ಕದ್ರಿ ಪಾರ್ಕ್ನಲ್ಲಿ ಓಡಲು ಸಿದ್ಧವಾಗಿದೆ ಪುಟಾಣಿ ರೈಲು
Team Udayavani, Jun 21, 2019, 6:10 AM IST
ಮಹಾನಗರ: ಕೆಲವು ತಿಂಗಳುಗಳಿಂದ ಕದ್ರಿ ಪಾರ್ಕ್ನ ‘ಬಾಲ ಮಂಗಳ ಎಕ್ಸ್ಪ್ರೆಸ್’ ಪುಟಾಣಿ ರೈಲು ತಾಂತ್ರಿಕ ಕಾರಣಗಳಿಗೆ ತನ್ನ ಸಂಚಾರವನ್ನು ರದ್ದುಗೊಳಿಸಿದ್ದು, ಇದೀಗ ಮತ್ತೂಮ್ಮೆ ತನ್ನ ಓಡಾಟ ಆರಂಭಿಸಲು ಸಿದ್ಧವಾಗಿದೆ.
ರೈಲಿನ ವಾಲ್ ಜತೆಗೆ ಹೈಡ್ರೋಲಿಂಕ್ ಎಂಜಿನ್ನಲ್ಲಿ ತೊಂದರೆಯಿಂದಾಗಿ ಇದರ ಬಿಡಿಭಾಗಗಳು ಬೆಂಗಳೂರಿನಿಂದ ಬರಬೇಕಿತ್ತು. ಇದೇ ಕಾರಣಕ್ಕೆ ಮಕ್ಕಳ ಮನೋರಂಜನೆಗೆ ಲಭ್ಯವಾಗಬೇಕಾಗಿದ್ದ ಈ ರೈಲು ಅನ್ನು ಕೆಲವು ತಿಂಗಳಿನಿಂದ ಕೋಣೆಯೊಳಗೆ ಇರಿಸಿ ಬೀಗ ಹಾಕಲಾಗಿತ್ತು.
ಇದೀಗ ತಾಂತ್ರಿಕ ಪರಿಣತರು ಬಂದು ರೈಲು ದುರಸ್ತಿಗೊಳಿಸಿದ್ದು, ಬುಧವಾರ ಸಂಜೆ ಪ್ರಾಯೋಗಿಕವಾಗಿ ಓಡಾಟ ನಡೆಸಲಾಯಿತು. ಆದರೆ, ಬಳಿಕ ಕೆಲವು ಸಣ್ಣ ಪುಟ್ಟ ತೊಂದರೆಗಳಿದ್ದ ಕಾರಣ ತಂತ್ರಜ್ಞರು ಗುರುವಾರ ಬೆಳಗ್ಗಿನಿಂದಲೇ ದುರಸ್ತಿ ಕಾರ್ಯದಲ್ಲಿ ತೊಡಗಿದ್ದು, ಸಂಜೆ ವೇಳೆಗೆ ಸರಿಯಾಗಿ ಓಡಾಟಕ್ಕೆ ಸಿದ್ಧವಾಗಿದೆ.
ವಾರಪೂರ್ತಿ ಸೇವೆ
ಸೋಮವಾರದಿಂದ ಶನಿವಾರದವರೆಗ ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಮತ್ತು ರವಿವಾರ ಪೂರ್ತಿದಿನ ರೈಲು ಓಡಲಿದೆ. ಮಕ್ಕಳಿಗೆ 10 ರೂ. ಮತ್ತು ವಯಸ್ಕರಿಗೆ 20 ರೂ.ದರ ನಿಗದಿ ಪಡಿಸಲಾಗಿದೆ.
ಈಗ 1.2 ಕಿ.ಮೀ. ಟ್ರ್ಯಾಕ್ ನಿರ್ಮಾಣಗೊಂಡಿದ್ದು, ಎರಡು ಅಡಿ ಅಗಲವನ್ನು ಹೊಂದಿದೆ. ಸುಮಾರು 75 ಮಂದಿ ಮಕ್ಕಳನ್ನು ಹೊತ್ತೂಯ್ಯುವ ಸಾಮರ್ಥ್ಯವನ್ನು ಈ ಪುಟಾಣಿ ರೈಲನ್ನು ಸುಮಾರು 1.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳಿಸಲಾಗಿದೆ. ಈ ರೈಲಿನಲ್ಲಿ ಮೂರು ಬೋಗಿಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು