ಅಂಧರಿಗೆ ನೆರವಾಗುತ್ತದೆ ಈ ಹೊಸ ಕನ್ನಡಕ


Team Udayavani, Aug 4, 2018, 12:17 PM IST

anda.png

ಮಂಗಳೂರು: ಅಂಧ ವ್ಯಕ್ತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಹ್ಯಾದ್ರಿ ಇನ್ನೋವೇಶನ್‌ ಹಬ್‌ ಪ್ರಾಯೋಜಿತ ಆರ್‌ಡಿಎಲ್‌ ಟೆಕ್ನಾಲಜೀಸ್‌ ತಂತ್ರಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಸಿದ್ಧಗೊಂಡಿರುವ ವಿ.ಎಲ್‌. ಗ್ಲಾಸ್‌ನ ಕಾರ್ಯ ನಿರ್ವಹಣೆ ಬಗ್ಗೆ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಶುಕ್ರವಾರ ಪ್ರಾತ್ಯಕ್ಷಿಕೆ ನಡೆಸಲಾಯಿತು.

ಗ್ಲಾಸ್‌ ಕುರಿತು ಮಾಹಿತಿ ನೀಡಿದ ಆರ್‌ಡಿಎಲ್‌ ಟೆಕ್ನಾಲಜಿಯ ಮುಖ್ಯಸ್ಥ ರಾಘವ ಶೆಟ್ಟಿ, ಇದು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಸರಳ ಕನ್ನಡಕ. ಎರಡು ಗಾಜು, ಅವುಗಳನ್ನು ಜೋಡಿಸಿದ ಚೌಕಟ್ಟಿನ ಒಳಗಿರಿಸಿದ ಪುಟ್ಟ ಸಂವೇದಕವನ್ನು ಇದು ಹೊಂದಿದೆ. ಈ ಸಂವೇದಕವನ್ನು ವಿಐ ಎಲ್‌ಆರ್‌ (ವಿಸಿಬಲ್‌ ಲೈಟ್‌ ಇನ್‌ಫ್ರಾರೆಡ್‌ ರಿಸೀವರ್‌) ಎನ್ನಲಾಗುತ್ತದೆ. ಇದು ಎಲ್‌ಐಎಫ್‌ಐ ತಂತ್ರಜ್ಞಾನದ ಮೂಲಕ ಬೆಳಕಿನ ಅವಗೆಂಪು ಕಿರಣ ಗಳನ್ನು ಗ್ರಹಿಸಿ, ಕನ್ನಡಕದ ಎಡ -ಬಲದ ಚೌಕಟ್ಟುಗಳಲ್ಲಿ ಅಳವಡಿಸಿದ ಕಂಪನಕಾರಕಗಳ ಮೂಲಕ ಧರಿಸಿದ ವ್ಯಕ್ತಿಗೆ ಎಚ್ಚರಿಕೆ ನೀಡುತ್ತದೆ. ಅಲ್ಲದೆ ಚೌಕಟ್ಟಿನ ಕೊನೆಯಲ್ಲಿ ಅಳವಡಿಸಿರುವ ಇಯರ್‌ ಫೋನ್‌ ಮೂಲಕ ಸಂದೇಶಗಳನ್ನು ನೀಡುತ್ತದೆ. 

ಅಂಧರು ಅಡೆ ತಡೆಗಳನ್ನು ಗ್ರಹಿಸಿ, ಸ್ವತಂತ್ರವಾಗಿ ನಡೆದಾಡಲು ಇದು ಸಹಾಯ ಮಾಡುತ್ತದೆ ಎಂದು ವಿವರಿಸಿದರು.

ಮನೆ, ಕಚೇರಿ ಒಳಾಂಗಣದಲ್ಲಿ ಇದನ್ನು ಬಳಸಿ ಓಡಾಡಬಹುದು. ವ್ಯಕ್ತಿಯು ಬೆಳಕಿನಲ್ಲಿ ನಡೆಯುತ್ತಿರುವಾಗ ಆತ ನಿಂತಿರುವ ಸ್ಥಾನವನ್ನು ಅತಿ ನಿಖರವಾಗಿ ತ್ರೀಡಿ ಪೊಸಿಶನಿಂಗ್‌ ಮೂಲಕ ಗೊತ್ತುಪಡಿಸುತ್ತದೆ. ಅಲ್ಲದೆ ಪರಿಸರದಲ್ಲಿ ಇರುವ ವಸ್ತುಗಳ ಸ್ಥಾನ, ದೂರ ಇನ್ನಿತರ ಸೂಚನೆಗಳನ್ನು ನಿಖರ ವಾಗಿ ತಿಳಿಸುತ್ತದೆ. ಈ ಗ್ಲಾಸ್‌ ರಿಯಲ್‌ ಟೈಮ್‌ ಆ್ಯಕ್ಟಿವಿಟಿ ಮಾನಿಟರಿಂಗ್‌ ಮತ್ತು ಅಲರ್ಟ್‌ ಸಿಸ್ಟಮನ್ನೂ ಒಳಗೊಂಡಿದ್ದು, ಧರಿಸಿದ ವ್ಯಕ್ತಿಗೆ ತೊಂದರೆ ಉಂಟಾದಲ್ಲಿ ತತ್‌ಕ್ಷಣವೇ ವ್ಯಕ್ತಿಯ ಸಂಬಂಧಿಕರನ್ನು ಸಂಪರ್ಕಿಸುತ್ತದೆ ಎಂದು ಅವರು ತಿಳಿಸಿದರು. 

3 ತಿಂಗಳಲ್ಲಿ ತಯಾರಿ
ಈ ಗ್ಲಾಸ್‌ ಆರ್‌ಡಿಎಲ್‌ನ ವಿಎಲ್‌ಸಿ ಪ್ರಯೋಗಶಾಲೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ತಯಾರಾಗಿದೆ. ರಾಘವ ಶೆಟ್ಟಿ ಅವರೊಂದಿಗೆ ಕನ್ವಲ್‌ ಕರ್ಕೇರ, ಡಾ| ಅಶ್ವತ್‌ ರಾವ್‌, ಡಾ| ಅನೂಶ್‌ ಬೇಕಲ್‌, ವಿಶ್ವನಾಥ್‌ ಆಚಾರ್ಯ, ಗಣೇಶ್‌ ಐತಾಳ್‌, ಪ್ರದೀಪ್‌ ಅವರ ತಂಡ ಈ ಕನ್ನಡಕ ಆವಿಷ್ಕರಿ ಸಿದ್ದಾರೆ. ಆರ್‌ಡಿಎಲ್‌ ತಂಡದ ಡಾ| ಅಶ್ವತ್‌ ರಾವ್‌, ಡಾ| ಅನೂಶ್‌ ಬೇಕಲ್‌, ಪ್ರೊ| ಮಂಜಪ್ಪ, ಪ್ರೊ| ರವಿಚಂದ್ರ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.