ಸಿಡಿಲಿನ ಆಘಾತ: ಸಿ.ಎ.ಆರ್. ಪೊಲೀಸ್ ಆಸ್ಪತ್ರೆಗೆ ದಾಖಲು
Team Udayavani, May 29, 2018, 10:09 AM IST
ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ರವಿವಾರ ಸಂಜೆ ಆಯೋಜಿಸಿದ್ದ ಐಪಿಲ್ ಫೈನಲ್ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದಾಗ ಸಿಡಿಲಿನ ಆಘಾತಕ್ಕೊಳಗಾದ ಮಂಗಳೂರು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿ.ಎ.ಆರ್.) ಸಿಬಂದಿ ಸಿದ್ದಪ್ಪ ಜಿ. (23) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರ ದೇಹದಲ್ಲಿ ಯಾವುದೇ ಗಾಯಗಳಾಗಿಲ್ಲ. ಆದರೆ ನೋವು ಇದೆ. ಹಾಗಾಗಿ ಅವರನ್ನು ವೆನಾÉಕ್ ಆಸ್ಪತ್ರೆಗೆ ದಾಖಲಿಸಿ ಸಿ.ಟಿ. ಸ್ಕ್ಯಾನ್ಗೆ ಒಳಪಡಿಸಲಾಗಿದೆ. ಅದರ ವರದಿ ಬಂದಿದ್ದು, ಅವರಿಗೆ ಯಾವುದೇ ಅಪಾಯವಿಲ್ಲ ಎಂದು ತಿಳಿದು ಬಂದಿರುವುದಾಗಿ ಸಿ.ಎ.ಆರ್. ಕಚೇರಿಯ ಅಧಿಕಾರಿಗಳು ವಿವರಿಸಿದ್ದಾರೆ.
ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದಾಗ ಅತ್ಯಂತ ಸನಿಹದಲ್ಲಿ ಸಿಡಿಲು ಕಾಣಿಸಿಕೊಂಡಿದ್ದರಿಂದ ಸಿದ್ಧಪ್ಪ ಅವರು ಅಘಾತಗೊಂಡಿದ್ದರು. ಇದರಿಂದ ಗಾಬರಿಗೊಂಡು ದೇಹದಲ್ಲಿ ನೋವು ಕಾಣಿಸಿಕೊಂಡಿರಬಹುದು ಎಂದು ಭಾವಿಸಲಾಗಿದೆ. ಒಂದೆರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಸಿ.ಎ.ಆರ್. ಅಧಿಕಾರಿಗಳು ತಿಳಿಸಿದ್ದಾರೆ.
ಆಘಾತಗೊಂಡ ಕೂಡಲೇ ಅವರು ವೆನಾÉಕ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಮನೆಗೆ ತೆರಳಿದ ಬಳಿಕ ದೇಹದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಬೆಳಗಾವಿ ನಿವಾಸಿಯಾಗಿದ್ದು,ಇತ್ತೀಚೆಗಷ್ಟೇ ಇಲಾಖೆಗೆ ಸೇರ್ಪಡೆಗೊಂಡಿದ್ದರು.