ಕರ್ನಾಟಕದಲ್ಲಿರುವ ಎನ್ನಾರೈ ವೇದಿಕೆಗೆ ಉಪಾಧ್ಯಕ್ಷರೇ ಇಲ್ಲ!


Team Udayavani, Aug 27, 2021, 7:30 AM IST

ಕರ್ನಾಟಕದಲ್ಲಿರುವ ಎನ್ನಾರೈ ವೇದಿಕೆಗೆ ಉಪಾಧ್ಯಕ್ಷರೇ ಇಲ್ಲ!

ಮಂಗಳೂರು: ವಿದೇಶಗಳಲ್ಲಿ ಕನ್ನಡಿಗರ ಕುಂದು-ಕೊರತೆಗಳಿಗೆ ಸ್ಪಂದಿಸುವ ಕರ್ನಾಟಕ ಸರಕಾರದ ಅನಿವಾಸಿ ಭಾರತೀಯರ ವೇದಿಕೆ (ಎನ್‌ಆರ್‌ಐ ಫೋರಂ)ಯ ಉಪಾಧ್ಯಕ್ಷ ಸ್ಥಾನವು ಕಳೆದ ಮೂರು ವರ್ಷಗಳಿಂದ ಖಾಲಿ ಇದೆ.

2008ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ  ಈ ವೇದಿಕೆಯನ್ನು ಸ್ಥಾಪಿಸಿದ್ದರು. ಮುಖ್ಯಮಂತ್ರಿಗಳು ವೇದಿಕೆಯ ಅಧ್ಯಕ್ಷರು.  ವಿಧಾನ ಪರಿಷತ್‌ ಸದಸ್ಯರಾಗಿದ್ದ ಕ್ಯಾ| ಗಣೇಶ್‌ ಕಾರ್ಣಿಕ್‌  (2008 ರಿಂದ 2011) ಬಳಿಕ  ವಿ.ಸಿ. ಪ್ರಕಾಶ್‌ (2013ರಿಂದ 2016) ಮತ್ತು ಡಾ| ಆರತಿ ಕೃಷ್ಣ (2016ರಿಂದ 2018) ಉಪಾಧ್ಯಕ್ಷರಾಗಿದ್ದರು. 2018 ಸೆ. 21ರ ಬಳಿಕ ಈ ಹುದ್ದೆ ಖಾಲಿ ಇದೆ.

ಉಪಾಧ್ಯಕ್ಷ ಹುದ್ದೆಯ ಪಾತ್ರ:

ವಿದೇಶಗಳಲ್ಲಿರುವ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಉಪಾಧ್ಯಕ್ಷರ ಪಾತ್ರ ಮುಖ್ಯ. ಕೊರೊನಾ ಹಾವಳಿಯ ಬಳಿಕ ಅನಿವಾಸಿ ಕನ್ನಡಿಗರು ಬಹಳಷ್ಟು ಸಮಸ್ಯೆ ಗಳನ್ನು ಅನುಭವಿಸಿದ್ದಾರೆ. ವಿವಿಧ ಕಾರಣಗಳಿಂದ ಸಾವು ಸಂಭವಿಸಿ ದಾಗ ಮೃತದೇಹವನ್ನು ಊರಿಗೆ ರವಾನಿಸಲು ರಾಯಭಾರ ಕಚೇರಿಯ ಜತೆಗೆ ವ್ಯವಹರಿಸಿ ಕಾರ್ಯ ಸುಲಭಗೊಳಿಸಲು ಎನ್‌ಆರ್‌ಐ ಉಪಾಧ್ಯಕ್ಷ ಸ್ಥಾನ ಬಹಳಷ್ಟು ಪ್ರಯೋಜನಕಾರಿ.

ಈ ಹಿಂದೆ ಈ ಸ್ಥಾನದಲ್ಲಿದ್ದ ಕ್ಯಾ| ಗಣೇಶ್‌ ಕಾರ್ಣಿಕ್‌ ಮತ್ತು ಡಾ| ಆರತಿ ಕೃಷ್ಣ ಅವರಿಗೆ ಈಗಲೂ ಎನ್ನಾರೈಗಳಿಂದ ಸಹಾಯಕ್ಕಾಗಿ ಕರೆಗಳು ಬರುತ್ತವೆ. ಅವರು ತಮ್ಮಿಂದಾದ ನೆರವು ಒದಗಿಸುತ್ತಿದ್ದಾರೆ. ಆದರೆ ಅಧಿಕಾರಯುತವಾಗಿ ಕೆಲಸ ನಿರ್ವಹಿಸಲು ಉಪಾಧ್ಯಕ್ಷರ ಅಗತ್ಯ ಇದೆ.

ಕರಾವಳಿ ಎನ್ನಾರೈಗಳಿಂದ

ಅತ್ಯಧಿಕ ಆದಾಯ : ಮಹಾರಾಷ್ಟ್ರ, ಕೇರಳ ಹೊರತುಪಡಿಸಿದರೆ ಭಾರತಕ್ಕೆ ಅತ್ಯಧಿಕ ಎನ್ನಾರೈ ಆದಾಯ ತರುವ 3ನೇ ರಾಜ್ಯ ಕರ್ನಾಟಕ. ಭಟ್ಕಳದಿಂದ ಮಡಿಕೇರಿ ತನಕ 1.40 ಲಕ್ಷ ಮಂದಿ ಕೇವಲ ಯುಎಇ ದೇಶಗಳಲ್ಲಿದ್ದಾರೆ. ಕೇರಳದಲ್ಲಿ ಎನ್ನಾರೈಗೆ ಪ್ರತ್ಯೇಕ ಸಚಿವಾಲಯ ಇದೆ. ಅಲ್ಲಿನ ಮುಖ್ಯಮಂತ್ರಿ ಪ್ರತೀ ತಿಂಗಳು ಎನ್ನಾರೈ ಜತೆ ಸಂವಾದ ನಡೆಸುತ್ತಾರೆ. ಆದರೆ ಕರ್ನಾಟಕ ಸರಕಾರ ಈ ವೇದಿಕೆಯನ್ನೇ ಮರೆತಂತಿದೆ!

ಕರಾವಳಿಯ ಎನ್ನಾರೈಗಳಿಂದ ರಾಜ್ಯಕ್ಕೆ ಅತ್ಯಧಿಕ ಆದಾಯ ಬರುತ್ತಿದೆ. ಹಾಗಿರುವಾಗ ವೇದಿಕೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ.– ಹಿದಾಯತ್‌ ಅಡೂxರ್‌,  ಕನ್ನಡಿಗಾಸ್‌ ಫೆಡರೇಶನ್‌ ಸಂಚಾಲಕ

ಉಪಾಧ್ಯಕ್ಷ ಸ್ಥಾನ ಕೆಲವು ಕಾರಣಗಳಿಂದ ಖಾಲಿ ಉಳಿದಿದೆ. ಆದಷ್ಟು ಬೇಗನೆ ನೇಮಿಸುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ.– ಕ್ಯಾ| ಗಣೇಶ್‌ ಕಾರ್ಣಿಕ್‌

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.