ಹೊಸ ಕಾರಿನಲ್ಲಿ ನ್ಯೂನತೆ ಪರಿಹಾರ ನೀಡಲು ಗ್ರಾಹಕ ವೇದಿಕೆ ಆದೇಶ
Team Udayavani, Apr 11, 2018, 8:01 AM IST
ಮಂಗಳೂರು: ಹೊಸ ಕಾರಿನಲ್ಲಿ ನ್ಯೂನತೆ ಕಂಡು ಬಂದ ಗ್ರಾಹಕನಿಗೆ 9.23ಲಕ್ಷ ರೂ. ಪಾವತಿ ಮಾಡುವಂತೆ ಗ್ರಾಹಕರ ವೇದಿಕೆ ಆದೇಶ ಮಾಡಿದೆ.
ಮಂಗಳೂರಿನ ನ್ಯಾಯವಾದಿ, ನೋಟರಿ ಇಸ್ಮಾಯಿಲ್ ಸುಣ್ಣಾಲ್ 2014ರ ಫೆ.26ರಂದು ಮಂಗಳೂರಿನ ರೆನೋ ಡಸ್ಟರ್ನ ಅಧಿಕೃತ ಡೀಲರ್ ಸಂಸ್ಥೆಯೊಂದರಿಂದ 8.65ಲಕ್ಷ ರೂ. ಬೆಲೆ ಪಾವತಿಸಿ ಡಸ್ಟರ್ ಕಾರೊಂದನ್ನು ಖರೀದಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಬಗ್ಗೆ ಸರ್ವಿಸ್ ಸ್ಟೇಷನನ್ನು ಸಂಪರ್ಕಿಸಿದಾಗ ಹಣ ಪಾವತಿಸಲು ತಿಳಿಸಿದ್ದಾರೆ. ವಾರಂಟಿ ಅವಧಿಯಲ್ಲಿ ನ್ಯೂನತೆ ಕಂಡು ಬಂದ ಹಿನ್ನಲೆಯಲ್ಲಿ ತಾನು ಹಣ ಪಾವತಿಸುವುದಿಲ್ಲ ಎಂದು ಇಸ್ಮಾಯಿಲ್ ತಿಳಿಸಿದ್ದಾರೆ. ಇದಾದ ಬಳಿಕ ವಾರಂಟಿ ನೀಡಲು ನಿರಾಕರಿಸಿದ ಕಂಪನಿಯು, ಕಾರಿನ ಸಮಸ್ಯೆಗೆ ತಾತ್ಕಾಲಿಕ ತೇಪೆ ಹಾಕಿ ಕಳುಹಿಸಿದೆ.
ಕೆಲವೇ ದಿನಗಳಲ್ಲಿ ಕಾರಿನಲ್ಲಿ ಮತ್ತೆ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಕಂಪೆನಿಗೆ ತಿಳಿಸಿದರೆ ಕಾರು ಮಾರಾಟ ಮಾಡಿ ಎಂದು ತಿಳಿಸಿದ್ದಾರೆ. ಇದರಿಂದ ಮನನೊಂದ ಕಾರಿನ ಮಾಲಕ ಕಂಪನಿ ಪರಿಹಾರ ಕೊಡಿಸಬೇಕೆಂದು ವಕೀಲ ದೀನನಾಥ ಶೆಟ್ಟಿ ಅವರ ಮುಖೇನ ದ. ಕ. ಗ್ರಾಹಕರ ಪರಿಹಾರ ವೇದಿಕೆಯಲ್ಲಿ ಕೇಸು ದಾಖಲಿಸಿದರು.
ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಹಕರ ಪರಿಹಾರ ವೇದಿಕೆ ಪ್ರಕರಣದಲ್ಲಿ ಕಂಪೆನಿ ತಪ್ಪೆಸಗಿದೆ ಹಾಗಾಗಿ ಕಾರಿನ ಮಾಲಕರಿಗೆ ಸಂಪೂರ್ಣ ಖರೀದಿ ಮೌಲ್ಯ 8.65 ಲಕ್ಷ ರೂ. ಅದರೊಂದಿಗೆ ಕೋರ್ಟ್ ಖರ್ಚು ಬಾಬ್ತು 10 ಸಾವಿರ ರೂ., ರಿಪೇರಿಗೆ ಪಾವತಿಸಿದ 23 ಸಾವಿರ ರೂ., ಪರಿಹಾರವಾಗಿ 25 ಸಾವಿರ ರೂ. ಆದೇಶದ 30 ದಿನದೊಳಗಾಗಿ ಪಾವತಿಸುವಂತೆ ಸೂಚಿಸಿದೆ. ಇದಕ್ಕೆ ತಪ್ಪಿದಲ್ಲಿ ಸದ್ರಿ ಪರಿಹಾರದ ಮೊತ್ತವನ್ನು ದಾವಾ ದಿನಾಂಕದಿಂದ ಪಾವತಿ ದಿನಾಂಕದ ವರೆಗೆ ಶೇ. 8ರಂತೆ ಬಡ್ಡಿ ಸಮೇತ ಪಾವತಿಸುವಂತೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ