ಭಾರತೀಯ ಶಿಕ್ಷಣ ಪರಂಪರೆಯನ್ನು ಉಳಿಸಲು ಆರಂಭವಾದ ಶಾಲೆಗೀಗ 103ರ ಸಂಭ್ರಮ

ಹಿಂದೂ ಶಿಕ್ಷಣ ಸಂಸ್ಕೃತಿ, ಸಾರ್ವಭೌಮತ್ವವನ್ನು ರಕ್ಷಿಸಲು ಎದ್ದು ನಿಂತ ಮಹಾನ್‌ ಶಕ್ತಿ

Team Udayavani, Nov 7, 2019, 4:20 AM IST

qq-25

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

1916 ಶಾಲೆ ಆರಂಭ
1924ರಲ್ಲಿ ಹಿರಿಯ ಪ್ರಾಥಮಿಕ ಶಾಲೆ

ಸುರತ್ಕಲ್‌: 1915ನೇ ಇಸವಿಯಲ್ಲಿ ಕ್ರೈಸ್ತ ಮಿಷನರಿಗಳು ತಮ್ಮದೇ ಶಿಕ್ಷಣವನ್ನು ಉತ್ತೇಜಿಸುತ್ತಿದ್ದರು. ಈ ಸಂದರ್ಭ ಸುರತ್ಕಲ್‌ ಗ್ರಾಮದಲ್ಲಿ ಊರ ಪ್ರಮುಖರು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ತಮ್ಮ ಶಿಕ್ಷಣಾಭಿವೃದ್ಧಿಯ ಉದ್ದೇಶವನ್ನು ಕಾರ್ಯಗತಗೊಳಿಸಲು ಯೋಜನೆ ಹಾಕಿದರು. ಇದರ ಫ‌ಲವಾಗಿ ಹಿಂದೂ ವಿದ್ಯಾದಾಯಿನಿ ಸಂಘವು ನ. 30, 1916ರಂದು ಸ್ಥಾಪನೆಗೊಂಡು ಹಿಂದೂ ವಿದ್ಯಾದಾಯಿನಿ ಪ್ರಾಥಮಿಕ ಶಾಲೆ ಆರಂಭಗೊಂಡಿತು. ಇದೀಗ 336 ವಿದ್ಯಾರ್ಥಿಗಳ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ.

ಮೊದಲ ತರಗತಿಯಲ್ಲಿ 64 ವಿದ್ಯಾರ್ಥಿಗಳು
ನೂರು ವರ್ಷಗಳ ಹಿಂದೆ ಸುರತ್ಕಲ್‌ ಪ್ರದೇಶದ ಸುತ್ತಮುತ್ತ ಶಾಲೆಗಳೇ ಇರಲಿಲ್ಲ. ವಿದ್ಯಾದಾಯಿನಿ ಶಾಲೆಯಲ್ಲಿ 1916-17ರಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ 64. ತರಗತಿಗಳು ಐದು ಇದ್ದವು. ಈ ಶಾಲೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋಪುರದಲ್ಲಿ ಒಂದು ತಿಂಗಳು ಕಾರ್ಯನಿರ್ವಹಿಸಿ ಅನಂತರ ಬೇರೆ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ದಿ| ಕೃಷ್ಣಯ್ಯ ಅವರು ಅಧ್ಯಕ್ಷರಾಗಿ, ದಿ| ಪಿ. ಶಾಮ ರಾವ್‌ ಉಪಾಧ್ಯಕ್ಷರಾಗಿ , ದಿ| ಎಚ್‌.ರಾಮರಾವ್‌ ಕಾರ್ಯದರ್ಶಿಗಳಾಗಿ ಪಣಂಬೂರು ಶ್ರೀನಿವಾಸ ರಾವ್‌ ಕೋಶಾ ಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಇವರ ಬೆಂಬಲವಾಗಿ ನೂರಾರು ಮಹನೀಯರು ನಿಂತು ಈ ಶಾಲೆಯನ್ನು ಬೆಳೆಸಿದ್ದಾರೆ.

ಸುರತ್ಕಲ್‌, ಹೊಸಬೆಟ್ಟು, ಕುಳಾಯಿ, ಬೈಕಂಪಾಡಿ ಸಹಿತ ಸುತ್ತಮುತ್ತಲಿನ ಮಕ್ಕಳು ಈ ಶಾಲೆಯಲ್ಲಿ ಓದು, ಬರಹ, ಲೆಕ್ಕ, ಸಂಸ್ಕೃತ, ಶಾರೀರಿಕ, ಮಾನಸಿಕ ವಿದ್ಯಾಭ್ಯಾಸ ಪಡೆಯಲು ಇಲ್ಲಿ ಅವಕಾಶವಿತ್ತು. 1918ರಲ್ಲಿ ವಿದ್ಯಾ ಇಲಾಖೆ ಮಂಜೂರಾತಿ ನೀಡಿತು. 1924ರಲ್ಲಿ 8 ತರಗತಿಗಳ ಹಿರಿಯ ಪ್ರಾಥಮಿಕ ಶಾಲೆಯಾಯಿತು. ವಿದ್ಯಾರ್ಥಿಗಳ ಸಂಖೆ ವರ್ಷದಿಂದ ವರ್ಷಕ್ಕೆ ಏರತೊಡಗಿದಂತೆಯೇ ಕಟ್ಟಡ ಚಿಕ್ಕದಾಗಿ ಬಹಳಷ್ಟು ಪರಿಶ್ರಮದ ಬಳಿಕ ವಿದ್ಯಾಭಿಮಾನಿಗಳಾದ ದಿ| ಪಿ.ಕೆ. ಶ್ರೀನಿವಾಸ ರಾವ್‌, ಮಹಾಲಕ್ಷ್ಮೀ ಮುಮ್ಯೂರು ದಾನ ಮಾಡಿದ ಜಾಗದಲ್ಲಿ ಶಾಲೆ ತಲೆ ಎತ್ತಿದೆ.

ಅಂದೇ ಸ್ಥಾಪಿಸಿದ್ದ ವೃತ್ತಿ ಶಿಕ್ಷಣ!
ವಿದ್ಯಾದಾಯಿನೀ ಸಂಸ್ಥೆ ಈ ಹಿಂದೆಯೇ ವೃತ್ತಿ ಶಿಕ್ಷಣದ ಮಹತ್ವ ಅರಿತಿತ್ತು. ನೂಲುವುದು, ನೇಯುವಿಕೆಗೆ ಬೇಕಾದ ಚರಕ, ಮಗ್ಗ ಒದಗಿಸಿ ವೃತ್ತಿಯ ಉಪಾಧ್ಯಾಯ ರನ್ನು ನೇಮಿಸಿತ್ತು. ಶಾಲೆಯ ಜಾಗದಲ್ಲಿ ಅಂದು ನೆಟ್ಟು ಬೆಳೆಸಿದ ಮಾವು,ಹಲಸು ಮತ್ತಿತರ ಮರಗಳು ಶತಮಾನವನ್ನು ಕಂಡಿವೆ. ಈ ಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರು ಇಡ್ಯಾ ನಾರಾಯಣ ರಾವ್‌(1916-18), ಬಳಿಕ ಡಾ| ಎಚ್‌.ಲಕ್ಷ್ಮೀನಾರಾಯಣ ರಾವ್‌ (1918-20), ಸು ಧೀರ್ಘ‌ ಕಾಲ ಮುಖ್ಯ ಶಿಕ್ಷಕರಾಗಿ ದುಡಿದವರು ಎಚ್‌.ದಾಮೋದರ ರಾವ್‌(1920-57), ಹೀಗೆ ಒಟ್ಟು 16 ಮುಖ್ಯ ಶಿಕ್ಷಕರನ್ನು ಕಂಡಿದೆ. ಒಟ್ಟು 336 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.ಇದೀಗ ಮುಖ್ಯೋಪಾಧ್ಯಾಯರಾಗಿ ಶಾಂತಾ ಸೇವೆ ನಿರ್ವಹಿಸುತ್ತಿದ್ದಾರೆ.ವಿದ್ಯಾದಾಯಿನೀ ಹಿರಿಯ ಪ್ರಾಥಮಿಕ ಶಾಲೆ ದೇಶಕ್ಕೆ ಹಲವಾರು ಮಹನೀಯರನ್ನು ಸೇವೆಗೆ ಅರ್ಪಿಸಿದೆ.

ಬಾಂಬೆ ಹೈಕೋರ್ಟ್‌ನ ನಿವೃತ್ತ ಜಡ್ಜ್ ವಿಶ್ವನಾಥ್‌ ಶೆಟ್ಟಿ, ಉದ್ಯಮಿ ಕೆ.ನಾರಾಯಣ್‌, ಕಲಾ ಕ್ಷೇತ್ರದ ಅಗರಿ ರಘುರಾಮ ಭಾಗವತ ಸಹಿತ ಇಲ್ಲಿ ಕಲಿತ ಹಲವರು ರಾಜಕೀಯ, ಕಲೆ, ಸಂಸ್ಕೃತಿ, ಕಾನೂನು ಮೊದಲಾದ ರಂಗದಲ್ಲಿ ವಿವಿಧ ಸಾಧನೆಯನ್ನು ಮಾಡಿದ್ದಾರೆ.
ಮುಖ್ಯಮಂತ್ರಿ ಜಿಲ್ಲೆಗೆ 11ನೇ ಸ್ಥಾನ ಗಳಿಸಿ ಶಾಲೆಗೊಂದು ಘನತೆ ಬಂದಿತ್ತು.”

ಜೀವನ ಪದ್ದತಿಯ ಶಿಕ್ಷಣ
ವಿದ್ಯಾದಾಯಿನೀ ಶಾಲೆಯಲ್ಲಿ ಕೇವಲ ವಿದ್ಯೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಜೀವನ ಪದ್ದತಿಯ ಶಿಕ್ಷಣ ಇಲ್ಲಿ ಆರಂಭವಾಗಿತ್ತು. ನಾಟಕಾಭಿನಯ, ಕಾವ್ಯವಾಚನ,ಯಕ್ಷಗಾನ, ಭಜನೆ, ಕೈ ಬರಹದ ಪತ್ರಿಕೆ, ಗರಡಿ ಶಿಕ್ಷಣದಂತಹ ಬಹುಮುಖೀ ಚಟುವಟಿಕೆ ಇಲ್ಲಿ ಇತ್ತು. 1938ರಲ್ಲಿ ಬಡವರ್ಗಕ್ಕೆ ಮಧ್ಯಾಹ್ನ ಉಚಿತ ಭೋಜನದ ವ್ಯವಸ್ಥೆಯಿತ್ತು.ಇಂದು ಉತ್ತಮ ಶಿಕ್ಷಣದ ಜತೆಗೆ ಈ ಎಲ್ಲ ಚಟುವಟಿಕೆಗಳು ಇಂದಿಗೂ ಮುಂದುವರಿದಿದೆ.

ಶಿಕ್ಷಣವೆಂದರೆ ಕೇವಲ ಪಠ್ಯ ಪುಸ್ತಕವಲ್ಲ. ಮಕ್ಕಳ ದೈಹಿಕ ಮಾನಸಿಕ ಬೌದ್ಧಿಕ ವಿಕಾಸವಾಗಿದೆ.ವಿದ್ಯಾ ಸಂಸ್ಥೆಯು ನಿಂತ ನೀರಾಗದೆ ತೊರೆಯಾಗಿ ಝರಿಯಾಗಿ ಹರಿದು ಹಲವರ ಜೀವನದ ಸುಧೆಯಾಗಿದೆ.ಇಂತಹ ಸಂಸ್ಥೆ ಇನ್ನೂ ಬೆಳೆಯಲಿ ಎಂಬುದೇ ನನ್ನ ಆಶಯ.
ಶಾಂತಾ, ಪ್ರಭಾರ ಮುಖ್ಯಶಿಕ್ಷಕಿ

ನಾನು ಈ ಹಳೆಯ ವಿದ್ಯಾರ್ಥಿ ಯಾಗಿತ್ತು. ಇಂದು ವೈದ್ಯನಾಗಿ ಬೆಳೆಯಲು ಅವಕಾಶವಾಗಿದ್ದರೆ ಈ ಶಾಲೆಯ ಕೊಡುಗೆಯೂ ಇದೆ ಎಂಬುದನ್ನು ಮನತುಂಬಿ ಹೇಳುತ್ತೇನೆ.
ಡಾ| ಗುರುರಾಜ್‌, ಕಣ್ಣಿನ ತಜ್ಞ ವೈದ್ಯರು ಸುರತ್ಕಲ್‌

- ಲಕ್ಷ್ಮೀ ನಾರಾಯಣ ರಾವ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEW-SCHOOL

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್‌ ಪ್ರೌಢಶಾಲೆಗೆ 121ರ ಸಂಭ್ರಮ

430514561342IMG-20191203-WA0023

ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ

sx-22

ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ

ds-24

112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ds-35

ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.