ಗುಂಡಿ ತಪ್ಪಿಸಲು ಯತ್ನ; ಟ್ರಕ್ಗೆ ಸ್ಕೂಟರ್ ಸವಾರ ಬಲಿ
Team Udayavani, Oct 15, 2017, 8:56 AM IST
ಮೂಡಬಿದಿರೆ: ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುವ ಬೆಳುವಾಯಿ (ಕಾರ್ಕಳ- ಮೂಡುಬಿದಿರೆ ರಸ್ತೆ) ಪೇಟೆಯಲ್ಲಿ ಶನಿವಾರ ಸಂಜೆ ಸಂಭವಿಸಿದ ರಸ್ತೆ ಅವಘಡದಲ್ಲಿ ದ್ವಿಚಕ್ರ ವಾಹನ ಸವಾರ ಟ್ರಕ್ನಡಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಘಟನೆಯಲ್ಲಿ ಸಹಸವಾರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಿದ್ಧಕಟ್ಟೆ ಪುರುಷೋತ್ತಮ ಯಾನೆ ಧರ್ಣಪ್ಪ (35) ಮೃತಪಟ್ಟವರು. ಗಾಯಗೊಂಡ ಸುನಿಲ್ ಹಾಗೂ ದರ್ಣಪ್ಪ ಇಬ್ಬರೂ ಕೂಲಿ ಕಾರ್ಮಿಕರು. ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಮಂಚಕಲ್ ಪರಿಸರದವರು. ಶನಿವಾರ ಸಂಜೆ ದ್ವಿಚಕ್ರ ವಾಹನದಲ್ಲಿ ಕಾರ್ಕಳದಿಂದ ಮೂಡಬಿದಿರೆಯತ್ತ ಬರುತ್ತಿದ್ದಾಗ ಸವಾರ ಸುನಿಲ್ ಬೆಳುವಾಯಿ ಪೇಟೆಯಲ್ಲಿ ರಸ್ತೆಯ ಗುಂಡಿ ತಪ್ಪಿಸಲು ಪ್ರಯತ್ನಿಸಿದಾಗ ವಾಹನ ಪಲ್ಟಿ ಹೊಡೆಯಿತೆನ್ನಲಾಗಿದೆ. ಅದೇ ಹೊತ್ತಿಗೆ ಹಿಂಬದಿಯಿಂದ ಬರುತ್ತಿದ್ದ ಟ್ರಕ್ನಡಿಗೆ ದ್ವಿಚಕ್ರವಾಹನ ಸಿಲುಕಿ ಪುರುಷೋತ್ತಮ ಗಾಯಗೊಂಡು ಮೃತಪಟ್ಟರು. ಸವಾರ ಸುನಿಲ್ ಗಾಯಗೊಂಡರು. ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಪುರುಷೋತ್ತಮ ವಿವಾ ಹಿತರು. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್ ಸಾವು
Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!
Mangaluru: ಕುಡಿಯುವ ನೀರಿನ ಕೊರತೆ, ಬೋಟ್, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ