ಮೂಡಬಿದಿರೆ ಕಂಬಳದಲ್ಲಿ ಹಿಂಸೆ?; ಸುಪ್ರೀಂಗೆ ಪೇಟಾ ದೂರು
Team Udayavani, Nov 12, 2017, 12:09 PM IST
ಮೂಡಬಿದಿರೆ: ಇಲ್ಲಿ ಶನಿವಾರ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆದ 15ನೇ ವರ್ಷದ ಕೋಟಿ ಚೆನ್ನಯ ಹೊನಲು ಬೆಳಕಿನ ಜೋಡುಕರೆ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗಿದೆ ಎಂದು ಪ್ರಾಣಿದಯಾ ಸಂಘ ತಕರಾರು ತೆಗೆದಿದೆ.
ನಾಳೆ ಸೋಮವಾರ ಸುಪ್ರೀಂ ಕೋರ್ಟ್ಗೆ ಕೋಣಗಳಿಗೆ ಹಿಂಸೆ ನೀಡಿದ ಬಗೆಗಿನ ಸಾಕ್ಷ್ಯ ಸಮೇತ ದೂರು ನೀಡುವುದಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಕಂಬಳದಲ್ಲಿ ಪೇಟಾದ ಹಲವು ಕಾರ್ಯಕರ್ತರು ರಹಸ್ಯ ಕ್ಯಾಮರಾಗಳನ್ನು ಬಳಸಿ ಫೋಟೋಗಳು ಮತ್ತು ವಿಡಿಯೋಗಳನ್ನು ಸೆರೆ ಹಿಡಿದಿದ್ದು, ಅದರಲ್ಲಿ ಕೆಲವೆಡೆ ಕೋಣಗಳು ಬಿದ್ದಿರುವುದು, ಹೊಡೆದಿರುವುದು ಕಂಡು ಬಂದಿದೆ ಎನ್ನಲಾಗಿದೆ.
ಕಂಬಳದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 137 ಜೊತೆ ಕೋಣಗಳು ಸ್ಪರ್ಧೆಗಿಳಿದಿದ್ದವು.
ಪೇಟಾ ವಿರುದ್ಧ ಡಿವಿಎಸ್ ಕಿಡಿ
ಕಾಪುವಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಪೇಟಾ ವಿರುದ್ಧ ಕಿಡಿ ಕಾರಿದ ಕೇಂದ್ರ ಸಚಿವ ಡಿ.ವಿ . ಸದಾನಂದ ಗೌಡ ಅವರು ‘ಕರಾವಳಿಯಲ್ಲಿರುವ ಏಕೈಕ ಮನೋರಂಜನಾ ಕ್ರೀಡೆಕಂಬಳ. ಕೋಣಗಳ ಪಾಲನೆ ,ಪೋಷಣೆ ಬಗ್ಗೆ ನಿಮಗೇನು ಗೊತ್ತು’ ಎಂದು ಪ್ರಶ್ನಿಸಿದರು.
‘ಕೇವಲ ಪ್ರಚಾರಕ್ಕಾಗಿ ಪೇಟಾ ಹೋರಾಟ ಮಾಡುತ್ತಿದ್ದು , ಅವರಿಗೆ ದಿನ ನಿತ್ಯ ಸಾವಿರಾರು ಕೋಣಗಳ ಬಲಿ ನಡೆಯುತ್ತಿರುವುದು, ಕುದರೆ ರೇಸ್ ಕಾಣುವುದಿಲ್ಲವೇ’ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು