ಕಡಬಕ್ಕೆ ಸುಸಜ್ಜಿತ ಸರಕಾರಿ ಬಸ್ ನಿಲ್ದಾಣ ತುರ್ತು ಅಗತ್ಯ
Team Udayavani, Mar 19, 2017, 3:26 PM IST
ಕಡಬ : ಉಪ್ಪಿನಂಗಡಿ ಪಟ್ಟಣ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ನಡುವೆ ಇರುವ ಕಡಬ ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲ. ಬಸ್ ಗಳು ರಸ್ತೆ ಪಕ್ಕದಲ್ಲೇ ನಿಂತು ಪ್ರಯಾಣಿಕರನ್ನು ಇಳಿಸುವ ಮತ್ತು ಹತ್ತಿಕೊಳ್ಳುವ ಪ್ರಕ್ರಿಯೆಯನ್ನು ನಡೆಸುತ್ತಿವೆ. ಹಾಗಾಗಿ ರಸ್ತೆಯೇ ಬಸ್ ನಿಲ್ದಾಣವೆಂದು ಪರಿಗಣಿಸಲಾಗಿದೆ.
ಕಡಬವು ಹೋಬಳಿ ಕೇಂದ್ರವಾಗಿ ವಿಶೇಷ ತಹಶೀಲ್ದಾರ್ ಕಚೇರಿ ಹೊಂದಿತ್ತು. ಈಗ ತಾಲೂಕು. ಹೋಬಳಿ ಕೇಂದ್ರವಾಗಿದ್ದರಿಂದ ಸುತ್ತಲಿನ ಗ್ರಾಮಗಳ ಜನರು ಕಂದಾಯ ಇಲಾಖಾ ಕೆಲಸಗಳು ಹಾಗೂ ಇತರ ವ್ಯವಹಾರಗಳಿಗಾಗಿ ಕಡಬ ಪೇಟೆಗೇ ಬರಬೇಕು. ಇದರಿಂದ ನಿತ್ಯವೂ ಸಾವಿರಾರು ಮಂದಿಯ ಭೇಟಿ ಇದ್ದೇ ಇರುತ್ತದೆ. ದಿನಂಪ್ರತಿ ಇಲ್ಲಿನ ಕೆಎಸ್ಆರ್ಟಿಸಿ ಸಂಚಾರ ನಿಯಂತ್ರಕರ ಕೇಂದ್ರದಲ್ಲಿ ಸುಮಾರು 120ಕ್ಕೂ ಹೆಚ್ಚು ಬಸ್ ಟ್ರಿಪ್ಗ್ಳು ದಾಖಲಾಗುತ್ತವೆ. ಆದರೂ ಬಸ್ ನಿಲ್ದಾಣವನ್ನು ಕಲ್ಪಿಸದಿರುವುದು ದೊಡ್ಡ ಕೊರತೆಯಾಗಿದೆ.
ಜಮೀನು ಕಾದಿರಿಸಿದೆ
ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಜಮೀನು ಒದಗಿಸುವಂತೆ ಕೆಎಸ್ಆರ್ಟಿಸಿ ಹಲವು ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಜಮೀನು ಸಿಕ್ಕಿರಲಿಲ್ಲ. ಕಡಬದ ಕೆರೆಯ ಒಂದು ಭಾಗವನ್ನು ಬಸ್ ನಿಲ್ದಾಣಕ್ಕೆ ಉಪಯೋಗಿಸುವ ಪ್ರಯತ್ನವೂ ಫಲ ನೀಡಿರಲಿಲ್ಲ. ಇದೀಗ ಕೊನೆಗೂ ಅಂಬೇಡ್ಕರ್ ಭವನದ ಬಳಿ 1.73 ಎಕ್ರೆ ಜಮೀನನ್ನು ಕಂದಾಯ ಇಲಾಖೆಯವರು ಕಾದಿರಿಸಿದ್ದಾರೆ. ಕೆಎಸ್ಆರ್ಟಿಸಿ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಜಾಗವನ್ನು ಪರಿಶೀಲಿಸಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಕೆಲವು ವರ್ಷಗಳಲ್ಲಿ ಸುಸಜ್ಜಿತ ಸರಕಾರಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಆದರೆ ಅದು ಸಾಧ್ಯವಾಗುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯನ್ನು ಅವಲಂಬಿಸಿದ್ದು ಎನ್ನುತ್ತಾರೆ ನಾಗರಿಕರು.
ಪರಿಶೀಲಿಸ ಲಾಗಿದೆ
ಕಾದಿರಿಸಿದ ಜಮೀನು ಬಸ್ ನಿಲ್ದಾಣಕ್ಕೆ ಸೂಕ್ತವೇ ಎಂದು ನಿಗಮದ ಜಿಲ್ಲಾ ಮಟ್ಟದ ಅಧಿಕಾರಿಯವರು ಪರಿಶೀಲಿಸುವರು. ಬಳಿಕ ಜಮೀನು ನಿಗಮಕ್ಕೆ ವರ್ಗಾವಣೆಯಾದ ಕೂಡಲೇ ಮುಂದಿನ ಕಾರ್ಯ ಆರಂಭವಾಗಲಿದೆ.
– ದಿವಾಕರ ಎಸ್.ಯರಗೊಪ್ಪ, ಎಇಇ, ಕೆಎಸ್ಆರ್ಟಿಸಿ,
ಪುತ್ತೂರು ವಿಭಾಗ
– ನಾಗರಾಜ್ ಎನ್.ಕೆ. ಕಡಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ