ಜಾರಿ ಬೀಳುತ್ತಿವೆ ಕಾರು,ರಿಕ್ಷಾ,ಸ್ಕೂಟರ್ ಗಳು
ತ್ಯಾಜ್ಯ ನೀರು ಸುರಿದು ಅಪಾಯಕಾರಿಯಾದ ರಸ್ತೆ
Team Udayavani, May 23, 2019, 6:05 AM IST
ವಾಮಂಜೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್ ಸಮೀಪದ ರಸ್ತೆಯಲ್ಲಿ ಕಸ ಸಾಗಿಸುವ ವಾಹನಗಳ ತ್ಯಾಜ್ಯ ನೀರು ರಸ್ತೆಗೆ ಸುರಿಸುತ್ತಿರುವುದರಿಂದ ವಾಹನ ಸಂಚಾರ ಸಂಚಕಾರವಾಗಿದೆ. ಮುಖ್ಯವಾಗಿ ದ್ವಿಚಕ್ರ ವಾಹನಗಳು ಜಾರಿ ಬೀಳುವ ಅಪಾಯವಿದೆ.
ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಾಹನಗಳಲ್ಲಿ ತಂದು ಕಸವನ್ನು ಸುರಿಯಲಾಗುತ್ತಿದೆ. ಈ ವಾಹನಗಳು ತೆರೆದ ಸ್ಥಿತಿ ಯಲ್ಲಿದ್ದು, ಇದರಿಂದ ವಾಸನೆ ಎಲ್ಲೆಡೆ ವ್ಯಾಪಿಸುತ್ತದೆ. ಅಲ್ಲದೆ ಹಸಿ ಕಸಗಳ ವಾಸನೆ ಮಿಶ್ರಿತ ನೀರು ರಸ್ತೆಗೆ ಸುರಿಯು ತ್ತಿರುವುದರಿಂದ ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನ ಸವಾ ರರು ಜಾರಿ ಬೀಳುತ್ತಿದ್ದಾರೆ. ರಸ್ತೆಯಲ್ಲಿ ತ್ಯಾಜ್ಯ ನೀರು ಸುರಿದು ಕಪ್ಪು ಬಣ್ಣದ ಪದರ ನಿರ್ಮಾಣವಾಗಿದೆ. ಇದಕ್ಕೆ ನೀರು ಸೇರಿದರೆ ಇದು ಇನ್ನಷ್ಟು ಅಂಟಂಟಾಗಿ ವಾಹನಗಳು ಜಾರು ತ್ತಿವೆ.
ಕಾರು, ರಿಕ್ಷಾದಂತಹ ವಾಹನಗಳು ವೇಗವಾಗಿ ಬರುವಾಗ ಜಾರುವ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಬೈಕ್, ಸ್ಕೂಟರ್ ಗಳು ಪಲ್ಟಿ ಹೊಡೆಯುತ್ತಿವೆ. ಹೀಗಾಗಿ ಇಲ್ಲಿ ಅತ್ಯಂತ ಜಾಗರೂಕತೆಯಿಂದ ನಿಧಾನವಾಗಿ ಚಲಿಸಬೇಕಾ ಗುತ್ತದೆ. ರಸ್ತೆ ಅಗಲವಾಗಿದೆ ಎಂದು ವೇಗವಾಗಿ ಹೋದರೆ ಅಪಾಯ ಗ್ಯಾರಂಟಿ.
ಕಸ ಸಾಗಿಸುವ ವಾಹನಗಳು ತೆರೆದ ಸ್ಥಿತಿ ಯಲ್ಲಿ ಕಸ ಸಾಗಿಸುವುದರಿಂದಲೇ ಅದರ ತ್ಯಾಜ್ಯದ ನೀರು ರಸ್ತೆಗೆ ಸುರಿಯುತ್ತದೆ. ಅಲ್ಲದೆ ವಾಹನಗಳಲ್ಲಿರುವ ಕೊಳೆತ ಕಸ ದಿಂದ ಕೆಟ್ಟ ವಾಸನೆಯೂ ಬೀರುತ್ತದೆ. ಹೀಗಾಗಿ ಕಸ ಸಾಗಾಟದ ವಾಹನ ಮಾಲಕರಿಗೆ ಎಚ್ಚರಿಕೆ ನೀಡಿ ಕ್ರಮ ಕೈ ಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಹೊಗೆಯಾಡುತ್ತಲೇ ಇದೆ ಡಂಪಿಂಗ್ ಯಾರ್ಡ್
ಸದ್ಯಕ್ಕೆ ಡಂಪಿಂಗ್ ಯಾರ್ಡ್ನಲ್ಲಿ ಹೊತ್ತಿಕೊಂಡ ಬೆಂಕಿ ಹತೋಟಿಗೆ ಬಂದಿದ್ದರೂ ಹೊಗೆ ಮಾತ್ರ ಇನ್ನೂ ಇದೆ. ಕಸದ ಮೇಲೆ ಮಣ್ಣು ಸುರಿದಿರುವುದರಿಂದ ಒಳಗಡೆ ರಾಸಾಯನಿಕ ಸಂಯೋಜನೆಗೊಂಡು ಮಣ್ಣಿನ ಮೇಲಿಂದ ಹೊಗೆ ಬರುತ್ತಿರುವುದು ನಿಂತಿಲ್ಲ. ರಾತ್ರಿ ವೇಳೆ ಇದರ ತೀವ್ರತೆ ಹೆಚ್ಚಾಗಿರುತ್ತದೆ. ಮಂಗಳವಾರ ರಾತ್ರಿಯೂ ಹೊಗೆ ಜಾಸ್ತಿ ಇತ್ತು ಎನ್ನುತ್ತಾರೆ ಸ್ಥಳೀಯರು.
ಮಳೆ ಸುರಿದರೆ ಸಮಸ್ಯೆ
ಮತ್ತಷ್ಟು ಹೆಚ್ಚಳ
ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ಅಂಟಿದ ತ್ಯಾಜ್ಯಕ್ಕೆ ಸೇರುವುದರಿಂದ ಇದು ಇನ್ನು ಅಪಾಯಕಾರಿಯಾಗಿದೆ. ಮೊದಲೇ ತ್ಯಾಜ್ಯ ನೀರು ಬಿದ್ದು ಅಂಟಾಗಿರುವ ರಸ್ತೆಯಲ್ಲಿ ತ್ಯಾಜ್ಯದ ನೀರು ಮತ್ತಷ್ಟು ಸ್ಥಳಕ್ಕೆ ವ್ಯಾಪಿಸಿಕೊಳ್ಳುತ್ತದೆ. ಇದ ರಿಂದ ಸಮಸ್ಯೆ ಮತ್ಥಷ್ಟು ಹೆಚ್ಚಳವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ