ಮಹಿಳೆ, ಮಗುವಿಗೆ ಇರಿದು ಚಿನ್ನಾಭರಣ ಲೂಟಿ


Team Udayavani, Jul 12, 2018, 4:34 PM IST

choori.jpg

ಬದಿಯಡ್ಕ: ಕಳ್ಳನೋರ್ವ ಮನೆಗೆ ನುಗ್ಗಿ ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಪುಟ್ಟ ಮಗುವಿಗೆ ಇರಿದು ಕೊಲೆಗೈಯುವುದಾಗಿ ಬೆದರಿಸಿ ಚಿನ್ನಾಭರಣಗಳನ್ನು ಲೂಟಿಗೈದ ಘಟನೆ ಇಲ್ಲಿಗೆ ಸಮೀಪದ ನೆಲ್ಲಿಕಟ್ಟೆ-ಪೈಕ ರಸ್ತೆಯ ಚೂರಿಪಳ್ಳದಲ್ಲಿ ಬುಧವಾರ ಮುಂಜಾನೆ ಮೂರು ಗಂಟೆ ಸುಮಾರಿಗೆ ಸಂಭವಿಸಿದೆ.

ಚೂರಿಪಳ್ಳ ಬದ್ರಿಯ ಮಂಜಿಲ್‌ ನಿವಾಸಿ ದಿ| ಬೀರಾನ್‌ ಹಾಜಿ ಅವರ ಮನೆಗೆ ಮುಂಜಾನೆ ಕಳ್ಳ ನುಗ್ಗಿದ್ದು, ಚಿನ್ನಾಭರಣ ಕೊಡಲು ನಿರಾಕರಿಸಿದ ಬೀರಾನ್‌ ಹಾಜಿ ಅವರ ಪತ್ನಿ ಆಮಿನಾ (52) ಮತ್ತು ಕೊಲ್ಲಿಯಲ್ಲಿರುವ ಪುತ್ರ ಆಫಿಸ್‌ ಅವರ ಪತ್ನಿ ಮರಿಯಾಂಬಿ (25) ಅವರಿಗೆ ಇರಿ ದ ದ್ದಲ್ಲದೆ, ಈಕೆಯ ಪುತ್ರ ಮೊಹಮ್ಮದ್‌ ಆದಿ (2)ಯನ್ನೂ ಗಾಯ ಗೊಳಿಸಿದ್ದಾನೆ.  

ಸದ್ದು ಕೇಳಿ ಎಚ್ಚೆತ್ತರು
ಬುಧವಾರ ಮುಂಜಾನೆ ಮನೆಯ ಹಿಂಬದಿಯ ಕಿಟಿಕಿಯ ಸರಳು ಮುರಿದು ಕಳ್ಳ ಒಳಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ತಡಕಾಡಿದಾಗ ಶಬ್ದ ಕೇಳಿ ಆಮಿನಾ ಎಚ್ಚೆತ್ತರು. ಅವರು ಬೆಳಕು ಹಾಯಿಸಿ ನೋಡಿದಾಗ ಕಳ್ಳ ಅವರ ಕಣ್ಣಿಗೆ ಮೆಣಸಿನಹುಡಿ ಎರಚಲು ಯತ್ನಿಸಿ ಅವರ ಕುತ್ತಿಗೆಗೆ ಚಾಕು ಇರಿಸಿ ಕೊಲೆಗೈಯುವುದಾಗಿ ಬೆದರಿಕೆ ಯೊಡ್ಡಿದನು. ಆಮಿನಾರ ಬೊಬ್ಬೆ ಕೇಳಿ ಮರಿಯಾಂಬಿ ಎದ್ದು ಅಲ್ಲಿಗೆ ಬಂದಿದ್ದು, ಅವರಿಗೂ ಇರಿಯಲು ಯತ್ನಿಸಿದ. ಬಳಿಕ ಕಳ್ಳನ ಕೈಯಿಂದ ತಪ್ಪಿಸಿ ಕೊಂಡ ಮಹಿಳೆಯರು ಕೊಠಡಿ ಯೊಳಗೆ ನುಗ್ಗಿ ಬಾಗಿಲಿನ ಚಿಲಕ ಹಾಕಿದರು.

ಮಲಯಾಳ ಮಾತನಾಡಿದ ಕಳ್ಳ
ಮನೆಗೆ ನುಗ್ಗಿದ ಕಳ್ಳ ಮಲಯಾಳ ಭಾಷೆಯಲ್ಲಿ ಮಾತನಾಡಿದ್ದಾನೆ. ಮನೆ ಯಲ್ಲಿದ್ದ ಮಹಿಳೆಯರು ಮಕ್ಕಳನ್ನು ಬಿಟ್ಟುಬಿಡುವಂತೆ ವಿನಂತಿಸಿದಾಗ ತನಗೆ ಕೆಲಸವಿಲ್ಲ, ಆದ್ದರಿಂದ ಚಿನ್ನಾ ಭರಣ ನೀಡಬೇಕು’ ಎಂದು ಹೇಳಿದ್ದ ಎಂದು ಗಾಯಗೊಂಡ ಮಹಿಳೆ ತಿಳಿಸಿ ದ್ದಾರೆ. ಈತ ಮುಖವಾಡ ಧರಿಸಿದ್ದು, ಕೈಗವಸುಗಳನ್ನು ಧರಿಸಿದ್ದ ಎಂದು ಮನೆಯವರು ತಿಳಿಸಿದ್ದಾರೆ.

ಪೊಲೀಸ್‌ ತನಿಖೆ
ಲೂಟಿ ನಡೆದ ಮನೆಗೆ ಕಾಸರ ಗೋಡು ಡಿವೈಎಸ್‌ಪಿ ಎಂ.ವಿ. ಸುಕು ಮಾರನ್‌, ಬದಿಯಡ್ಕ ಎಸ್‌.ಐ. ಮೆಲ್ವಿನ್‌ ಜೋಸ್‌ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಈ ಮನೆಯ ಪೂರ್ತಿ ಮಾಹಿತಿ ತಿಳಿದವನೇ ಲೂಟಿ ನಡೆಸಿದ್ದಾನೆಂದು ಶಂಕಿಸಲಾಗಿದೆ.

ಮಕ್ಕಳನ್ನು ಒತ್ತೆ ಇರಿಸಿಕೊಂಡ
ಕಳ್ಳನ ಕೈಯಿಂದ ಮಹಿಳೆಯರಿಬ್ಬರು ತಪ್ಪಿಸಿಕೊಂಡಾಗ ಆತ ಮತ್ತೂಂದು ಕೊಠಡಿಯತ್ತ ಧಾವಿಸಿದ. ಅಲ್ಲಿ ಮರಿಯಾಂಬಿಯ ಮಕ್ಕಳಾದ ಇಸಾ ಫಾತಿಮ (5), ಮೊಹಮ್ಮದ್‌ ಆದಿ (2) ನಿದ್ರಿಸುತ್ತಿದ್ದರು. ಇದನ್ನು ಗಮನಿಸಿದ ಕಳ್ಳ ಚಿನ್ನಾ ಭರಣ ನೀಡದಿದ್ದರೆ ಮಕ್ಕಳನ್ನು ಕೊಲೆಗೈಯುವುದಾಗಿ ಬೆದರಿಕೆ ಯೊಡ್ಡಿದನು. ಅಲ್ಲದೆ ಮಗು ಮೊಹಮ್ಮದ್‌ ಆದಿಗೆ ಇರಿದಿದ್ದು, ಇದರಿಂದ ಮಗುವಿನ ಕೈಗೆ ಗಾಯವಾಗಿದೆ. ಮಕ್ಕಳ ಆಕ್ರಂದನ ಕೇಳಿದ ಮಹಿಳೆಯರು ಕೋಣೆಯಿಂದ ಹೊರಬಂದು ಕಳ್ಳನಿಗೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ನೀಡಿದರು.
ಚಿನ್ನಾಭರಣ ಪಡೆದುಕೊಂಡ ಕಳ್ಳ ಒಳಗೆ ನುಗ್ಗಿದ ಕಿಟಿಕಿಯ ಮೂಲಕವೇ ಹೊರಹಾರಿ ಪರಾರಿಯಾದ. ಮಹಿಳೆಯರು ನೆರೆಮನೆ ಯವರಿಗೆ ವಿಷಯ ತಿಳಿಸಿದ್ದು, ಅವರು ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು.

10 ಪವನ್‌ ಚಿನ್ನ ಲೂಟಿ
ಮಹಿಳೆಯರು ಮತ್ತು ಮಗುವನ್ನು ಗಾಯಗೊಳಿಸಿದ ಕಳ್ಳ ಎರಡು ಚಿನ್ನದ ಸರ, ಒಂದು ಬಳೆ, ಎರಡೂವರೆ ಪವನ್‌ನ ಇನ್ನೊಂದು ಆಭರಣ ಕೊಂಡೊಯ್ದಿ ದ್ದಾನೆ. ಹತ್ತು ಪವನ್‌ ಚಿನ್ನಾಭರಣ ಕಳ್ಳ ಲೂಟಿ ಮಾಡಿದ್ದಾಗಿ ದೂರಲಾಗಿದೆ.

ಟಾಪ್ ನ್ಯೂಸ್

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.