ಬೇಸಗೆಯಲ್ಲಿ ವಿದ್ಯುತ್ ಕ್ಷಾಮ ಭೀತಿಯಿಲ್ಲ
Team Udayavani, Feb 1, 2019, 1:00 AM IST
ಮಂಗಳೂರು: ಬೇಸಗೆಯಲ್ಲಿ ಅನಿಯ ಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಮೂಲಿ. ಆದರೆ ಈ ಬಾರಿ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತದ ಭೀತಿ ಇಲ್ಲ.
ಕರಾವಳಿ ಹಾಗೂ ಮಲೆನಾಡು ಭಾಗ ದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳಲ್ಲಿ ನೀರು ದಾಸ್ತಾನು ಇರುವ ಕಾರಣ ಸಾಕಷ್ಟು ಉತ್ಪಾ ದನೆ ಯಾಗುತ್ತಿದೆ. ಮೆಸ್ಕಾಂಗೆ ದಿನಕ್ಕೆ 950 ಮೆ.ವ್ಯಾ. ವಿದ್ಯುತ್ ಆವಶ್ಯಕತೆ ಇದ್ದು, ಅಷ್ಟನ್ನು ಕರ್ನಾಟಕ ವಿದ್ಯುತ್ ಪ್ರಸರಣ ಕೇಂದ್ರ ಪೂರೈಕೆ ಮಾಡುತ್ತಿದೆ. ಆದ್ದರಿಂದ ಮೇವರೆಗೆ ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರುಗಳಲ್ಲಿ ವಿದ್ಯುತ್ ಕ್ಷಾಮ ಎದುರಾಗದು ಎನ್ನುವ ನಿರೀಕ್ಷೆ ಮೆಸ್ಕಾಂನದ್ದು.
ಲಿಂಗನಮಕ್ಕಿ, ಸೂಪ ಹಾಗೂ ಮಾಣಿ ಜಲಾ ಶಯಗಳಲ್ಲಿ ನೀರಿನ ಅಭಾವವಾಗಿಲ್ಲ. ಸೌರ, ಉಷ್ಣ, ಪವನ, ಅಣು ಸ್ಥಾವರಗಳಿಂದಲೂ ವಿದ್ಯುತ್ ಲಭ್ಯವಿದೆ. ಹಾಗಾಗಿ ನಿರಂತರ ಪೂರೈಕೆ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ 5 ಎಸ್ಕಾಂಗಳಿಗೆ ರಾಜ್ಯ ಗ್ರಿಡ್ನಿಂದ ದಿನಕ್ಕೆ 216 ದಶಲಕ್ಷ ಯೂನಿಟ್ ವಿದ್ಯುತ್ ಮಂಜೂರಾತಿ ಇದ್ದು, 218.89 ದಶ ಲಕ್ಷ ಯೂನಿಟ್ ವಿದ್ಯುತ್ನ ಬಳಕೆ ಆಗುತ್ತಿದೆ.
ಕೈಗಾರಿಕಾ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಇಲ್ಲ. ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಆಗುತ್ತಿದೆ.
– ಅಬ್ದುಲ್ ಹಮೀದ್, ಕೆನರಾಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷರು
ಲೋಡ್ ಶೆಡ್ಡಿಂಗ್: ಸಿಎಂ ಬ್ರೇಕ್
ಡ್ಯಾಂಗಳಲ್ಲಿ ನೀರು ಸಾಕಷ್ಟು ಇರುವುದರಿಂದ ಈ ವರ್ಷ ರಾಜ್ಯ ದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಬಾರದೆಂದು ಸಿಎಂ ಕುಮಾರ ಸ್ವಾಮಿ ಇತ್ತೀಚೆಗೆ ಸೂಚಿಸಿದ್ದರು ಎನ್ನುವುದು ಗಮನಾರ್ಹ.
ಮೆಸ್ಕಾಂ: 23 ಲಕ್ಷ ಗ್ರಾಹಕರು
ಮೆಸ್ಕಾಂ ವ್ಯಾಪ್ತಿಯಲ್ಲಿ 23 ಲಕ್ಷ ಗ್ರಾಹಕರಿದ್ದಾರೆ. ಅವರಲ್ಲಿ ಸರ್ವ ಗೃಹ ಬಳಕೆಯ ಸಂಪರ್ಕ ಗರಿಷ್ಠ ಅಂದರೆ 15.3 ಲಕ್ಷ ಇದೆ. ಎಲ್ಟಿ- 1.9 ಲಕ್ಷ, ಎಲ್ಟಿ3- 2.1 ಲಕ್ಷ, ಐಪಿ (ನೀರಾವರಿ ಪಂಪ್ಸೆಟ್) 3.2 ಲಕ್ಷ, ಎಲ್ಟಿ5 (ಕೈಗಾರಿಕೆ)- 31,000, ಸರಕಾರಿ ಸಂಸ್ಥೆಗಳು (ನೀರು ಪೂರೈಕೆ ಇತ್ಯಾದಿ) 18,000, ದಾರಿದೀಪ 21,000, ಹೈಟೆನ್ಶನ್ 2,000 ಹಾಗೂ ತಾತ್ಕಾಲಿಕ ಸಂಪರ್ಕ 15,000 ಇದೆ.
– ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ