ತಿಲಕ್ರಾಜ್ ವಿರುದ್ಧ ಆರೋಪ: ಬಾವಾ, ಎಚ್ಡಿಕೆ ಪ್ರತಿಕೃತಿ ದಹನ
Team Udayavani, Jan 9, 2018, 10:10 AM IST
ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆ ಸಮಿತಿ ಸದಸ್ಯ ತಿಲಕ್ ರಾಜ್ ಕೃಷ್ಣಾಪುರ ವಿರುದ್ಧ ಪರೋಕ್ಷ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದ ಸ್ಥಳೀಯ ಶಾಸಕ ಮೊದಿನ್ ಬಾವಾ ವಿರುದ್ಧ ಕೃಷ್ಣಾಪುರದಲ್ಲಿ ನೂರಾರು ನಾಗರಿಕರು, ಬಿಜೆಪಿ ಕಾರ್ಯಕರ್ತರು ಸಭೆ ಸೇರಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸದಾಶಿವ ಐತಾಳ ಅವರು ಮಾತನಾಡಿ, ಕುಮಾರಸ್ವಾಮಿಗೆ ದೀಪಕ್ ರಾವ್ ಯಾರು, ತಿಲಕ್ ರಾಜ್ ಯಾರು ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಮಾಧ್ಯಮ ಹಾಗೂ ಸ್ಥಳೀಯ ಶಾಸಕ ಮೊದಿನ್ ಬಾವಾ ಅವರ ಸಹೋದರರ ಕುಮ್ಮಕ್ಕಿನಿಂದ ಈ ಹೇಳಿಕೆ ನೀಡಿದ್ದಾರೆ. ಸ್ಥಳೀಯವಾಗಿ ಜನಮನ ಗೆದ್ದಿರುವ ತಿಲಕರಾಜ್ ಬಗ್ಗೆ ತಿಳಿದವರು ಯಾರೂ ಈ ಹೇಳಿಕೆ ನೀಡಲಾರರು. ಆಧಾರ ರಹಿತ ಹೇಳಿಕೆಯನ್ನು ನಾವೆಲ್ಲಾ ಖಂಡಿಸುತ್ತೇವೆ ಎಂದರು.
ತಿಲಕ್ ರಾಜ್ ಮಾತನಾಡಿ, ಕುಮಾರಸ್ವಾಮಿಯವರು ಆಣೆ ಪ್ರಮಾಣದಲ್ಲಿ ನಂಬಿಕೆ ಇರುವವರು. ನಾನು ಯಾವುದೇ ದೇವ
ಸ್ಥಾನಕ್ಕೆ ಬರಲು ಸಿದ್ಧನಿದ್ದೇನೆ. ನಮ್ಮದೇ ಪಕ್ಷದ ಕಾರ್ಯಕರ್ತ ಸಾವಿಗೀಡಾದ ನೋವು ನಮಗೆಲ್ಲರಿಗಿದೆ. ಈ ಸಂದರ್ಭ ಇಂತಹ ಆರೋಪ ಬಂದಿರುವುದರಿಂದ ಅರಗಿಸಿಕೊಳ್ಳುವ ಶಕ್ತಿ ನನಗಿಲ್ಲ. ಓಟಿಗಾಗಿ ಸಾವಿನ ರಾಜಕೀಯ ಮಾಡುವ ಹೀನ ಕೃತ್ಯವನ್ನು ಶಾಸಕರು ಬಿಡಬೇಕು ಎಂದರು.
ಅಝೀಜ್ ಫ್ಯಾನ್ಸಿ, ಮಂಜುಕಾವಾ ಪಣಂಬೂರು, ಶರೀಫ್ ಎಂ.ಎಸ್., ಲೋಕೇಶ್ ಬೊಳ್ಳಾಜೆ, ಪ್ರಶಾಂತ್ ಮೂಡಾಯಿ ಕೋಡಿ, ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ, ಯಶ್ ಪಾಲ್ ಸಾಲ್ಯಾನ್, ಶಶಿಕಲಾ ಶೆಟ್ಟಿ, ಸದಾನಂದ ಸನಿಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ