ಕೊಯ್ಯೂರು ಗ್ರಾಮದಲ್ಲಿ ಮಲ್ಲಿಗೆ ಆದಾಯದ ಘಮ

ಬೇಸಗೆಯಲ್ಲೂ ಊರಿನವರ ಕೈಹಿಡಿದ ಮಲ್ಲಿಗೆ ಕೃಷಿ

Team Udayavani, Apr 26, 2019, 6:00 AM IST

24

ಬೆಳ್ತಂಗಡಿ: ತಾಲೂಕಿನ ಕೊಯ್ಯೂರು ಗ್ರಾಮಕ್ಕೆ ಗ್ರಾಮವೇ ಮಲ್ಲಿಗೆ ಬೆಳೆದು ಆಚ್ಚರಿ ಮೂಡಿಸಿದೆ. ಬಹುತೇಕ ಮನೆ-ದೇವಸ್ಥಾನಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಕೊಯ್ಯೂರು ಗ್ರಾಮದಲ್ಲಿ ಬೆಳೆದ ಶಂಕರ್‌ಪುರ ಮಲ್ಲಿಗೆ ವಿತರಣೆಯಾಗುತ್ತಿದೆ. ಸುಮಾರು 400ಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ ಶೇ. 80ರಷ್ಟು ಮನೆಗಳು ಮಲ್ಲಿಗೆ ಕೃಷಿಯಲ್ಲಿ ಆದಾಯ ಕಂಡುಕೊಂಡಿವೆ. ಬೇಸಗೆಯಲ್ಲೂ ಮನೆ ಮನೆ ತೆರಳಿದರೆ ಮಲ್ಲಿಗೆ ಘಮ… ಇರುವ ಅಲ್ಪಸ್ವಲ್ಪ ನೀರಲ್ಲಿ ಮಲ್ಲಿಗೆ ಬೆಳೆದ ಗ್ರಾಮವು ಸ್ವಾವಲಂಬಿ ಜೀವನ ನಡೆಸುತ್ತಿರುವುದು ಇತರ ಗ್ರಾಮಗಳಿಗೆ ಮಾದರಿಯಾಗಿದೆ. ಪಾರಂಪರಿಕ ಕೃಷಿಯಿಂದ ವಿಮುಖರಾಗುತ್ತಿರುವ ಕಾಲದಲ್ಲಿ ಪರ್ಯಾಯ ಕೃಷಿಯತ್ತ ವಾಲಿ ಗ್ರಾಮ ಹೊಸತನ ಕಂಡುಕೊಂಡಿದೆ.

ಕೊಯ್ಯೂರು ಕ್ರಾಸ್‌ನಿಂದ ಬೆಳಾಲು ವರೆಗೆ, ಮಲೆಬೆಟ್ಟುವಿನಿಂದ ಬಜಿಲ ವರೆಗೆ 100ಕ್ಕೂ ಹೆಚ್ಚು ಮನೆಗಳ ಜನರು ನಿರಂತರ ಮಲ್ಲಿಗೆ ಕೃಷಿಯಲ್ಲಿ ತೊಡಗಿಕೊಂಡಿದೆ. 50 ಗಿಡ, ಸಾವಿರ ರೂ. ಆದಾಯ ಕೊಯ್ಯೂರು ಗ್ರಾಮದ ಉಮಿಯ ಮನೆಯ ಕೃಷ್ಣಪ್ಪ ಗೌಡ ಅವರು ಸುಮಾರು 50ಕ್ಕೂ ಹೆಚ್ಚಿನ ಮಲ್ಲಿಗೆ ಗಿಡಗಳಿಂದ ತನ್ನ ಕುಟುಂಬ ನಿರ್ವಹಿಸುತ್ತಿದ್ದಾರೆ. ಶಂಕರ್‌ಪುರ ಮಲ್ಲಿಗೆ ಗಿಡ ಹೊಂದಿರುವ ಇವರು, ಒಂದು ಗಿಡ 10 ವರ್ಷ ಮಲ್ಲಿಗೆ ನೀಡಬಲ್ಲದ್ದಾಗಿದ್ದರಿಂದ 50 ಗಿಡಗಳಲ್ಲಿ ಕನಿಷ್ಠ 25 ಚೆಂಡು ಮಲ್ಲಿಗೆ ಪಡೆಯುತ್ತಿದ್ದಾರೆ. ದಿನವೊಂದಕ್ಕೆ ನಾಲ್ಕು ತಾಸು ಸಮಯ ಮೀಸಲಿಟ್ಟರೆ ಸಾವಿರ ರೂ. ಸಂಪಾದಿಸಬಹುದು.ಸುತ್ತಮುತ್ತಲ ಕಾಂತಪ್ಪ, ರಘುರಾಮ ಸರಿಸುಮಾರು 50 ಗಿಡಗಳಿಂದ 6ರಿಂದ 8 ಅಟ್ಟಿ ಕಟ್ಟಿ ಮಲ್ಲಿಗೆ ದಿನಂಪತ್ರಿ ನೀಡುತ್ತಿದ್ದಾರೆ.

ಶುಭ ಸಮಾರಂಭಕ್ಕೆ ಮನೆಯಿಂದಲೇ ಮಲ್ಲಿಗೆ
ಈ ಗ್ರಾಮದಲ್ಲಿ ಶುಭ ಸಮಾರಂಭಕ್ಕೆ ಪೇಟೆಯಿಂದ ಹೂ ಖರೀದಿಸಿ ತರುವ ಪದ್ಧತಿಯಿಲ್ಲ. ಸುಮಾರು 10 ವರ್ಷಗಳಿಂದಲೂ ಇಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಮನೆಯಿಂದಲೇ ಮಲ್ಲಿಗೆ ರವಾನೆಯಾಗುತ್ತದೆ. ಆದರೆ ಹೊರಗಿನವರಿಗೆ ಮಲ್ಲಿಗೆ ಕೇಳಿದರೆ ಸಿಗುವುದಿಲ್ಲ. ಏಕೆಂದರೆ ಬೆಳ್ತಂಗಡಿ ಮಲ್ಲಿಗೆ ಮಾರುಕಟ್ಟೆಗೆ ದಿನನಿತ್ಯ ನೀಡುವುದರಿಂದ ಸಣ್ಣದೊಂದು ಒಡಂಬಡಿಕೆ ಈ ಊರಿನದಾಗಿದೆ.

ವಿದ್ಯಾಭ್ಯಾಸ ನೀಡಿದ ಆದಾಯ
ಕೊಯ್ಯೂರು ಗ್ರಾಮಕ್ಕೆ ಕೃಷಿಯೊಂದೇ ಆದಾಯದ ಮೂಲ. ಮನೆ ಮಕ್ಕಳ ವಿದ್ಯಾಭ್ಯಾಸ, ಮದುವೆ ಖರ್ಚು, ಕೊಟ್ಟಿಗೆ ರಿಪೇರಿ, ದಿನ ಖರ್ಚಿಗೆ ಮಲ್ಲಿಗೆಯಿಂದ ಬಂದ ಆದಾಯ ಜೀವನಾಧಾರವಾದ ನಿದರ್ಶನಗಳು ಇಲ್ಲಿ ಹಲವು ಮನೆಗಳಲ್ಲಿ ಕಾಣಸಿಗುತ್ತವೆ.

ಕಡಿಮೆ ನೀರು ಹೆಚ್ಚು ಆದಾಯ
ಒಂದು ಗಿಡ 10-15 ವರ್ಷ ಬಾಳುತ್ತದೆ. 5 ಸೆಂಟ್ಸ್‌ ಅಥವಾ 6 ಫೀಟ್‌ ಅಗಲ-7 ಫೀಟ್‌ ಉದ್ದ ಸ್ಥಳದಲ್ಲಿ ಸುಮಾರು 50 ಗಿಡ ನೆಡಬಹುದಾಗಿದೆ. ದಿನಕ್ಕೆ ಪ್ರತಿ ಗಿಡಕ್ಕೆ 5 ಲೀ. ನೀರುಣಿಸಿದರೆ 365 ದಿನಗಳು ಮಲ್ಲಿಗೆ ಕೈಸೇರುತ್ತದೆ. ದೇಹಕ್ಕೆ ಶ್ರಮವಿಲ್ಲದೆ, ನಷ್ಟ ರಹಿತವಾಗಿ ಮಲ್ಲಿಗೆಗೆ ಮಾರ್ಚ್‌, ಎಪ್ರಿಲ್‌, ಮೇ ತಿಂಗಳು ಬೇಡಿಕೆ ಹೆಚ್ಚು. ಉಳಿದ ಸಮಯಗಳಲ್ಲಿ ಪಾರಂಪರಿಕ ಕೃಷಿ ಇರುವುದರಿಂದ ಕೊಯ್ಯೂರು ಗ್ರಾಮ ಮಲ್ಲಿಗೆ ಕೃಷಿಗೆ ಹೆಸರುವಾಸಿಯಾಗಿದೆ.

 50 ಗಿಡಗಳಿಂದ 25 ಚೆಂಡು
ಹತ್ತು ವರ್ಷಗಳಿಂದ ಮಲ್ಲಿಗೆ ಕೃಷಿಯಲ್ಲಿ ತೊಡಗಿಕೊಂಡಿದ್ದು, ಕುಟುಂಬದ ಆದಾಯದ ಭಾಗವಾಗಿದೆ. ಸರಾಸರಿ 50 ಗಿಡಗಳಿಂದ 25 ಚೆಂಡು ಕಟ್ಟಬಹುದು.
– ಕೃಷ್ಣಪ್ಪ ಗೌಡ, ಉಮಿಯಾ, ಮಲ್ಲಿಗೆ ಕೃಷಿಕರು

 600 ರೂ. ಆದಾಯ
ಆರೋಗ್ಯಕರ ಮಲ್ಲಿಗೆ ಕೃಷಿ ಮಹಿಳೆಯರಿಗೆ ವರದಾನವಾಗಿದೆ. ದಿನವೊಂದಕ್ಕೆ 500ರಿಂದ 600 ರೂ. ಸಂಪಾದಿಸುವುದು ನಮಗೆ ಖುಷಿ ನೀಡಿದೆ.
 - ಚೇತನಾ, ಆದೂರ್‌ ಪೆರಾಲ್‌, ಮಲ್ಲಿಗೆ ಕೃಷಿಕರು

 50ರಿಂದ 60 ಅಟ್ಟಿ
ಧರ್ಮಸ್ಥಳ ಯೋಜನೆ ಮೂಲಕ ಮಲ್ಲಿಗೆ ಕೃಷಿ ಹಲವು ಮಂದಿ ಕೈಹಿಡಿದಿದೆ. ಕೊಯ್ಯೂರು ಗ್ರಾಮದ ಬರೆಮೇಲು, ಜಂಕಿನಡ್ಕ, ಆದೂರ್‌ ಪೆರಾಲ್‌ ಸಹಿತ ವಿವಿಧೆಡೆಗಳಿಂದ ದಿನವೊಂದಕ್ಕೆ 50ರಿಂದ 60 ಅಟ್ಟಿ ಮಲ್ಲಿಗೆ ನಮ್ಮಲ್ಲಿಗೆ ಬರುತ್ತದೆ. ಚೆಂಡಿಗೆ 150 ರೂ. ನಿಂದ 1200 ರೂ. ವರೆಗೆ ಮಲ್ಲಿಗೆ ಮಾರಾಟವಾದ ದಿನಗಳಿವೆ.
– ಮಂಜುನಾಥ್‌ ಕುಡ್ವ, ಹೂವಿನ ವ್ಯಾಪಾರಿ

-  ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.