ಮಂಗಳೂರಿನಿಂದ ಬೆಂಗಳೂರಿಗೆ ಬೇಕಾಗಿದೆ ಬೆಳಗ್ಗೆ ವಿಮಾನ
Team Udayavani, May 25, 2022, 7:05 AM IST
ಮಂಗಳೂರು: ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಮಧ್ಯಾಹ್ನದ ವರೆಗೆ ಯಾವುದೇ ವಿಮಾನ ಸಂಚಾರ ಇಲ್ಲದಿರುವುದು ಸಮಸ್ಯೆ ಸೃಷ್ಟಿಸಿದೆ.
ಪ್ರಸ್ತುತ ಬೆಂಗಳೂರಿಗೆ ಆರು ವಿಮಾನಗಳ ಸಂಚಾರವಿದೆ. ಆದರೆ ಸಂಚಾರ ಆರಂಭವಾಗುವುದೇ ಪೂರ್ವಾಹ್ನ 11.50ಕ್ಕೆ. ಬಳಿಕ ಮಧ್ಯಾಹ್ನ 1.40, ಸಂಜೆ 6.50, ರಾತ್ರಿ 8.40, 9.30 ಹಾಗೂ ದಿನದ ಕೊನೆಯ ವಿಮಾನ 10.15ಕ್ಕೆ ನಿರ್ಗಮಿಸುತ್ತದೆ. ಬೆಳಗ್ಗಿನ ವೇಳೆಗೆ ಒಂದು ವಿಮಾನ ಸಂಚಾರವಿದ್ದರೆ ಕಚೇರಿ ಹಾಗೂ ವಾಣಿಜ್ಯ ಉದ್ದೇಶಗಳಿಗೆ ತೆರಳುವರಿಗೆ ಹೆಚ್ಚು ಅನುಕೂಲವಾಗುತ್ತದೆ.
ಪ್ರಸ್ತುತ ಬೆಂಗಳೂರಿನಿಂದ ಬೆಳಗ್ಗೆ 7.10ಕ್ಕೆ ವಿಮಾನವೊಂದು ಆಗಮಿಸುತ್ತದೆ. ಬಳಿಕ ಮುಂಬಯಿಗೆ ಪ್ರಯಾಣ ಬೆಳೆಸುತ್ತದೆ. ಮುಂದಿನ ವಿಮಾನ 11.20ಕ್ಕೆ ಆಗಮಿಸಿ 11.50ಕ್ಕೆ ಮರಳಿ ಬೆಂಗಳೂರಿಗೇ ತೆರಳುತ್ತದೆ.
ಬೆಳಗ್ಗೆ 9 ಗಂಟೆಯ ವೇಳೆಗೆ ಮಂಗಳೂರಿನಿಂದ ವಿಮಾನ ಸಂಚಾರವಿದ್ದರೆ 10.30ರೊಳಗೆ ಬೆಂಗಳೂರು ತಲುಪುತ್ತದೆ. ಅಲ್ಲಿಂದ ಕಚೇರಿ, ವಾಣಿಜ್ಯ ಮುಂತಾದ ಕೆಲಸಗಳನ್ನು ಮುಗಿಸಿ ಆದೇ ದಿನ ಸಂಜೆ ಮಂಗಳೂರಿಗೆ ಮರಳಲು ಅನುಕೂಲವಾಗುತ್ತದೆ. ಪ್ರಸ್ತುತ ಬೆಂಗಳೂರಿನಿಂದ ಕೊನೆಯ ವಿಮಾನ ರಾತ್ರಿ 8.30ಕ್ಕೆ ಹೊರಟು 9.30ಕ್ಕೆ ಮಂಗಳೂರಿಗೆ ಆಗಮಿಸುತ್ತದೆ.
ಮಂಗಳೂರಿನಿಂದ ಬೆಂಗಳೂರಿಗೆ ಬೆಳಗ್ಗಿನ ವೇಳೆಗೆ ವಿಮಾನ ಸಂಚಾರ ಆರಂಭಿಸಬೇಕು ಎಂದು ಈಗಾಗಲೇ ಬೇಡಿಕೆ ಸಲ್ಲಿಸಿದ್ದೇವೆ. ಸಂಚಾರ ಆರಂಭಿಸಿದರೆ ಕಚೇರಿ, ವಾಣಿಜ್ಯ ಹಾಗೂ ತುರ್ತು ಕೆಲಸಗಳಿಗೆ ಹೋಗುವ ಕರಾವಳಿ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ.
– ಶಶಿಧರ ಪೈ ಮಾರೂರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
ಹುಣಸೂರು : ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಬೈಕ್ : ಸವಾರ ಸ್ಥಳದಲ್ಲೇ ಸಾವು
ಇಮ್ರಾನ್ ಖಾನ್ ನಿವಾಸದಲ್ಲಿ ಬೇಹು ಸಾಧನ ಅಳವಡಿಕೆಗೆ ಯತ್ನ: ಭದ್ರತಾ ಸಿಬ್ಬಂದಿ ಬಂಧನ
ಐಎಂಎ ಕೆಎಸ್ಬಿ ವೈದ್ಯರ ದಿನಾಚರಣೆ ಪ್ರಶಸ್ತಿಗೆ ಡಾ. ಆಶಾ ಪ್ರಭು ಆಯ್ಕೆ
ಪಂಚಾಂಗ ನೋಡಿ ರಾಕೆಟ್ ಉಡಾವಣೆ : ಟೀಕೆಗೆ ಗುರಿಯಾದ ಖ್ಯಾತ ನಟ ಮಾಧವನ್ !
3 ಲೋಕಸಭೆ ಮತ್ತು 7 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಹೀಗಿದೆ