ಗುಜರಿ ವ್ಯವಹಾರಕ್ಕೂ ಆರ್ಥಿಕ ಕುಸಿತದ ಬಿಸಿ!

ಎಲ್ಲ ಸಾಮಗ್ರಿಗಳ ಬೆಲೆ ಅರ್ಧಕ್ಕರ್ಧ ಇಳಿಕೆ; ವ್ಯವಹಾರ ಸಂಕಷ್ಟದಲ್ಲಿ

Team Udayavani, Nov 23, 2019, 4:06 AM IST

tt-20

ಮಂಗಳೂರು: ಆರ್ಥಿಕ ಕುಸಿತದ ಪರಿಣಾಮ ಗುಜರಿ ಸಾಮಗ್ರಿಗಳ ಮೇಲೂ ಉಂಟಾಗಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಲ್ಕೈದು ತಿಂಗಳಿನಿಂದ ಎಲ್ಲ ಗುಜರಿ ಸಾಮಗ್ರಿಗಳ ಬೆಲೆ ಅರ್ಧಕ್ಕರ್ಧ ಇಳಿಕೆಯಾಗಿದ್ದು, ವ್ಯಾಪಾರ ಬಹುತೇಕ ನೆಲಕಚ್ಚಿದೆ. ಇದನ್ನು ವೃತ್ತಿಯಾಗಿಸಿಕೊಂಡ ಸುಮಾರು 50 ಸಹಸ್ರ ಜನರ ಬದುಕು ಹೈರಾಣಾಗುವ ಹಂತದಲ್ಲಿದೆ. ಗುಜರಿ ವ್ಯಾಪಾರವು ಸಂಗ್ರಾಹಕರಿಂದ ಹಿಡಿದು ಸಣ್ಣ, ಮಧ್ಯಮ, ದೊಡ್ಡ ವ್ಯಾಪಾರ- ಹೀಗೆ ಹಲವು ಹಂತಗಳಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದೆ. ಮಂಗಳೂರಿನಲ್ಲಿ 150ಕ್ಕೂ ಅಧಿಕ ಗುಜರಿ ಅಂಗಡಿಗಳಿವೆ.

ಗುಜರಿ ಎಲ್ಲಿಗೆ ಹೋಗುತ್ತದೆ?
ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ ಸಂಗ್ರಹವಾಗುವ ಗುಜರಿ ಸಾಮಗ್ರಿಗಳ ಪೈಕಿ ಕಾರ್ಟನ್‌ ಬಾಕ್ಸ್‌ (ರಟ್ಟಿನ ಪೆಟ್ಟಿಗೆ) ಮತ್ತು ಪೇಪರ್‌ ಮಂಗಳೂರಿನ ತಲಪಾಡಿ ಮತ್ತು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಹೋಗಿ ಸಂಸ್ಕರಣೆ ಆಗುತ್ತದೆ. ಹಳೆ ಕಬ್ಬಿಣದ ಸಾಮಗ್ರಿಗಳು ಗೋವಾ ಮತ್ತು ಮುಂಬಯಿಗೆ ಹೋದರೆ, ತಾಮ್ರ ಮತ್ತು ಹಿತ್ತಾಳೆ ಹುಬ್ಬಳ್ಳಿಗೆ ಸಾಗಾಟವಾಗುತ್ತದೆ. ಅಲ್ಲಿನ ಸಂಸ್ಕರಣ ಘಟಕಗಳಲ್ಲಿ ಸಂಸ್ಕರಣೆಯಾಗಿ ಮರುಬಳಕೆಯಾಗುತ್ತದೆ.

ಬೆಲೆ ಇಳಿಕೆಗೆ ಕಾರಣ ಏನು?
ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಿ ಆಗಿರುವ ಆರ್ಥಿಕ ಹಿಂಜರಿತ ಗುಜರಿ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಪ್ಲಾಸ್ಟಿಕ್‌ ನಿಷೇಧ ಆಗಿರುವುದರಿಂದ ಹಳೆ ಪೇಪರ್‌, ರಟ್ಟಿನ ಬಾಕ್ಸ್‌ ಮತ್ತಿತರ ಸಾಮಗ್ರಿಗಳ ದರ ಏರಬೇಕಿತ್ತು. ಆದರೆ ಹಾಗಾಗಿಲ್ಲ. ಗುಜರಿ ಸಾಮಗ್ರಿಗಳ ಸಂಸ್ಕರಣೆ ಮತ್ತು ಮರುಬಳಕೆ ಕಡಿಮೆಯಾಗಿದೆಯೇ ಅಥವಾ ಬೇರೆ ಕಾರಣ ಇದೆಯೇ ಎನ್ನುವುದು ತಿಳಿದು ಬಂದಿಲ್ಲ. ಜಿಎಸ್‌ಟಿ ಮತ್ತು ಸರಕಾರದ ವಿವಿಧ ನಿಯಮಗಳು, ದೊಡ್ಡ ಉದ್ಯಮಪತಿಗಳ ಪ್ರವೇಶ ಇತ್ಯಾದಿ ಕಾರಣಗಳನ್ನು ಗುಜರಿ ವ್ಯಾಪಾರಿಗಳು ನೀಡುತ್ತಾರೆ. ಆದರೆ ನೈಜ ಕಾರಣವೇನೆಂಬುದು ಮಾತ್ರ ಗೊತ್ತಾಗುತ್ತಿಲ್ಲ.

ನಗದು ಸಮಸ್ಯೆ?
ಈಗ ಜಿಎಸ್‌ಟಿ ಗುಜರಿ ವ್ಯಾಪಾರಕ್ಕೂ ಅನ್ವಯವಾ ಗುತ್ತಿದೆ. ಅದು ಜಾರಿಗೆ ಬಂದ ಬಳಿಕ ನಮಗೆ ನಗದು ಸಿಗುತ್ತಿಲ್ಲ. 2 ಸಾವಿರದಷ್ಟು ಕನಿಷ್ಠ ಮೊತ್ತವಾದರೂ ಬ್ಯಾಂಕ್‌ ಮೂಲಕವೇ ಬರಬೇಕು. ಚೆಕ್‌ ಆಗಿದ್ದರೆ ನಗದೀಕರಣಕ್ಕೆ 2-3 ದಿನ ಕಾಯಬೇಕು. ಚೆಕ್‌ ಪ್ರಸ್ತುತ ಪಡಿಸುವಾಗ ಆಧಾರ್‌ ಕಾರ್ಡ್‌ ನೀಡಬೇಕು. ಇದೆಲ್ಲವೂ ನಮಗೆ ಸಮಸ್ಯೆ ಎಂದು ಗುಜರಿ ವ್ಯಾಪಾರಿ ಖಲೀಲ್‌ ಮಾಲೆಮಾರ್‌ ತಿಳಿಸಿದ್ದಾರೆ.

ಗುಜರಿ ಉದ್ಯಮವು ಇತ್ತೀಚಿನ ದಿನಗಳಲ್ಲಿ ಒಂದೆಡೆ ಬೆಲೆ ಇಳಿಕೆಯಿಂದ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಪೈಪೋಟಿಯಿಂದ ನಷ್ಟ ಅನುಭವಿಸುತ್ತಿದೆ. ದೊಡ್ಡ ಉದ್ಯಮ ಸಂಸ್ಥೆಗಳ ಪ್ರವೇಶ, ಸರಕಾರದ ಹಲವು ನಿಯಮಗಳನ್ನು ಹೇರುತ್ತಿರುವುದು ಗುಜರಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜತೆಗೆ ವಿಪರೀತ ದರ ಇಳಿಕೆಯೂ ಆಗಿದೆ. ಇದರಿಂದಾಗಿ ಗುಜರಿಯವರ ಬದುಕು ಕೂಡ ಗುಜರಿಯಂತಾಗಿದೆ.
-ಖಲೀಲ್‌ ಮಾಲೆಮಾರ್‌, ಗುಜರಿ ವ್ಯಾಪಾರಿ

ಗುಜರಿ ಸಾಮಗ್ರಿಗಳಿಗೆ 5 ತಿಂಗಳ ಹಿಂದೆ ಇದ್ದ ಮತ್ತು ಈಗಿನ ದರಗಳನ್ನು ಹೋಲಿಸಿದಾಗ ಕುಸಿತದ ತೀವ್ರತೆ ಸ್ಪಷ್ಟವಾಗುತ್ತದೆ.

– ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

Mangaluru ಪ್ರಧಾನಿಯ ಕೈ ಸೇರಿದ ಕರಾವಳಿ ಕಲಾವಿದನ “ಆಯಿಲ್‌ ಕ್ಯಾನ್ವಾಸ್‌’

Mangaluru ಪ್ರಧಾನಿಯ ಕೈ ಸೇರಿದ ಕರಾವಳಿ ಕಲಾವಿದನ “ಆಯಿಲ್‌ ಕ್ಯಾನ್ವಾಸ್‌’

ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದೆ ಗಿಡಿಗೆರೆ ರಾಮಕ್ಕ ನಿಧನ

ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದೆ ಗಿಡಿಗೆರೆ ರಾಮಕ್ಕ ನಿಧನ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.