ಕರಾವಳಿಯಲ್ಲಿ ಮುಂದುವರಿದ ಹುಂಡಿ ಅಪವಿತ್ರ ಕೃತ್ಯ: ಕೊಂಡಾಣ ದೈವಸ್ಥಾನದ ಹುಂಡಿ ಅಪವಿತ್ರ!
Team Udayavani, Apr 4, 2021, 12:30 PM IST
ಉಳ್ಳಾಲ: ಕರಾವಳಿ ಭಾಗದಲ್ಲಿ ದೇವಸ್ಥಾನ- ದೈವಸ್ಥಾನಗಳ ಹುಂಡಿ ಅಪವಿತ್ರ ನಡೆಸುವ ಕೃತ್ಯ ಮತ್ತೆ ಮುಂದುವರಿದಿದೆ. ಇದೀಗ ಕೊಂಡಾಣ ಶ್ರೀ ಬಂಟ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ದೈವಸ್ಥಾನದ ಆಡಳಿತ ಸಮಿತಿ ಭಾನುವಾರ ಹುಂಡಿಯನ್ನು ಒಡೆಯುವ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ತಲಪಾಡಿ: 12 ವರ್ಷ ಪ್ರಾಯದ ಬಾಲಕನ ಕೊಲೆ!
ಕೆಲ ತಿಂಗಳ ಹಿಂದೆ ಉಳ್ಳಾಲ ಭಾಗದಲ್ಲಿರುವ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು. ಅದೇ ಸಂದರ್ಭದಲ್ಲಿ ಕಾರಣಿಕ ಕ್ಷೇತ್ರ ಕೊಂಡಾಣ ದೈವಸ್ಥಾನದಲ್ಲಿಯು ಆರೋಪಿಗಳು ದುಷ್ಕೃತ್ಯ ಎಸಗಿರುವ ಸಾಧ್ಯತೆಗಳಿವೆ.
ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: 12 ವರ್ಷದ ಬಾಲಕನ ಜೀವಕ್ಕೆ ಮುಳುವಾಯ್ತು ಪಬ್ ಜಿ ಸೇಡು: ಜೊತೆ ಆಟಗಾರ ಬಾಲಕ ಪೊಲೀಸ್ ವಶಕ್ಕೆ!