ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!
Team Udayavani, Sep 19, 2021, 8:10 AM IST
ಕಾರ್ಕಳ: ಹಿಮಾಲಯ ಶ್ರೇಣಿಯ ಮೌಂಟ್ ಸತೊಪಂಥ್ನ ಯಾತ್ರೆ ಕೈಗೊಂಡಿದ್ದ ನೆಲ್ಲಿಕಾರು ಪ್ರಸಾದ್ ವಿಜಯ್ ಶೆಟ್ಟಿ ಅವರು ಸುಮಾರು 7,075 ಮೀ. ಎತ್ತರದ ಎವರೆಸ್ಟ್ ಏರಿ ರಾಷ್ಟ್ರ ಧ್ವಜದ ಜತೆಗೆ ಹೆಮ್ಮೆಯ ತುಳುನಾಡ ಧ್ವಜವನ್ನು ಪ್ರದರ್ಶಿಸಿದ್ದಾರೆ.
ಸಮುದ್ರ ಮಟ್ಟದಿಂದ 7,075 ಮೀ. ಎತ್ತರದ ಸತೊಪಂಥ್ ಹಿಮಾ ಲಯ ಪರ್ವತ ಶ್ರೇಣಿಗಳ ಉತ್ತರಾ ಖಂಡ್ನ ಗರ್ವಾಲ್ ವಿಭಾಗದಲ್ಲಿದೆ. ವೃತ್ತಿನಿರತ ಪರ್ವಾತ ರೋಹಿಗಳ ದಕ್ಷತೆ, ಕಠಿನ ಮನಸ್ಥೈರ್ಯದ ತರಬೇತಿಗಾಗಿ ಈ ವಿಶೇಷ ಯಾತ್ರೆಯನ್ನು ಪ್ರಸಾದ್ ವಿಜಯ್ ಶೆಟ್ಟಿ ನೇತೃತ್ವದ ಐದು ಮಂದಿಯ ತಂಡ ಕೈಗೊಂಡಿತ್ತು.
21 ದಿನಗಳ ಯಾತ್ರೆಯನ್ನು ತೀವ್ರ ಹವಾಮಾನ ವೈಪರೀತ್ಯದ ಕಾರಣ ಸತೊಪಂಥ್ ಸಮ್ಮಿಟ್ ಬೇಸ್ ಕ್ಯಾಂಪ್ ನಲ್ಲಿ 6,000 ಮೀ. ವ್ಯಾಪ್ತಿಯಲ್ಲಿ ಸ್ಥಗಿತಗೊಳಿಸಿದರು. ರಾಷ್ಟ್ರಧ್ವಜದ ಜತೆ ತುಳುನಾಡ ಧ್ವಜವನ್ನೂ ಪ್ರದರ್ಶಿಸಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ