ಪವಿತ್ರಾತ್ಮ ಅಭಿಷೇಕೋತ್ಸವಕ್ಕೆ ಬಿಷಪ್ ಚಾಲನೆ
Team Udayavani, Aug 7, 2017, 7:30 AM IST
ಮಂಗಳೂರು: ಕ್ರೈಸ್ತ ಧರ್ಮದಲ್ಲಿ ಧ್ಯಾನ ಕೂಟಕ್ಕೆ ವಿಶಿಷ್ಟ ಮಹತ್ವವಿದ್ದು, ಕೆಥೋಲಿಕ್ ಕ್ಯಾರಿಸ್ಮಾಟಿಕ್ (ಆಧ್ಯಾತ್ಮಿಕ) ನವೀಕರಣಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ. ಇದರಂಗವಾಗಿ ಕರ್ನಾಟಕ ರಾಜ್ಯ ಮಟ್ಟದ ಕೆಥೋಲಿಕ್ ಕ್ಯಾರಿ ಸ್ಮಾಟಿಕ್ ಧ್ಯಾನಕೂಟ “ಪವಿತ್ರಾತ್ಮ ಅಭಿ ಷೇಕೋತ್ಸವ- 2017′ ನಾಲ್ಕು ದಿನ ಗಳ ಕಾಲ ಮಂಗಳೂರಿನ ರೊಜಾರಿಯೋ ಕೆಥೆಡ್ರಲ್ನಲ್ಲಿ ನವೆಂಬರ್ ನಲ್ಲಿ ನಡೆಯಲಿದೆ. ಅದರ ಲಾಂಛನ ವನ್ನು ಬಿಷಪ್ ಅಲೋಶಿ ಯಸ್ ಪಾವ್É ಡಿ’ಸೋಜಾ ಅವರು ರವಿ ವಾರ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನವೆಂಬರ್ 9ರಿಂದ 12ರ ತನಕ ರೊಜಾರಿಯೋ ಕೆಥೆಡ್ರಲ್ ಮೈದಾನ ದಲ್ಲಿ ನಡೆಯಲಿರುವ ಈ ಕಾರ್ಯ ಕ್ರಮದಲ್ಲಿ ಕರ್ನಾಟಕದ 14 ಧರ್ಮ ಪ್ರಾಂತಗಳ 500 ಮಂದಿಗೆ ತರಬೇತಿ ನೀಡಲಾಗುವುದು. ಸಂಜೆ 4ರಿಂದ 8ರ ತನಕ ಧ್ಯಾನ ಕೂಟ ಜರಗಲಿದ್ದು, ದಿನಂಪ್ರತಿ ಸುಮಾರು 10,000 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜ್ಯದ ಎಲ್ಲ ಬಿಷಪರು ಪಾಲ್ಗೊಳ್ಳುವರು ಎಂದು ಬಿಷಪ್ ರೈ| ರೆ| ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ತಿಳಿಸಿದರು.
ಆಧ್ಯಾತ್ಮಿಕ ನವೀಕರಣ
ಆಧ್ಯಾತ್ಮಿಕ ನವೀಕರಣ ಬಯ ಸುವ ಕ್ರೈಸ್ತರಿಗೆ ಈ ಧ್ಯಾನ ಕೂಟ ಸಹಾ ಯಕ ವಾಗಲಿದೆ. ದೇವರ ಪ್ರೀತಿಗೆ ಪಾತ್ರ ವಾಗಲು, ಬದುಕಿನಲ್ಲಿ ನೆಮ್ಮದಿ ಮತ್ತು ಶಾಂತಿಯನ್ನು ಪಡೆದು ಆರೋಗ್ಯಪೂರ್ಣ ಜೀವನ ನಡೆಸಲು ಇದು ಪೂರಕವಾಗಲಿದೆ ಎಂದು ಹೇಳಿದ ಬಿಷಪ್ ಈ ಧ್ಯಾನ ಕೂಟದ ಮೂಲಕ ಕುಟುಂಬದಲ್ಲಿ, ಸಮಾಜದಲ್ಲಿ, ಪರಿಸರದಲ್ಲಿ ಶಾಂತಿ ನೆಲೆಸಲಿ ಎಂದು ಶುಭ ಹಾರೈಸಿದರು.
ಧ್ಯಾನಕೂಟ ಸಂಚಾಲಕ ಫಾ| ಒನಿಲ್ ಡಿ’ಸೋಜಾ ಪ್ರಸ್ತಾ ವನೆಗೈದು ಕಾರ್ಯಕ್ರಮದ ಯಶಸ್ಸಿಗೆ ಮಂಗಳೂರು ಧರ್ಮ ಪ್ರಾಂತದ ಎಲ್ಲ 117 ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಗಳು ಇಂದಿ ನಿಂದಲೇ ಆರಂಭವಾಗಿವೆ ಎಂದರು.
ಧ್ಯಾನ ಕೂಟದ ಪ್ರಾದೇಶಿಕ ಸೇವಾ ಸಮಿತಿಯ ಅಧ್ಯಕ್ಷ ಅರುಣ್ ಲೋಬೊ ಸ್ವಾಗತಿಸಿದರು. ಉಪಾಧ್ಯಕ್ಷರಾದ ಬರ್ಡಿ ಮಸ್ಕರೇನ್ಹಸ್, ಕಾರ್ಯದರ್ಶಿ ಎಲಿಯಾಸ್ ಕುವೆಲ್ಲೊ, ರಾಜ್ಯ ಸಮಿತಿ ಕಾರ್ಯ ದರ್ಶಿ ಡೋಲ್ಫಿ ಲೋಬೋ, ಫೋರ್ ವಿಂಡ್ಸ್ ಮಾಸ್ ಕಮ್ಯೂನಿಕೇಶನ್ನ ನಿರ್ದೇಶಕ ಇ. ಫೆರ್ನಾಂಡಿಸ್ ಉಪಸಿœತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್