ಮನೆಗಳಿಗೆ ರಸ್ತೆಯಿಲ್ಲ, ಇರುವ ಕಾಲುದಾರಿಯೂ ಸರಿಯಿಲ್ಲ 


Team Udayavani, Jul 16, 2018, 10:02 AM IST

16-july-1.jpg

ವಿಟ್ಲ : ಇಲ್ಲಿ ಮೊಬೈಲ್‌ ಸಿಗ್ನಲ್‌ ಇದೆ. ಡಾಟಾ ಸಿಗುತ್ತದೆ. ಆಧುನಿಕ ತಂತ್ರಜ್ಞಾನ ತಲುಪಿದೆ. ಆದರೆ ಮೂಲ ಆವಶ್ಯಕತೆ ಇನ್ನೂ ತಲುಪಿಲ್ಲ. ರಸ್ತೆಯೂ ಇಲ್ಲದೆ, ಕಾಲುದಾರಿಯೂ ಸಮರ್ಪಕವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳ ಪಾಡು ಹೇಳತೀರದು. ನಡೆದಾಡಲಾಗದ ಅಥವಾ ಅನಾರೋಗ್ಯ ಪೀಡಿತ ವೃದ್ಧರನ್ನು ಹೊತ್ತು ಕೊಂಡೇ ಸಾಗುವ ಇಲ್ಲಿನ ಮಂದಿ, ಆವಶ್ಯಕ ಸಾಮಗ್ರಿಗಳನ್ನೂ ಹೊತ್ತು ಸರ್ಕಸ್‌ ಮಾಡುತ್ತಲೇ ಸಾಗಬೇಕಾಗಿದೆ. ಈ ಅಪಾಯಕಾರಿ ಕಾಲು ದಾರಿಯಲ್ಲಿ ಸ್ಥಳೀಯರು ಜೀವ ಭಯದಿಂದಲೇ ನಡೆದಾಡುತ್ತಿದ್ದಾರೆ.

ಪಡ್ಪು ಕಾಲು ದಾರಿ
ಇದು ಕರೋಪಾಡಿ ಗ್ರಾಮದ ಆನೆಕಲ್ಲು ಎಂಬಲ್ಲಿಂದ ಪಡ್ಪು ಮೂಲಕ ಸಾಲೆತ್ತೂರು ಗ್ರಾಮದ ಮಲಾರು ಎಂಬಲ್ಲಿಗೆ ತೆರಳುವ ಕಾಲುದಾರಿಯ ಕಥೆ. ಸುಮಾರು ಒಂದೂವರೆ ಕಿ.ಮೀ. ದೂರದ ಪಂ. ದಾರಿ. ಮಳೆಗಾಲದಲ್ಲಿ ಈ ಕಾಲುದಾರಿ ಬಳಕೆ ಭಾರೀ ಕಷ್ಟ. ಪಕ್ಕದ ಭೂಮಿಯೂ ಕುಸಿಯುತ್ತಿದೆ. ಅದಕ್ಕಾಗಿ ಅಡಿಕೆ ಮರ ಹಾಕಿ ಕುಸಿಯದಂತೆ ತಡೆ ಒಡ್ಡಲಾಗಿದೆ. ಇದೇ ಕಾಲುದಾರಿಯಲ್ಲಿ ಚಿಕ್ಕ ತೋಡಿದೆ. ಅದಕ್ಕೆ 10 ವರ್ಷಗಳ ಹಿಂದೆ ಕಾಲುಸಂಕ ಹಾಕಲಾ ಗಿದೆ. ಆನೆಕಲ್ಲು ನದಿಯಲ್ಲಿ ನೀರು ತುಂಬಿದರೆ ತೋಡು ತುಂಬಿ ಕಾಲು ಸಂಕ ನಿಷ್ಪ್ರ ಯೋಜಕವಾಗುತ್ತದೆ.

ಅಣೆಕಟ್ಟೆ ಸಮಸ್ಯೆ
ಕೇರಳ ಸರಕಾರ ಕೇರಳದ ಭಾಗದಲ್ಲಿ ಈ ನದಿಗೆ ಬೃಹತ್‌ ಅಣೆಕಟ್ಟೆ ನಿರ್ಮಿಸಿದೆ. ಮಳೆಗಾಲದಲ್ಲಿ ನೀರಿನೊಂದಿಗೆ ತೇಲಿ ಬರುವ ಕಸ, ಗಿಡ, ಮರಗಳು ಈ ಅಣೆಕಟ್ಟೆಯಲ್ಲಿ ಸಿಲುಕಿ ನೀರಿನ ಮಟ್ಟ ಏರುತ್ತದೆ. ಹತ್ತಿರದ ಕೃಷಿಭೂಮಿಯೂ ಕೊಚ್ಚಿಕೊಂಡು ಹೋಗುತ್ತಿದೆ. ಜತೆಗೆ ಈ ಕಾಲುದಾರಿಯಲ್ಲಿ ನೀರು ಮೇಲೇರುತ್ತದೆ. ಆಗ ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಾರೆ.

ವಿದ್ಯುತ್‌ ತಂತಿ ಜೋತಾಡುತ್ತಿದೆ
ಇವರಿಗೆ ವಿದ್ಯುತ್‌ ಇರುವುದೇ ಇಲ್ಲ. ವಿದ್ಯುತ್‌ ತಂತಿ ಜೋತಾಡುತ್ತಿದೆ. ಆ ಬಗ್ಗೆ ಇಲಾಖೆಗೆ ದೂರನ್ನು ನೀಡಿದರೂ ಪ್ರಯೋಜನವಿಲ್ಲ. 

ಸಮಸ್ಯೆ ಪರಿಹರಿಸಬೇಕು
ಈ ಹತ್ತು ಕುಟುಂಬಗಳ ಗೋಳು ಇಂದು ನಿನ್ನೆಯದಲ್ಲ. ಚುನಾವಣೆ ಸಂದರ್ಭ ಇವರಿಗೆ ಭರವಸೆ, ಆಶ್ವಾಸನೆ ಸಿಕ್ಕಿದೆ. ಗೆದ್ದ ಬಳಿಕ ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಆಮೇಲೆ ಮರೆತುಬಿಡುತ್ತಾರೆ. ನಾವು ಬಡವರು. ನಮಗೆ ಕೂಲಿ ಮಾಡಿ ಬದುಕು ಸಾಗಿಸಬೇಕು. ಜನಪ್ರತಿನಿಧಿಗಳ ಹಿಂದೆ ಓಡಾಡಿದರೆ ನಮ್ಮ ಸಂಸಾರದ ಹೊಟ್ಟೆ ತುಂಬುವುದಿಲ್ಲ. ಹಲವು ಬಾರಿ ಸಮಸ್ಯೆಯನ್ನು ಗಮನಕ್ಕೆ ತಂದಿದ್ದೇವೆ. ಆದರೆ ಪರಿಹಾರವಾಗಿಲ್ಲ. ಶೀಘ್ರ ನಮ್ಮ ಸಂಕಷ್ಟ ಪರಿಹರಿಸಬೇಕು ಎಂದು ಈ ಕಾಲುದಾರಿ ಫಲಾನುಭವಿಗಳು ಆಗ್ರಹಿಸಿದ್ದಾರೆ.

ಹತ್ತು ಕುಟುಂಬಗಳಿಗೆ ಅನ್ಯ ಮಾರ್ಗವಿಲ್ಲ
ಈ ಕಾಲುದಾರಿಯನ್ನು ಹಿಂದೆ ಹಲವರು ಅವಲಂಬಿಸಿದ್ದರು. ಸುತ್ತಲೂ ರಸ್ತೆ ನಿರ್ಮಾಣವಾಗಿರುವುದರಿಂದ ಈಗ ಬೇರೆ ಮಾರ್ಗವಿಲ್ಲದೇ ಸಿಕ್ಕಿಬೀಳುವ ಕುಟುಂಬಗಳು 10. ಇವರಿಗೆ ರಸ್ತೆಯೂ ಇಲ್ಲ. ಇರುವ ಕಾಲುದಾರಿ ನಡೆದಾಡಲು ಅಯೋಗ್ಯವಾಗಿದೆ. ವೃದ್ಧರ ಆರೋಗ್ಯ ಕೆಟ್ಟರೆ ಯುವಕರು ಹೊತ್ತುಕೊಂಡು ರಸ್ತೆ ಬದಿಗೆ ಆಗಮಿಸುತ್ತಾರೆ. ಈ ಹತ್ತು ಕುಟುಂಬಗಳಿಗೆ ಅನ್ಯ ಮಾರ್ಗವಿಲ್ಲದೆ ತೀರಾ ಸಂಕಷ್ಟ ಅನುಭವಿಸುತ್ತಿದ್ದಾರೆ. 

ಅನುದಾನ ಬೇಕು
ಹಲವು ಬಾರಿ ಸ್ಥಳಕ್ಕೆ ತೆರಳಿ ಚರ್ಚಿಸಿದ್ದೇವೆ. ಆನೆಕಲ್ಲು ನದಿಗೆ ಕೇರಳ ಸರಕಾರ ನಿರ್ಮಿಸಿದ ಅಣೆಕಟ್ಟೆಯಲ್ಲಿ ಕಸ ಸಿಕ್ಕಿ, ಸುತ್ತಮುತ್ತ ನೀರು ತುಂಬಿಕೊಳ್ಳುತ್ತದೆ. ಆಗ ಕಾಲುದಾರಿ ಬಳಕೆ ಕಷ್ಟ. ಕಾಲುದಾರಿಯ ಎರಡೂ ಬದಿಯಲ್ಲಿ ಅಡಿಕೆ ತೋಟಗಳಿವೆ. ಅಲ್ಲಿ ಕಾಲುದಾರಿಗೆ 3 ಅಡಿ ಜಾಗವೂ ಸಿಗುತ್ತಿಲ್ಲ. ಸಾಕಷ್ಟು ಜಾಗ ಸಿಕ್ಕಿದಲ್ಲಿ ಕಾಲುದಾರಿಗೆ ಕಾಂಕ್ರೀಟ್‌ ಹಾಕಿಸಿಕೊಡಬಹುದಿತ್ತು. ಆದರೆ ಪಂ. ವತಿಯಿಂದ 50ರಿಂದ 60 ಸಾವಿರ ರೂ. ಅನುದಾನ ಬಿಡುಗಡೆ ಮಾಡಿ, ಆ ಕಾಲುದಾರಿಯನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ.
 - ಬೇಬಿ ಆರ್‌. ಶೆಟ್ಟಿ ಅಧ್ಯಕ್ಷರು, ಕರೋಪಾಡಿ ಗ್ರಾ.ಪಂ.

ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.