ಮೋದಿಗೆ ಶಕ್ತಿ ತುಂಬುವ ಫಲಿತಾಂಶ: ಕೋಟ್ಯಾನ್
ಮೂಡುಬಿದಿರೆ: ಬಿಜೆಪಿಯಿಂದ ವಿಜಯೋತ್ಸವ
Team Udayavani, May 24, 2019, 6:00 AM IST
ಮೂಡುಬಿದಿರೆ: ದೇಶದ ಜನತೆ ಈ ಬಾರಿಯ ಲೋಕ ಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಭಾರತ ವಿಶ್ವಗುರುವಾಗಲು ಮೋದಿಯವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ,ಮೋದಿ ಅಲೆ ಎಂಬುದು ಸಮುದ್ರ ದಲೆಯಂತೆ ನಾಲೆ ಸೆಗಳಲ್ಲಿ ಪ್ರಭಾವ ಬೀರಿದಂತಾಗಿದೆ ಎಂದು ಶಾಸಕ ಉಮಾ ನಾಥ ಕೋಟ್ಯಾನ್ ಹೇಳಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಳಿನ್ಕುಮಾರ್ ಕಟೀಲು ಗೆಲುವು ಸಹಿತ ದೇಶಾದ್ಯಂತ ಬಿಜೆಪಿ ಸಾಧಿಸಿದ ಗೆಲುವಿಗೆ ಮೂಡುಬಿದಿರೆ ಬಸ್ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು. ನಮಗೆ ದೇಶ ಮುಖ್ಯ, ಅದಕ್ಕಾಗಿ ನರೇಂದ್ರ ಮೋದಿ ಬೇಕು ಎಂದು ಅವರ ಹೆಸರಿನಲ್ಲಿ ಮತ ಯಾಚಿ ಸಿದ್ದು ಹೌದು. ಅದನ್ನು ಈ ದೇಶದ ಜನ ಅನುಮೋದಿಸಿದ್ದಾರೆ. ನಾವು ಮತದಾನದ ಮೊದಲು ಮನೆ ಮನೆಗೆ ಹೋಗಿ ಮತಯಾಚನೆ ಮಾಡಿದ್ದೇವೆ. ಆದರೆ ಮನೆ ಮನೆಗಳೇ ನಮ್ಮ ಕಡೆಗೆ ಬಂದಿವೆ ಎಂದು ಈ ಫಲಿತಾಂಶ ತೋರಿಸಿಕೊಟ್ಟಿದೆ ಎಂದರು.
ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ನಿರೀಕ್ಷೆ ವ್ಯಕ್ತಪಡಿಸಿದಂತೆ 40,000 ದಷ್ಟು ಮತಗಳ ಬಹುಮತ ಒದಗಿ ಸು ವಲ್ಲಿ ಗೆದ್ದಿದ್ದೇವೆ, ಮತದಾರರಿಗೆಲ್ಲ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು.
ಪ್ರಮುಖರಾದ ಮೇಘನಾದ್ ಶೆಟ್ಟಿ, ಅಜಯ್ ರೈ, ಗಿರೀಶ್ ಕುಮಾರ್, ಲಕ್ಷ್ಮಣ ಪೂಜಾರಿ, ಹರೀಶ್ ಎಂ.ಕೆ., ರಾಜೇಶ್ ಶೆಟ್ಟಿ, ಅವಿನಾಶ್ ಮೊದಲಾದವರಿದ್ದರು. ಕಾರ್ಯ ಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?