12 ಲೀ.ನಿಂದ 3 ಸಾವಿರ ಲೀ. ಹಾಲು ಸಂಗ್ರಹಣೆಯ ಸಾಧನೆ

ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘ

Team Udayavani, Feb 14, 2020, 5:27 AM IST

1202PKT3

ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪಾರದರ್ಶಕ ಸೇವೆಗಾಗಿ ಸ್ವಯಂಚಾಲಿತ ಹಾಲು ಸಂಗ್ರಹಣೆ ವ್ಯವಸ್ಥೆ ಇದೆ. ಸಂಚಾರಿ ಹಾಲು ಸಂಗ್ರಹಣೆ ಮೂಲಕ ಹೈನುಗಾರರ ಮನೆ ಬಾಗಿಲಿನಿಂದ ತಾನೇ ಹಾಲು ಸಂಗ್ರಹಿಸುತ್ತಿದೆ.

ಪುಂಜಾಲಕಟ್ಟೆ: ಬಂಟ್ವಾಳ ತಾ|ನ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ವಾಮದ ಪದವು ಗ್ರಾಮೀಣ ಪ್ರದೇಶವಾದರೂ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಕೃಷಿ ಪ್ರಧಾನ ಗ್ರಾಮವಾದ ಇಲ್ಲಿನ ಅಭಿವೃದ್ಧಿಗೆ ಕೃಷಿಕರಿಗೆ ಹೈನುಗಾರಿಕೆಯೂ ಸಹಕಾರಿಯಾಗಿದೆ.

1988ರ ನ. 11ರಂದು ಸ್ಥಾಪನೆಗೊಂಡ ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘ ಪ್ರಸ್ತುತ ಸ್ಥಾಪಕಾಧ್ಯಕ್ಷ ಎಚ್‌. ಗೋಪಾಲ ಕೃಷ್ಣ ಚೌಟ ಅವರ ಸಾರಥ್ಯದಲ್ಲಿ ಮುನ್ನಡೆಯುತ್ತಿದೆ. ಆರಂಭದಲ್ಲಿ 12 ಲೀ. ಹಾಲು ಸಂಗ್ರಹಣೆಯಿಂದ ತೊಡಗಿ ಇಂದು 568 ಸದಸ್ಯರಿಂದ 3 ಸಾವಿರ ಲೀ. ಹಾಲು ಸಂಗ್ರಹಣೆ ನಡೆಸುತ್ತಿರುವುದು ಸಾಧನೆಯಾಗಿದೆ.

ಸಾಂಧ್ರ ಶೀತಲೀಕರಣ ಘಟಕ
5 ಸಾವಿರ ಲೀ. ಸಾಮರ್ಥ್ಯದ ಸಾಂಧ್ರ ಶೀತಲೀಕರಣ ಘಟಕ ಹೊಂದಿದ್ದು, ಪಿಲಾತಬೆಟ್ಟು, ನಯನಾಡು, ಇರ್ವತ್ತೂರು ಸಂಘಗಳಿಂದ ಹಾಲು ಸಂಗ್ರಹಿಸಲಾಗುತ್ತಿದೆ. ಪಾರದರ್ಶಕ ಸೇವೆಗಾಗಿ ಸ್ವಯಂಚಾಲಿತ ಹಾಲು ಸಂಗ್ರಹಣೆ ವ್ಯವಸ್ಥೆ ಇದೆ. ಸಂಘದ ಸದಸ್ಯರ ಸಾಧಕ ಮಕ್ಕಳನ್ನು ವಾರ್ಷಿಕ ಮಹಾಸಭೆಯಲ್ಲಿ ಸಮ್ಮಾನಿಸಲಾಗುತ್ತಿದೆ. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಜಾನುವಾರು ಪ್ರದರ್ಶನ, ಮಾಹಿತಿ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಹಾಲು ಒಕ್ಕೂಟದ ಮತ್ತು ಸರಕಾರಿ ವಿವಿಧ ಅನುದಾನಗಳನ್ನು ಒದಗಿಸಿಕೊಡ ಲಾಗುತ್ತಿದೆ.

ಸಂಘವು 5 ಸೆಂಟ್ಸ್‌ ಸ್ಥಳ ಹಾಗೂ ಸ್ವಂತ ಕಟ್ಟಡ ಹೊಂದಿದೆ. 2008ರಲ್ಲಿ ಕಟ್ಟಡದ ಮೇಲಂತಸ್ತಿನಲ್ಲಿ ಸಭಾಂಗಣ ನಿರ್ಮಿಸ ಲಾಗಿದೆ.ನೀರಿಗಾಗಿ ಕೊಳವೆ ಬಾವಿ ವ್ಯವಸ್ಥೆ ಇದೆ. 2013ರಲ್ಲಿ ಬೆಳ್ಳಿಹಬ್ಬವನ್ನು ಆಚರಿಸಲಾಗಿದ್ದು, ನಿರಂತರ 25 ವರ್ಷ ಹಾಲು ಪೂರೈಸಿದ ಮತ್ತು ಅತೀ ಹೆಚ್ಚು ಹಾಲು ಪೂರೈಸುತ್ತಿರುವ ಸದಸ್ಯರನ್ನು ಗೌರವಿಸಲಾಗಿದೆ.

ಸಂಚಾರಿ ಹಾಲು ಸಂಗ್ರಹಣೆ
ಇತರ ಸಂಘಗಳಲ್ಲಿ ಹೈನುಗಾರರು ಸಂಘಕ್ಕೆ ಹಾಲು ಸರಬರಾಜು ನಡೆಸಿದರೆ, ವಾಮದ ಪದವು ಸಂಘ ಸಂಚಾರಿ ಹಾಲು ಸಂಗ್ರಹಣೆ ಮೂಲಕ ಹೈನುಗಾರರ ಮನೆ ಬಾಗಿಲಿನಿಂದ ತಾನೇ ಹಾಲು ಸಂಗ್ರಹಿಸುತ್ತಿದೆ. ಪ್ರತಿದಿನ 2 ಸರದಿಯಲ್ಲಿ ಸಂಚಾರಿ ಹಾಲು ಸಂಗ್ರಹಣೆ ವಾಹನ ಮೂಲಕ ಸುಮಾರು 50 ಕಿ.ಮೀ. ದೂರ ಸಂಚರಿಸಿ ರೈತರ ಮನೆಗಳಿಂದ ಹಾಲು ಸಂಗ್ರಹಿಸಲಾಗುತ್ತಿದೆ.

ಪ್ರಶಸ್ತಿಗಳು
ದ.ಕ. ಹಾಲು ಒಕ್ಕೂಟದಿಂದ 2 ವರ್ಷ ಜಿಲ್ಲಾ ಉತ್ತಮ ಸಂಘ ಪ್ರಶಸ್ತಿ, 16 ವರ್ಷ ತಾಲೂಕು ಉತ್ತಮ ಸಂಘ ಪ್ರಶಸ್ತಿ, ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ 2 ವರ್ಷ ಪ್ರಶಸ್ತಿ, 2 ವರ್ಷ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪ್ರಶಸ್ತಿ ಗಳಿಸಿದೆ. ಪ್ರಗತಿಪರ ಹೈನುಗಾರ ವಿನಾಯಕ ಪ್ರಭು ಆಲದಪದವು ಅವರು ಪತ್ರಿನಿತ್ಯ 300 ಲೀ. ಹಾಲು ವಿತರಿಸುತ್ತಿದ್ದು, 2 ಬಾರಿ ಜಿಲ್ಲಾ ಉತ್ತಮ ಹೈನುಗಾರ ಪ್ರಶಸ್ತಿ ಪಡೆದಿದ್ದಾರೆ.

ವಾಮದಪದವು ಪರಿಸರದ ಹೈನುಗಾರರಿಗೆ ಉತ್ತೇಜನ, ಪ್ರೋತ್ಸಾಹ ನೀಡಲಾಗುತ್ತಿದ್ದು, ಸವಲತ್ತುಗಳನ್ನು ಒದಗಿಸುವಲ್ಲಿ ಮುತುವರ್ಜಿ ವಹಿಸಲಾಗುತ್ತಿದೆ. ಸಂಘ ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿದ್ದು, ಮುಂದಕ್ಕೆ 5 ಸಾವಿರ ಲೀ. ಸಂಗ್ರಹಣೆಯ ಗುರಿ ಹೊಂದಿದೆ.
– ಎಚ್‌.ಗೋಪಾಲಕೃಷ್ಣ ಚೌಟ,ಅಧ್ಯಕ್ಷರು

ಅಧ್ಯಕ್ಷರು
1988ರಿಂದ ಎಚ್‌. ಗೋಪಾಲಕೃಷ್ಣ ಚೌಟ ಅವರು ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ವಸಂತ ಶೆಟ್ಟಿ. ವಾಸುದೇವ ಭಟ್‌, ಜನಾರ್ದನ ಸಫಲ್ಯ ಅಧ್ಯಕ್ಷರಾಗಿದ್ದರು.
ಕಾರ್ಯನಿರ್ವಹಣಾಧಿಕಾರಿ
ಸಂಘದ ಆರಂಭದಿಂದ ಇದುವರೆಗೂ ಕಾರ್ಯನಿರ್ವಹಣಾಧಿಕಾರಿಯಾಗಿ ನಾರಾ ಯಣ ಶೆಟ್ಟಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪ್ರಸ್ತುತ ಯಶೋಧರ ಅವರು ಹಾಲು ಪರೀಕ್ಷಕರಾಗಿ, ಗುರುಪ್ರಸಾದ್‌ ಲೆಕ್ಕಿಗರಾಗಿ, ಹರಿಶ್ಚಂದ್ರ ಶೆಟ್ಟಿ ಮತ್ತು ಲೀಲಾ ಅವರು ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

– ರತ್ನದೇವ್‌ ಪುಂಜಾಲಕಟ್ಟೆ

ಟಾಪ್ ನ್ಯೂಸ್

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.