ರಾಮಮಂದಿರವಷ್ಟೇ ಅಲ್ಲ; ರಾಮರಾಜ್ಯದ ಕನಸು: ಪೇಜಾವರ ಶ್ರೀ
Team Udayavani, Jul 5, 2022, 7:15 AM IST
ಮಂಗಳೂರು: ಅಯೋಧ್ಯೆಯಲ್ಲಿ 2024ರ ಮಕರ ಸಂಕ್ರಾತಿ ದಿನ ಶ್ರೀರಾಮಚಂದ್ರನ ಪ್ರತಿಷ್ಠೆ ನಡೆಯಲಿರುವುದು ನಿಶ್ಚಯ. ಆದರೆ ನಮ್ಮ ಕನಸು ಅಲ್ಲಿ ಶ್ರೀರಾಮ ಮಂದಿರ ಮಾಡುವುದೊಂದೇ ಅಲ್ಲ, ಬದಲಿಗೆ ರಾಮರಾಜ್ಯ ನಿರ್ಮಾಣ ಎಂದು ಪೇಜಾವರ ಮಠಾಧೀಶ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ವಿಶ್ವಸ್ಥ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಹರಿಪಾದಗೈದಿರುವ ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ಇಲ್ಲಿನ ಮಂಜು ಪ್ರಸಾದದಲ್ಲಿ ಸೋಮವಾರ ನಡೆದ ಗುರುವಂದನೆ ಹಾಗೂ ಪಟ್ಟದ ದೇವರಾದ ರಾಮವಿಠಲ ದೇವರಿಗೆ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಮಾತನಾಡಿದರು.
ಗ್ರಾಮಗಳ ದತ್ತು
ಅಯೋಧ್ಯೆ ರಾಮಮಂದಿರ ನಿರ್ಮಾ ಣದ ಬಳಿಕ ಅದರ ಸುತ್ತುಪೌಳಿಯ ಅಭಿವೃದ್ಧಿಯಾಗ ಬೇಕಿದೆ. ಜತೆಯಲ್ಲೇ ರಾಮಮಂದಿರ ಟ್ರಸ್ಟ್ ಅಥವಾ ಇತರ ಸಂಸ್ಥೆಗಳ ನೆರವಿನೊಂದಿಗೆ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅದನ್ನು ಮಾದರಿ ರಾಮರಾಜ್ಯವಾಗಿ ರೂಪಿಸುವ ಯೋಜನೆ ಇದೆ. ಇದರ ಬಗ್ಗೆ ನಮ್ಮ ಸೂಚನೆಗಳನ್ನು ನೀಡಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಅದು ಕೊನೆಯಲ್ಲ ಆರಂಭ
ಶ್ರೀರಾಮ ಮಂದಿರ ನಿರ್ಮಾಣವೇ ಕೊನೆಯಲ್ಲ, ನಮಗೆ ಅದಕ್ಕಿಂತ ಮಹತ್ವವಾದ ಉದ್ದೇಶವಿದೆ. ಅದು ರಾಮ ರಾಜ್ಯದ ನಿರ್ಮಾಣ. ಈಗ ಪ್ರಜೆಗಳೇ ಪ್ರಭುಗಳು, ರಾಜರ ಆಳ್ವಿಕೆ ಇಲ್ಲ, ಹಾಗಾಗಿ ಪ್ರತಿ ಪ್ರಜೆಯೂ ಶ್ರೀರಾಮನಾಗಬೇಕು, ಸದ್ಗುಣಗಳ ಪ್ರತಿನಿಧಿಯಾದ ರಾಮನ ಗುಣಗಳನ್ನೇ ರೂಢಿಸಿಕೊಂಡಾಗ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದು ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಮಾತೃಭೂಮಿಯನ್ನು ಪ್ರೀತಿಸ ಬೇಕು, ಮಾತೃಭೂಮಿಯ ಮುಂದೆ ಸ್ವರ್ಗವೂ ತೃಣಸಮಾನವೆಂದ ಶ್ರೀರಾಮ ಎಲ್ಲರಿಗೂ ದೇಶಪ್ರೇಮದ ಸ್ಫೂರ್ತಿಯಾಗಿದ್ದಾನೆ. ಇದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಅನಾಗರಿಕರನ್ನು ಮಟ್ಟಹಾಕಬೇಕು
ದೇಶದಲ್ಲಿ ಕೆಲವೇ ಅನಾಗರಿಕರು ಹಿಂಸೆ, ಕೊಲೆಯಲ್ಲಿ ತೊಡಗುವ ಮೂಲಕ ರಾಮರಾಜ್ಯಕ್ಕೆ ಭಂಗ ಬರುವಂತೆ ನಡೆದುಕೊಳ್ಳುತ್ತಿದ್ದಾರೆ, ಇದನ್ನು ಸರಕಾರ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲೇಬೇಕು, ನಿಷ್ಪಕ್ಷಪಾತ ವಾಗಿ ಈ ಕೆಲಸವನ್ನು ಮಾಡಬೇಕು ಎಂದು ನುಡಿದರು.
ಇದಕ್ಕೆ ಮೊದಲು ನಡೆದ ತುಲಾ ಭಾರ ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾಲಯ ಮುಖ್ಯಸ್ಥ ಪ್ರೊ|ಎಂ.ಬಿ. ಪುರಾಣಿಕ್, ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಜಯರಾಮ ಭಟ್, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಪ್ರದೀಪ್ ಕುಮಾರ್ ಕಲ್ಕೂರ, ಸುಧಾಕರ ರಾವ್ ಪೇಜಾವರ, ಶಕೀಲ ಕಾವ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ