂಡ ಎಲ್ಲೆಡೆ ನಾಟಿ ಮಾಡಲು ಸಿದ್ಧವಾಗಿದೆ. ಭತ್ತದ ನಾಟಿಯಲ್ಲಿ ಕೊಂಚ ಬದಲಾವಣೆ ಇದ್ದರೂ ಇಲ್ಲಿನ ರೈತರಿಗೆ ತೃಪ್ತಿ ತಂದಿದೆ.

ಯಂತ್ರದ ಮೂಲಕ ಕಟಾವು
3.5 ಎಕ್ರೆ ಭತ್ತ ಬಿತ್ತನೆ ಮಾಡಿದ್ದೇವು. 2.5 ಎಕ್ರೆ ಜಾಗದ ಬಿತ್ತನೆ ನೆರೆಯಿಂದ ಕೊಚ್ಚಿ ಹೋಗಿ ನಷ್ಟವಾಗಿದೆ. ಭತ್ತ ನಾಟಿ ಮಾಡುವ ಕಾರ್ಯ ತುರ್ತು ಆಗಬೇಕಾಗಿದೆ. ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಬೆಳೆಗೆ ನಾಟಿ ಮಾಡಲು ಇವರನ್ನು ಕರೆಸಲಾಗಿತ್ತು. ಮೊಹಂತೇಷ್‌ ಎಂಬವರು ಈ ತಂಡವನ್ನು ಇಲ್ಲಿಗೆ ಕಳುಹಿಸಿದ್ದಾರೆ. ಅವರೇ ಕಟಾವು ಯಂತ್ರ ತಂದು ಕಟಾವು ಮಾಡಿ ಕೊಡುತ್ತಿದ್ದಾರೆ. ಇದರಿಂದ ನಮಗೆ ಕೃಷಿ ಕಾರ್ಯಕ್ಕೆ ತೊಂದರೆಯಾಗಿಲ್ಲ.  
– ಸದಾನಂದ ಮೊಯಿಲಿ
ಗಾಣದಕೊಟ್ಟೆ, ಕೃಷಿಕ, ಎಕ್ಕಾರು

ಹಲವೆಡೆ ನಾಟಿ ಕಾರ್ಯ
ಈ ಅವಧಿಯಲ್ಲಿ ಕೊಪ್ಪಳದಲ್ಲಿ ಗಂಡಸರಿಗೆ ಮಾತ್ರ ಕೆಲಸವಿರುತ್ತದೆ. ಹೆಂಗಸರಿಗೆ ಕೆಲಸ ಕಡಿಮೆ. ಗದ್ದೆಯಲ್ಲಿ ಗಂಡಸರು ಕೆಲಸ ಮಾಡಿರುತ್ತಾರೆ. ಅಲ್ಲಿ ಹೆಚ್ಚಾಗಿ ಒಣ ಬೇಸಾಯ. ಸ್ವಲ್ಪ ಮಳೆ ಬಂದಿದೆ. ಈಗಾಗಲೇ ಒಮ್ಮೆ ಉಳುಮೆ ಮಾಡಿ ಇಲ್ಲಿ ಬಂದಿದ್ದೇವೆ. ಕಳೆದ ಬಾರಿಯೂ ಇಲ್ಲಿ ನಾಟಿ ಮಾಡಲು ಬಂದಿದ್ದೆವು. ಏಳಿಂಜೆಯಲ್ಲಿ ಈಗ ವಾಸವಾಗಿದ್ದೀವೆ. ಈ ಪರಿಸರದ ಹಲವು ಊರಿನಲ್ಲಿ ಈಗಾಗಲೇ ನಾಟಿ ಕಾರ್ಯ ಮುಗಿಸಿದ್ದೇವೆ.
– ರಾಮನ್‌, ತಂಡದ ಮೇಸ್ತ್ರಿ 

 ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.