ಐವನ್ ಡಿ’ ಸೋಜಾ ಅವರಿಂದ ಮತಯಾಚನೆ
Team Udayavani, Apr 12, 2019, 6:00 AM IST
ಮಹಾನಗರ: ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿ’ ಸೋಜಾ ಅವರು ಮಂಗಳೂರು ನಗರದ ಬಂದರು, ಕಂದಕ್, ದಕ್ಕೆ ಮುಂತಾದ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ತೆರಳಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಮತದಾನ ಮಾಡುವಂತೆ ಮತದಾರರನ್ನು ವಿನಂತಿಸಿದರು.
ಬಂದರಿನ ಮೀನು ಮಾರುಕಟ್ಟೆ ಪ್ರದೇಶದಲ್ಲಿ ಮತದಾರರನ್ನು ಉದ್ದೇ ಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ರಾಷ್ಟ್ರದ ಶೇ. 20ರಷ್ಟು ಜನರಿಗೆ 72,000 ಸಾವಿರ ರೂ. ವಾರ್ಷಿಕ ವರಮಾನದ ಬೆಂಬಲ ನೀಡಲು ಐತಿಹಾಸಿಕ ತೀರ್ಮಾನವನ್ನು ತೆಗೆದು ಕೊಳ್ಳುವ ಮೂಲಕ ರಾಷ್ಟ್ರದ ಬಡತನ ನಿರ್ಮೂ ಲನಕ್ಕೆ ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ. ಬಡವರಿಗೆ ಮೂಲ ಸೌಕರ್ಯವನ್ನು ಒದಗಿಸುವ ಪಕ್ಷ ಕಾಂಗ್ರೆಸ್ ಅಗಿದ್ದು, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದಲ್ಲಿ ವಾರ್ಷಿಕ 72,000 ಸಾವಿರ ರೂ. ವರಮಾನವನ್ನು ನೀಡುವ ಮೂಲಕ ಬಡತನ ನಿರ್ಮೂಲನದ ಐತಿಹಾಸಿಕ ತೀರ್ಮಾನವನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳಲಿದೆ ಎಂದು ಅವರುತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಎಂ. ಮುಸ್ತಫ, ಯೂಸುಫ್ ಉಚ್ಚಿಲ್, ಅನ್ವರ್ ರಿಕೋ,ಸತೀಶ್ ಫೆಂಗಲ್, ಟಿ.ಎಂ. ಹನೀಫ್,ಆರೀಫ್ ಭಾವಾ,ಹನೀಫ್ ಬೆಂಗ್ರೆ, ಅಹಮ್ಮದ್ ಬಾವಾ ಮೊದಲಾದವರು ಜತೆಗಿದ್ದರು.