ಎಲ್ಲಿಗೋ ಪಯಣ.. ಯಾವುದೋ ಈ ದಾರಿ..!


Team Udayavani, Apr 25, 2017, 1:20 PM IST

25-MNG-1.jpg

ಮಹಾನಗರ: ಬೆಂಗಳೂರಿನಿಂದ ಪರಿಚಿತವಿಲ್ಲದೆ ನಗರಕ್ಕೆ ಬಂದ ಕುಟುಂಬವೊಂದು ಕರಾವಳಿ ಪ್ರವಾಸಕ್ಕೆಂದು ತಮ್ಮ ಕಾರಲ್ಲಿ ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದರು. ಬಿ.ಸಿ ರೋಡ್‌ನಿಂದ ರಾ.ಹೆ. 75ರಲ್ಲಿ ಪಡೀಲ್‌ ಮೂಲಕ ಪಂಪ್‌ವೆಲ್‌ಗೆ ಬಂದ‌ು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಹೋಗಬೇಕಿತ್ತು. ಆದರೆ ಪಂಪ್‌ವೆಲ್‌ಗೆ ಬಂದರೆ 4 ಕಡೆಗೆ ಹೋಗುವ ರಸ್ತೆಗಳು. ಎತ್ತ ನೋಡಿದರೂ ನಗರದೊಳಗೆ ಅಥವಾ ಈ ಪ್ರಸಿದ್ಧ ದೇವಸ್ಥಾನಕ್ಕೆ ದಾರಿ ತೋರಿಸುವ ನಾಮಫಲಕಗಳೇ ಇಲ್ಲ. ಕೊನೆಗೆ ರಸ್ತೆಯಲ್ಲೇ ಕಾರು ನಿಲ್ಲಿಸಿ ಅಕ್ಕ-ಪಕ್ಕದವರನ್ನು ಕೇಳಬೇಕಾಯಿತು.

ಮುಂದೆ ಕಂಕನಾಡಿ ದಾರಿಯಿಂದ ಹೋದರೆ, ಮತ್ತೆ ಅದೇ ಗೊಂದಲ. ಜ್ಯೋತಿ ಅಂಬೇಡ್ಕರ್‌ ಸರ್ಕಲ್‌ನಿಂದ ಮುಂದೆ ಹೇಗೆ ಹೋಗಬೇಕು ಎನ್ನುವುದು ಗೊತ್ತಾಗದೆ ಸಿಗ್ನಲ್‌ನಲ್ಲೇ ಪರದಾಟ, ಹಿಂಬದಿಯಿಂದ ಬರುವ ವಾಹನ ಸವಾರರ ಕರ್ಕಶ ಹಾರನ್‌, ಬೈಗಳು..! ಅಂತು-ಇಂತು ನಗರವೆಲ್ಲ ಪ್ರದಕ್ಷಿಣೆ ಹಾಕಿ ಕುದ್ರೋಳಿ ದೇವಸ್ಥಾನ ತಲುಪುವಷ್ಟರಲ್ಲಿ ಸಾಕು ಸಾಕಾಗಿತ್ತು . ಇದು ಒಂದು ಕುಟುಂಬದ ಕತೆಯಲ್ಲ; ಮಂಗಳೂರು ನಗರಕ್ಕೆ ಹೊರಗಿನಿಂದ ಬರುವ ಬಹುತೇಕ ಪ್ರವಾಸಿಗರು ಎದುರಿಸುತ್ತಿರುವ ಸಮಸ್ಯೆ. ಬೆಂಗಳೂರು ಹೊರತುಪಡಿಸಿದರೆ, ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ಪ್ರವಾಸೋದ್ಯಮ ತಾಣವೂ ಹೌದು. ಹತ್ತಾರು ಧಾರ್ಮಿಕ ಸ್ಥಳಗಳು, ಬೀಚ್‌ಗಳು-ಹೀಗೆ ಪ್ರತಿ ವರ್ಷವೂ ಸಾವಿರಾರು ಮಂದಿ ಭೇಟಿ ಕೊಡುತ್ತಾರೆ. 

ಎಲ್ಲಾ  ಕಡೆ  ಶೀಘ್ರ ನಾಮಫಲಕ
ಮಂಗಳೂರಿನ ರಸ್ತೆಗಳಲ್ಲಿ ಮಾರ್ಗ ಸೂಚಿ ಫಲಕ ಅಳವಡಿಸ ದಿರುವುದು ನನ್ನ ಗಮನಕ್ಕೂ ಬಂದಿದೆ. ಪ್ರವಾಸಿಗರಿಗೆ, ವಾಹನ ಸವಾರರಿಗೆ ಇದೊಂದು ದೊಡ್ಡ ಸಮಸ್ಯೆ.ನಗರದ ಎಲ್ಲ 60 ವಾರ್ಡ್‌ಗಳ ಎಲ್ಲಾ ಒಳ ರಸ್ತೆಗಳಿಗೆ ಸಣ್ಣ ಸಣ್ಣ ನಾಮಫಲಕ ಅಳವಡಿಸಲು ಆಗುವ ಅಂದಾಜು ವೆಚ್ಚದ ಬಗ್ಗೆ ಆಯುಕ್ತರಿಂದ ವಿವರ ಕೇಳಲಾಗಿದೆ. ನಗರದ ಮುಖ್ಯ ಭಾಗದಲ್ಲಿ ಅಗತ್ಯವಿರುವ ಸೂಚನಾ ಫಲಕದ ಕುರಿತಂತೆ ಮುಂದಿನ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವ ಮಂಡಿಸಿ ಕ್ರಮ ಕೈಗೊಳ್ಳಲಾಗುವುದು.
-ಕವಿತಾ ಸನಿಲ್‌, ಮೇಯರ್‌ ಮಂಗಳೂರು

ರೋಡ್‌ ಮ್ಯಾಪ್‌ ಕಡ್ಡಾಯ ವಾಗಿ ಬೇಕು
ಹಿಂದೆ ಮಂಗಳೂರಿನ ಕೆಲವು ಸ್ಥಳಗಳನ್ನು ಉಲ್ಲೇಖೀಸುವ ಫಲಕಗಳು ಅಲ್ಲಲ್ಲಿ ಸಿಮೆಂಟ್‌ನಿಂದ ಬರೆಸಲಾಗಿತ್ತು. ಬಳಿಕ ಅದು ಏನೇನೋ ಆಗಿ ಈಗ ಅದಕ್ಕೆ ಬಣ್ಣವೂ ಇಲ್ಲವಾಗಿದೆ. ವಿಶೇಷವಾಗಿ ಮಂಗಳೂರಿಗೆ ಬರುವ ಪ್ರವಾಸಿಗರಿಗೆ ನಿಗದಿತ ಪ್ರಮುಖ ಸ್ಥಳಗಳಿಗೆ ಹೋಗಬೇಕಾದ ಸ್ಥಳಗಳ ರೋಡ್‌ ಮ್ಯಾಪ್‌ ಸುಲಭವಾಗಿ ಸಿಗುವ ಸೂಚನಾ ಫಲಕ ಅಳವಡಿಸಬೇಕು.
-ಹನುಮಂತ ಕಾಮತ್‌,  ಸಾಮಾಜಿಕ ಹೋರಾಟಗಾರರು

ದಿನೇಶ್‌ ಇರಾ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.