ರಜೆಯ ಮಜಾ: ನೀರಿನಾಟದಲ್ಲಿ ಇರಲಿ ಎಚ್ಚರ
ಈಜು ಬರುವುದೆಂದುಕೊಂಡು ಅಪಾಯ ಆಹ್ವಾನಿಸಿಕೊಳ್ಳಬೇಡಿ
Team Udayavani, May 6, 2019, 6:13 AM IST
ಸವಣೂರು: ಬೇಸಗೆಯ ಬಿಸಿ ದಿನೇ ದಿನೇ ಏರುತ್ತಿದೆ. ಬಿಸಿಲಿನ ಝಳದಿಂದ ತಂಪಾಗಲು ನದಿಗಳಲ್ಲಿ ಈಜಾಡುವ ದೃಶ್ಯ ಗಳು ನದಿಯಲ್ಲಿ ಕಾಣಸಿಗುತ್ತಿದೆ. ಹೆಚ್ಚಿನ ಎಲ್ಲ ಕೆರೆ, ಕೊಳ್ಳಗಳಲ್ಲಿ ನೀರು ಸಂಪೂರ್ಣವಾಗಿ ಬತ್ತಿಹೋಗಿದೆ. ಇದರಿಂದಾಗಿ ನದಿಯಲ್ಲಿ ಈಜಾಡುವವರ ಸಂಖ್ಯೆ ಹೆಚ್ಚಳವಾಗಿದೆ. ನದಿ ನೀರು ಆಕರ್ಷಿಸುತ್ತಿವೆ. ನೀರು ಹರಿಯುತ್ತಿರುವುದು ಕಣ್ಮನ ಸೆಳೆಯುವುದರ ಜತೆಗೆ ಅನಾಹುತಕ್ಕೂ ಆಹ್ವಾನ ನೀಡುತ್ತದೆ.
ಈಜು ತರುವ ಅಪಾಯ
ಗ್ರಾಮೀಣ ಪ್ರದೇಶದ ಅಪ್ರಾಪ್ತ ಮಕ್ಕಳು, ಯುವಕರು ಈಜಲು ಹಾಗೂ ಈಜು ಕಲಿಯಲು ನದಿಗಳತ್ತ ತೆರಳುತ್ತಿದ್ದು, ಸೂಕ್ತ ರಕ್ಷಣಾ ವ್ಯವಸ್ಥೆಯಿಲ್ಲದೆ ಈಜು ಬಾರದವರು ಜತೆಗಾರರಿಂದ ಪ್ರೇರಣೆಗೊಂಡು ನೀರಿಗೆ ಧುಮುಕುತ್ತಿದ್ದು, ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ.
ಈಜು ಬಂದರೂ ಆಪತ್ತು
ಈ ಸಮಯದಲ್ಲಿ ನದಿಗಳಲ್ಲಿ ನೀರಿರುವು ದರಿಂದ ಹೆಚ್ಚಿನ ಜನರು ನದಿ ಕಡೆಗಳಿಗೆ ಬರುತ್ತಿದ್ದಾರೆ. ನದಿಯ ಮಧ್ಯದಲ್ಲಿ ಕೆಸರು ಗುಂಡಿ ಸಿಗುತ್ತಿವೆ. ಹೀಗಾಗಿ ಈಜು ತಿಳಿದವರೂ ಕೆಸರಿನಲ್ಲಿ ಕಾಲು ಸಿಕ್ಕಿಸಿಕೊಂಡು ಅಪಾಯ ಎದುರಿಸುತ್ತಿದ್ದಾರೆ. ಕೆಲವೆಡೆ ನದಿಯ ಆಳವೂ ಹೆಚ್ಚಾಗಿದ್ದು, ಅದು ತಿಳಿ ಯದೇ ಆಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ನೀರಿನಾಟದಿಂದ ಹಲವೆಡೆ ಜೀವಕ್ಕೆ ಅಪಾಯವಾದ ಘಟನೆ ನಡೆದಿದ್ದು, ನದಿಗಳಿಗೆ ಈಜಲು ತೆರಳುವವರು ಜಾಗ್ರತೆ ವಹಿಸಬೇಕಿದೆ. ಪೋಷಕರು ಮಕ್ಕಳ ನೀರಿನಾಟದ ಬಗ್ಗೆ ಸಾಧ್ಯವಾದಷ್ಟು ನಿಗಾ ವಹಿಸಬೇಕಿದ್ದು, ಅನಾಹುತ ಸಂಭವಿಸುವುದಕ್ಕೂ ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿದೆ.
ಈಜುವಿರಾ ಹೀಗೆ ಮಾಡಿ
– ಉತ್ತಮ ಈಜು ಬಲ್ಲವರನ್ನು ಮೊದಲು ನೀರಿಗಿಳಿಸಿ ಆಳ ತಿಳಿಯಿರಿ.
– ಈಜಲು ತೆರಳುವ ಮುನ್ನ ಮನೆಯವರಿಗೆ ಮಾಹಿತಿ ನೀಡಿ.
– ಮಕ್ಕಳನ್ನು ನದಿ ತಟಕ್ಕೆ ಕರೆದೊಯ್ಯುವ ವೇಳೆ ಜಾಗ್ರತೆ ವಹಿಸಿ.
– ಈಜು ಬಾರದವರನ್ನು ಬಲವಂತವಾಗಿ ನೀರಿಗೆ ಇಳಿಸದಿರಿ.
– ಈಜು ಕಲಿಸುವಾಗ ಅವರ ಎತ್ತರಕ್ಕಿಂತ ಆಳಕ್ಕೆ ಕರೆದೊಯ್ಯದಿರಿ.
– ಪೋಷಕರ ಕಣ್ಣು ತಪ್ಪಿಸಿ ನೀರಿಗೆ ಮಕ್ಕಳು ಇಳಿಯಬಾರದು.
– ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!