ಅಭಿವೃದ್ಧಿ ಯೋಜನೆ ಅನುಷ್ಠಾನಿಸಿದ್ದು ಯುಪಿಎ ಸರಕಾರ: ರೈ
Team Udayavani, Apr 11, 2019, 6:00 AM IST
ಬಂಟ್ವಾಳ: ದೇಶದಲ್ಲಿ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಆಹಾರ ಭದ್ರತೆ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಆರ್ಟಿಇ, ಶಿಕ್ಷಣದ ಹಕ್ಕು, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸಾಕ್ಷರತಾ ಆಂದೋಲನ, ಸರ್ವಶಿಕ್ಷಾ ಅಭಿಯಾನ, ಗ್ರಾಮ ಸಡಕ್ ಯೋಜನೆ ಎಂಬಿತ್ಯಾದಿ ಹಲವು ಅಭಿವೃದ್ದಿ ಯೋಜನೆಗಳನ್ನು ಕೇಂದ್ರ ಯುಪಿಎ ಸರಕಾರ ಅನುಷ್ಠಾನಿಸಿದೆ. ಎನ್ಡಿಎ ಸರಕಾರ ಹೇಳಿಕೊಳ್ಳುವಂತಹ ಯಾವ ಸಾಧನೆ, ಯೋಜನೆಯನ್ನು ಅನುಷ್ಠಾನಿಸಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪ್ರಶ್ನಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ತವರು ರಾಜ್ಯ ಗುಜರಾತ್ನಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬಳಿಕವೂ ಲೋಕಾಯುಕ್ತ ಅನುಷ್ಠಾನಕ್ಕೆ ಬಂದಿಲ್ಲ. ಮೋದಿ ಸರಕಾರ ಬಂದ ಬಳಿಕ ನಳಿನ್ ಅವರಿಂದ ಯಾವುದೇ ಯೋಜನೆಗಳು ಜಾರಿ ಆಗಿಲ್ಲ, ಮಂಗಳೂರಿನಲ್ಲಿದ್ದ ಮಜ್ಗನ್ಡಾಕ್ ಮುಂಬೈಗೆ ಸ್ಥಳಾಂತರ ಮಾಡಿದವರು ಯಾರು. ವಿಜಯ ಬ್ಯಾಂಕ್ ರಾಷ್ಟ್ರೀಕರಣ ಆಗುವಾಗ ನಳಿನ್ ಯಾಕೆ ಪ್ರಶ್ನಿಸಿಲ್ಲ ಎಂದರು.
ಭರವಸೆಗಳು ಅನುಷ್ಠಾನಕ್ಕೆ ಬರಲಿಲ್ಲ
ಯುಪಿಎ ಸರಕಾರ ಮತದಾರರಿಗೆ ನೀಡಿದ ಎಲ್ಲ ಭರವಸೆ ಈಡೇರಿಸಿದೆ. ಈಗ ಪ್ರತೀ ವ್ಯಕ್ತಿಗೆ 72 ಸಾವಿರ ರೂ., ಅಂದರೆ ತಿಂಗಳಿಗೆ 6 ಸಾವಿರದಂತೆ ನೀಡಲು ಪ್ರಣಾಳಿಕೆಯಲ್ಲಿ ಘೋಷಿಸಿದೆ. ಮೋದಿ ಸರಕಾರ ಘೋಷಿಸಿದ 6 ಸಾವಿರದಲ್ಲಿ ಮೂರು ಕಂತಿನ ಕನಿಷ್ಠ 2ಸಾವಿರ ಯಾವ ಖಾತೆಗಾದರೂ ಬಂದಿದೆಯೇ. ಎನ್ಡಿಎ ಸರಕಾರ ನೀಡಿದ ಭರವಸೆಗಳು ಅನುಷ್ಠಾನಕ್ಕೆ ಬರಲಿಲ್ಲ. ಬಿಎಸ್ಎನ್ಎಲ್ ಕಾರ್ಮಿಕರು ಈಗಲೂ ಸಂಬಳ ಇಲ್ಲದೆ ದುಡಿಯುತ್ತಿದ್ದಾರೆ ಎಂದರು.
ನನ್ನಲ್ಲಿರುವ ಒಂದಿಂಚು ಜಾಗವೂ ಹಿರಿಯರಿಂದ ಬಂದದ್ದಲ್ಲ. ಖರೀದಿಸಿ ಪಡೆದುದಾಗಿದೆ. ನನ್ನ ಮೇಲೆಯೇ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಐಟಿ ರೈಡ್ ಕೇಸ್ ಆಗಿದೆ. ಪಕ್ಷದ ಕಾರ್ಯಕರ್ತ ವ್ಯಕ್ತಿಗಳ ಮೇಲೆ ಆಗಿದೆ. ದೇಶದ ಭದ್ರತೆ ವಿಚಾರದಲ್ಲಿ ಯುಪಿಎ ರಾಜಿ ಮಾಡಿಲ್ಲ ಎಂದರು.
ಎನ್ಡಿಎ ಸರಕಾರವು ಸ್ವಾಯತ್ತ ಸಂಸ್ಥೆಗಳಾದ ಆರ್ಬಿಐ, ಸಿಬಿಐಯನ್ನು ನಿಷ್ಕ್ರಿಯ ಮಾಡಿದ್ದಾರೆ. ವಿದೇಶದ ಕಪ್ಪು ಹಣ ತರಲು ಸಾಧ್ಯವಾಗಿಲ್ಲ ಎಂದರು.
ಯುವಕರಿಗೆ ಆದ್ಯತೆ
ಕಾಂಗ್ರೆಸ್ ಯುವಕರಿಗೆ ಆದ್ಯತೆ ನೀಡುವ ಮೂಲಕ ಮಿಥುನ್ ರೈ ಅವರಿಗೆ ಲೋಕಸಭಾ ಅಭ್ಯರ್ಥಿಯಾಗಿ ಅವಕಾಶ ಮಾಡಿಕೊಟ್ಟಿದೆ. ಅವರು ವಿದ್ಯಾರ್ಥಿ ನಾಯಕರಾಗಿ ವಿವಿಧ ಹುದ್ದೆಗಳನ್ನು, ಯುವ ನೇತಾರನಾಗಿ ಪಕ್ಷದ ಪದಾಧಿಕಾರವನ್ನು ನಿರ್ವಹಿಸಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿಯನ್ನು ಮತದಾರರು ಸೋಲಿಸಬೇಕು. ಎ. 11ರಂದು ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ವ್ಯಾಪ್ತಿಯ ಬಿ.ಸಿ. ರೋಡ್ ಬಂಟ್ವಾಳದಲ್ಲಿ ರೋರ್ ಶೋ ಪ್ರಚಾರ ನಡೆಸಲಾಗುವುದು ಎಂದರು.
ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ. ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ತಾ.ಪಂ. ಸದಸ್ಯ ಕೆ. ಸಂಜೀವ ಪೂಜಾರಿ, ನಿಕಟಪೂರ್ವ ಬ್ಲಾಕ್ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ಅಬ್ಟಾಸ್ ಅಲಿ, ಸದಾಶಿವ ಬಂಗೇರ, ಜಗದೀಶ ಕೊçಲ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ