ಕಾಲ್ನಡಿಗೆಯಲ್ಲಿ ಭಾರತ ಸುತ್ತಾಡಿ ಸೈಬೀರಿಯಾಕ್ಕೆ ಯಾತ್ರೆ

ಮಹಾರಾಷ್ಟ್ರ ಯುವಕನ ದೇಶ ಪರ್ಯಟನೆ

Team Udayavani, Oct 17, 2021, 6:45 AM IST

ಕಾಲ್ನಡಿಗೆಯಲ್ಲಿ ಭಾರತ ಸುತ್ತಾಡಿ ಸೈಬೀರಿಯಾಕ್ಕೆ ಯಾತ್ರೆ

ಮಹಾನಗರ: ಮಹಾರಾಷ್ಟ್ರದ ನಾಗಪುರ ನಿವಾಸಿ 19ರ ಹರೆಯದ ಯುವಕ ರೋಹನ್‌ ಅಗರ್ವಾಲ್‌ ಕೈಯಲ್ಲಿ ಬಿಡಿ ಕಾಸು ಇಲ್ಲದೆ, ಕಾಲ್ನಡಿಗೆಯಲ್ಲಿ ಭಾರತವನ್ನು ಸುತ್ತಾಡಿ ಬಳಿಕ ಬಾಂಗ್ಲಾ ಮತ್ತು ಚೀನ ಮಾರ್ಗವಾಗಿ ಅತ್ಯಂತ ಶೀತಲ ಪ್ರದೇಶವಾದ ರಷ್ಯಾ ದೇಶದ ಸೈಬೀರಿಯಾದ ಒಮಿಯಾಕಾಮ್‌ ತಲಪುವ ಗುರಿಯೊಂದಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.

2020 ಆಗಸ್ಟ್‌ 25ರಂದು ಉತ್ತರ ಪ್ರದೇಶದ ವಾರಣಾಸಿ ಯಿಂದ ಪಾದಯಾತ್ರೆ ಆರಂಭಿಸಿದ್ದ ರೋಹನ್‌ ಅಗರ್ವಾಲ್‌ ಇದುವರೆಗೆ ಉತ್ತರ ಪ್ರದೇಶ, ಹರ್ಯಾಣ, ರಾಜಸ್ಥಾನ್‌, ದಿಲ್ಲಿ, ಉತ್ತರಖಂಡ, ಹಿಮಾಚಲ ಪ್ರದೇಶ, ಚಂಡೀಗಢ್‌, ಮಧ್ಯ ಪ್ರದೇಶ, ಮಹಾರಾಷ್ಟ್ರ, ಗೋವಾ, ಪಾಂಡಿಚೇರಿ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ ಸಹಿತ 15 ರಾಜ್ಯಗಳನ್ನು ಕ್ರಮಿಸಿ ಶುಕ್ರವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದಾರೆ.

ಈ ಸಂದರ್ಭ ಉದಯವಾಣಿ ಜತೆ ಮಾತನಾಡಿರುವ ರೋಹನ್‌, “ಮುಂದಿನ ಎರಡು ವರ್ಷಗಳಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಸುತ್ತಾಡುತ್ತೇನೆ. ಬಳಿಕ ದಿಲ್ಲಿಯಿಂದ ಬಾಂಗ್ಲಾ, ಮಯನ್ಮಾರ್‌, ಕಾಂಬೋಡಿಯಾ, ಲಾವೋಸ್‌, ವಿಯೆಟ್ನಾಂ, ಚೀನ, ಹಾಂಕಾಂಗ್‌, ಮಕಾವ್‌, ಮಂಗೋಲಿಯಾ ಮೂಲಕ ರಷ್ಯಾಕ್ಕೆ ತೆರಳಿ ಅಲ್ಲಿನ ಸೈಬೀರಿಯಾದ ಒಮಿಯಾಕಾಮ್‌ನಲ್ಲಿ ಪಾದಯಾತ್ರೆಯನ್ನು ಕೊನೆ ಗೊಳಿ ಸುವ ಉದ್ದೇಶ ಹೊಂದಿದ್ದೇನೆ. ನಿರ್ದಿಷ್ಟ ಕಾಲಮಿತಿ ಯನ್ನು ಇರಿಸಿಕೊಂಡಿಲ್ಲ. ಆದರೆ ಒಟ್ಟು 6ರಿಂದ 10 ವರ್ಷಗಳ ಅವಧಿಯಲ್ಲಿ ನನ್ನ ಈ ಪರ್ಯಟನೆಯನ್ನು ಪೂರ್ಣಗೊಳಿಸುವ ಗುರಿ ಇರಿಸಿದ್ದೇನೆ’ ಎಂದು ವಿವರಿಸಿದರು.

ಇದನ್ನೂ ಓದಿ:ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

ಈ ದೇಶ ಪರ್ಯಟನೆ ವೇಳೆ, ವಿವಿಧ ಜನರೊಂದಿಗೆ ಮಾತನಾಡಿ, ಅವರ ಜೀವನ ಕ್ರಮವನ್ನು ತಿಳಿದುಕೊಂಡು ಜ್ಞಾನ ಸಂಪಾದಿಸಿ ಮಾನವತೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವುದು ತನ್ನ ಉದ್ದೇಶ ಎನ್ನುತ್ತಾರೆ ರೋಹನ್‌. ನಾಗಪುರ ವಿಶ್ವ ವಿದ್ಯಾನಿಲಯದ ಜಿ.ಎಸ್‌. ಕಾಲೇಜ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಎಕೊನಾಮಿಕ್ಸ್‌ನ ಬಿಕಾಂ ವಿದ್ಯಾರ್ಥಿಯಾಗಿದ್ದ ರೋಹನ್‌, 2020- 21ರಲ್ಲಿ ದ್ವಿತೀಯ ಬಿಕಾಂ ತರಗತಿಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಪಾದಯಾತ್ರೆಯನ್ನು ಕೈಗೊಂಡಿದ್ದರು. ತಂದೆ ರಮೇಶ್‌ ತಂಪು ಪಾನೀಯ ಅಂಗಡಿ ನಡೆಸುತ್ತಿದ್ದು, ತಾಯಿ ಸೀಮಾ ಗೃಹಿಣಿ. ತಂಗಿ ಕನಕ್‌ 6ನೇ ತರಗತಿ ಓದುತ್ತಿದ್ದಾರೆ.

ರಸ್ತೆಯೇ ನನ್ನ ವಿಶ್ವ ವಿದ್ಯಾನಿಲಯ
“ದಿನಕ್ಕೆ 20ರಿಂದ 30 ಕಿ.ಮೀ. ಪಾದಯಾತ್ರೆ ಮಾಡುತ್ತಿ ದ್ದೇನೆ. ಅಗತ್ಯ ಬಿದ್ದಾಗ ಕೆಲವೊಮ್ಮೆ ರಸ್ತೆಯಲ್ಲಿ ಹೋಗುವ ಲಾರಿ ಮತ್ತಿತರ ವಾಹನಕ್ಕೆ ಕೈ ತೋರಿಸುತ್ತೇನೆ. ಚಾಲಕ ನಿಲ್ಲಿಸಿದರೆ ಅದರಲ್ಲಿ ಪ್ರಯಾಣಿಸುತ್ತೇನೆ. ಯಾರಿಂದಲೂ ಹಣ ಕೇಳುವುದಿಲ್ಲ. ಊಟ, ತಿಂಡಿಯನ್ನು ಯಾರಾದರೂ ಕೊಟ್ಟಾಗ ಸ್ವೀಕರಿಸುತ್ತೇನೆ. ಊಟ, ತಿಂಡಿಗಾಗಿ ಹಲವು ಬಾರಿ ಹೊಟೇಲ್‌, ರೆಸ್ಟೊರೆಂಟ್‌, ಡಾಬಾಗಳಲ್ಲಿ ಕೆಲಸ ಮಾಡಿದ್ದೂ ಇದೆ. ರಾತ್ರಿ ವೇಳೆ ಆಶ್ರಮ, ದೇಗುಲ, ಚರ್ಚ್‌, ಗುರಕುಲ, ಮಂದಿರ, ಹೊಟೇಲ್‌, ರೆಸ್ಟೊರೆಂಟ್‌, ಪೊಲೀಸ್‌ ಠಾಣೆ ಇತ್ಯಾದಿಯಾಗಿ ಎಲ್ಲೆಂದರಲ್ಲಿ ನಿದ್ರಿಸಿದ್ದೇನೆ. ರಸ್ತೆಯೇ ನನ್ನ ವಿಶ್ವ ವಿದ್ಯಾನಿಲಯ… ಪಾದಯಾತ್ರೆ ಸಂದರ್ಭದಲ್ಲಿ ಸಿಗುವ ಜನರು ಮತ್ತು ಪ್ರಕೃತಿ ನನ್ನ ನೈಸರ್ಗಿಕ ಶಿಕ್ಷಕರು. ಜನರಿಂದ, ಜನರ ಜೀವನದಿಂದ ನಾನು ಪಾಠ ಕಲಿಯುತ್ತಿದ್ದೇನೆ’ ಎನ್ನುತ್ತಾರೆ ರೋಹನ್‌.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.