ಅಭಿವೃದ್ಧಿಯ ಜತೆಗೆ ಸಮಸ್ಯೆಗಳ ಸವಾಲುಗಳೂ ಇವೆ!


Team Udayavani, Oct 22, 2019, 5:05 AM IST

e-12

ಮಹಾನಗರ: ಕೈಗಾರಿಕ ಪ್ರದೇಶ, ಉದ್ಯಾನ, ಶಿಕ್ಷಣಸಂಸ್ಥೆ, ರಾಷ್ಟ್ರೀಯ ಹೆದ್ದಾರಿಗಳನ್ನು ಒಳಗೊಂಡಿರುವ ಕದ್ರಿ ಉತ್ತರ ವಾರ್ಡ್‌ ( ವಾರ್ಡ್‌ ನಂ.32)ಪಾಲಿಕೆಯ ಪ್ರಮುಖ ವಾರ್ಡ್‌ಗಳಲ್ಲೊಂದು. ಜತೆಗೆ ಒಂದಷ್ಟು ಸಮಸ್ಯೆ, ಸವಾಲುಗಳನ್ನೂ ಕೂಡಾ ವಾರ್ಡ್‌ ಒಳಗೊಂಡಿದೆ. ಬಹುತೇಕ ರಸ್ತೆಗಳು ಅಗಲೀಕರಣ, ಕಾಂಕ್ರಿಟೀಕರಣಗಳೊಂದಿಗೆ ಅಭಿವೃದ್ಧಿಗೊಂಡಿದೆ. ಇದರ ಜತೆಗೆ ಒಳಚರಂಡಿ ಉಕ್ಕಿ ಹರಿಯುವುದು, ಪುಟ್‌ಪಾತ್‌ಗಳು ಅರ್ಧದಲ್ಲಿ ನಿಂತಿರುವುದು ಸೇರಿದಂತೆ ಒಂದಷ್ಟು ಸಮಸ್ಯೆಗಳು ಬಗೆಹರಿಯದೆ ಉಳಿದಿರುವುದು ಗಮನಕ್ಕೆ ಬಂದಿದೆ.

ಜಿಲ್ಲೆಯ ಎರಡನೆ ಪ್ರಮುಖ ಕೈಗಾರಿಕ ಕೇಂದ್ರವಾಗಿರುವ ಯೆಯ್ನಾಡಿ ಕೈಗಾರಿಕ ಪ್ರದೇಶ ಈ ವಾರ್ಡ್‌ನಲ್ಲಿದೆ. ಇಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ 6 ಕೋ.ರೂ. ಕಾಮಗಾರಿಗೆ ಗುದ್ದಲಿಪೂಜೆ ಆಗಿದೆ.

ದೇಶ, ವಿದೇಶಗಳ ಗಣ್ಯರು, ಸಚಿವರು ಉಳಿದುಕೊಳ್ಳುವ ಪ್ರತಿ ಷ್ಠಿತ ಸಕ್ಯುಟ್‌ ಹೌಸ್‌, ಮಂಗಳೂರು ಆಕಾಶವಾಣಿ ಕೇಂದ್ರ, ಕದ್ರಿ ಪಾರ್ಕ್‌, ಕಾರಂಜಿ ಉದ್ಯಾನ, ತಾಂತ್ರಿಕ ವಿದ್ಯಾ ಸಂಸ್ಥೆಗಳ ಐಟಿಐ, ಜೆಟಿಸಿ, ಮಹಿಳಾ ಐಟಿಐ, ಮುಂತಾದ ಪ್ರಮುಖ ಕೇಂದ್ರ, ತಾಣಗಳನ್ನು ಒಳ ಗೊಂಡಿರುವ ಕದ್ರಿ ಪೂರ್ವ ವಾರ್ಡ್‌ ವಸತಿ ಸಮು ತ್ಛಯಗಳು, ವಾಣಿಜ್ಯಕೇಂದ್ರಗಳ ಮೂಲಕ ಈ ವಾರ್ಡ್‌ ಗಮನ ಸೆಳೆದಿದೆ. ರಾಷ್ಟ್ರೀಯ ಹೆದ್ದಾರಿ 66 ಹಾಗೂ ರಾಷ್ಟ್ರೀಯ ಹದ್ದಾರಿ 75 ಈ ವಾರ್ಡ್‌ ನಲ್ಲಿ ಹಾದುಹೋಗುತ್ತಿದೆ.

ಕದ್ರಿ ಪೂರ್ವ ವಾರ್ಡ್‌ನ ಇನ್ನೂ ಕೆಲವೆಡೆ ಹಳೆಯ ಒಳಚರಂಡಿ ವ್ಯವಸ್ಥೆ ಇದ್ದು ಉನ್ನತೀಕರಣಗೊಂಡಿಲ್ಲ. ಮಳೆಗಾಲದಲ್ಲಿ ಕೆಲವು ಮ್ಯಾನ್‌ಹೋಲ್‌ಗ‌ಳು ಉಕ್ಕೇರಿ ಹರಿಯುತ್ತಿದ್ದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ನಂತೂರು ವೃತ್ತದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಉಂಟಾಗುವ ಕೃತಕ ನೆರೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಕಲ್ಪಿಸದೆ ಕೃತಕ ನೆರೆ ಸೃಷ್ಟಿಯಾಗಿ ವಾಹನ ಚಾಲಕರು, ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಸುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಪರಿಹಾರ ಕಲ್ಪಿಸುವ ಕಾರ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಆಗಿಲ್ಲ ಎಂಬುದು ನಾಗರಿಕರು ದೂರು.

ರಾಜಕೀಯ ಹಿನ್ನೋಟ
ವಾರ್ಡ್‌ ನಂ.32- ಕದ್ರಿ ಉತ್ತರದಲ್ಲಿ ಬಿಜೆಪಿಯ ರೂಪಾ ಡಿ. ಬಂಗೇರ ಕಳೆದ ಎರಡು ಅವಧಿಗಳಲ್ಲಿ ಸತತವಾಗಿ ಜಯ ಗಳಿಸುತ್ತಾ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಿಂತ ಸುಮಾರು 566 ಮತಗಳ ಅಂತರದಿಂದ ಬಿಜೆಪಿ ಇಲ್ಲಿ ಜಯ ಸಾಧಿಸಿತ್ತು. ಬಹುತೇಕ ವಿದ್ಯಾವಂತ ಮತದಾರರನ್ನು ಹೊಂದಿರುವ ಪ್ರತಿಷ್ಠಿತ ವಾರ್ಡ್‌ ರಾಜಕೀಯ ಪಕ್ಷಗಳಿಗೆ ಒಂದು ಸವಾಲಿನ ಕ್ಷೇತ್ರವೂ ಆಗಿದೆ. ಪಾಲಿಕೆಯ ಕಳೆದ ಬಾರಿಯ ಚುನಾವಣೆಯಲ್ಲಿ ಈ ವಾರ್ಡ್‌ ಮಹಿಳೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಹೊಸ ಮೀಸಲಾತಿ ಪ್ರಕಾರ ಈ ವಾರ್ಡ್‌ ಹಿಂದುಳಿದ ವರ್ಗ “ಬಿ’ ಮಹಿಳೆಗೆ ಮೀಸಲಾಗಿದೆ. ಹೀಗಾಗಿ, ನಿಕಟಪೂರ್ವ ಬಿಜೆಪಿ ಕಾರ್ಪೊರೇಟರ್‌ ರೂಪಾ ಡಿ. ಬಂಗೇರಾ ಅವರಿಗೆ ಇಲ್ಲಿ ಸ್ಪರ್ಧಿಸಲು ಈ ಬಾರಿ ಅವಕಾಶವಿಲ್ಲ.

ಕದ್ರಿವಾರ್ಡ್‌
ಭೌಗೋಳಿಕ ವ್ಯಾಪ್ತಿ: ಕುಕದ್ರಿ ದೇವಳದ ಎಡಭಾಗದಿಂದ ಪ್ರಾರಂಭವಾಗಿ ಸರ್ಕುಟ್‌ ಹೌಸ್‌, ಕದ್ರಿಪಾರ್ಕ್‌, ಪಾದುವಾ , ಈಡನ್‌ ಕ್ಲಬ್‌ ಯೆಯ್ನಾಡಿ ಕೈಗಾರಿಕಾ ಪ್ರದೇಶ, ಬಿಕರ್ನಕಟ್ಟೆ ಪಾಂಡುರಂಗ ಭಜನಾ ಮಂದಿರ ಪ್ರದೇಶ,ನಂತೂರು ವೃತ್ತ ಪ್ರದೇಶಗಳನ್ನು ಕದ್ರಿಪೂರ್ವ ವಾರ್ಡ್‌ ಒಳಗೊಂಡಿದೆ.

ಒಟ್ಟು ಮತದಾರರು 7000
ನಿಕಟಪೂರ್ವ ಕಾರ್ಪೊರೇಟರ್‌-ರೂಪಾ ಡಿ.ಬಂಗೇರಾ (ಬಿಜೆಪಿ)

2013ರ ಚುನಾವಣೆ ಮತ ವಿವರ
ಬಿಜೆಪಿ : ರೂಪಾ ಡಿ.ಬಂಗೇರ : 1334
ಕಾಂಗ್ರೆಸ್‌ : ಶಶಿಕಲಾ : 768
ಸಿಪಿಎಂ : ಪುಪ್ಪಾ ಆಶೋಕ್‌ : 150
ಜೆಡಿಎಸ್‌: ಸುಮತಿ ಕೆ.ಶೆಟ್ಟಿ : 123

-  ಕೇಶವ ಕುಂದರ್‌

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.