ಕೆದಿಲದಲ್ಲಿ ಕಾಡಾನೆ ಹಾವಳಿ: ಕೃಷಿ ನಾಶ
Team Udayavani, Mar 10, 2018, 6:35 AM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಆಸುಪಾಸಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ.
ಗುರುವಾರ ತಡರಾತ್ರಿ ಐನಕಿದು ಗ್ರಾಮದ ಕೆದಿಲ ನಿವಾಸಿ ಶಶಿಧರ ಅವರ ತೋಟಕ್ಕೆ ನುಗ್ಗಿ ಫಸಲಿರುವ ಬ್ರಹತ್ ಗಾತ್ರದ ಎರಡು ತೆಂಗಿನ ಸಸಿ, ನೂರೈವತ್ತಕ್ಕೂ ಹೆಚ್ಚಿನ ಬಾಳೆ ಹಾಗೂ ಅಡಿಕೆ ಗಿಡಗಳನ್ನು ನಾಶಪಡಿಸಿದೆ. ಪಕ್ಕದ ಕೆದಿಲ ದೇವರಾಜ್ ಅವರ ತೋಟಕ್ಕೂ ದಾಂಧಲೆ ನಡೆಸಿದ್ದು, ತೆಂಗು, ಕಂಗು ಹಾಗೂ ಬಾಳೆಗಿಡ ಗಳನ್ನು ನಾಶಪಡಿಸಿದೆ. ಕೃಷಿ ಯಂತ್ರೋ ಪಕರಣಗಳಿಗೂ ಹಾನಿ ಮಾಡಿದೆ.
ಹೆಚ್ಚಿನ ದಿನಗಳಲ್ಲಿ ಕೆದಿಲ ಬಳಿ ಆನೆಗಳು ಓಡಾಟ ನಡೆಸುತ್ತಿರುತ್ತವೆ. ಈ ಮಾರ್ಗದಲ್ಲಿ ಸಂಜೆ ಏಳು ಗಂಟೆ ಹೊತ್ತಿಗೆ ತೆರಳಿದರೆ ರಸ್ತೆಯಲ್ಲಿ ಆನೆಗಳು ಎದುರಾಗುತ್ತವೆ.
ರಸ್ತೆಯಲ್ಲಿ 3 ಕಿ.ಮೀ. ಸಂಚಾರ!
ಮೂರು ದಿನಗಳ ಹಿಂದೆಯಷ್ಟೆ ಹರಿಹರ – ಕೊಲ್ಲಮೊಗ್ರು ಮುಖ್ಯ ಮಾರ್ಗದಲ್ಲಿ 3 ಕಿ. ಮೀ. ದೂರ ಆನೆ ನಿರ್ಭೀತಿಯಿಂದ ಓಡಾಡಿತ್ತು. ಹರಿಹರ ಮುಖ್ಯ ಪೇಟೆಯಲ್ಲಿಯೇ ಇದು ಸಂಚಾರ ನಡೆಸಿತ್ತು ಎಂದು ಸ್ಥಳೀಯರು ತಿಳಿಸಿದ್ದು, ಆನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ