ಸೈನಿಕರಿಗೆ ಸಲಾಂ; ಜಯ-ವಿಜಯರಂತೆ ದೇಶ ಕಾಯುತ್ತಿದ್ದಾರೆ!


Team Udayavani, Feb 20, 2019, 1:00 AM IST

jaya-vijaya.jpg

ಜಯ-ವಿಜಯರು ವೈಕುಂಠವನ್ನು ಕಾಯುವ ಬಾಗಿಲ ಭಟರು ಎನ್ನುವುದು ಭಾರತೀಯರ ನಂಬಿಕೆ. ಅದು ಪುರಾಣವಾದರೆ ಮಂಗಳೂರಿನ ಈ ಅವಳಿ ಸಹೋದರರು ಸೇನೆಯಲ್ಲಿದ್ದು  ದೇಶವನ್ನು  ಕಾಯುತ್ತಿರುವುದು ವಾಸ್ತವ!

ಮಂಗಳೂರು: ಅವರಿಬ್ಬರು ಅವಳಿ ಸಹೋದರರು. ಆದರೆ ಅವರ ಭವಿಷ್ಯದ ಕನಸು ಎರಡಾಗಿರಲಿಲ್ಲ. ಪರಿಣಾಮವಾಗಿ ಇಬ್ಬರೂ ಈಗ ದೇಶಸೇವಕ ಯೋಧರು! 

ಇವರು ಪಡೀಲು ವೀರನಗರದ ಜಯಚಂದ್ರ ಮತ್ತು ಮೇಜರ್‌ ವಿಜಯಚಂದ್ರ. ದೇಶಕ್ಕಾಗಿ ದುಡಿದ ಮಹಾನ್‌ ವ್ಯಕ್ತಿಗಳ ಬಗ್ಗೆ ತಿಳಿದು ಅವರಂತೆ ಆಗಬೇಕು ಎಂಬ ನಿರ್ಧಾರ ಬಾಲ್ಯದ ದಿನಗಳಲ್ಲೇ ಒಡಮೂಡಿತ್ತು. ಅದನ್ನು ಸಾಕಾರಗೊಳಿಸುವ ಹಾದಿಯಲ್ಲಿ ಇಬ್ಬರೂ ಪಟ್ಟ ಪರಿಶ್ರಮದಿಂದಾಗಿ ಅವಳಿ ಸಹೋದರರು ದೇಶ ಸೇವೆಯಲ್ಲಿದ್ದಾರೆ.

ಜಯಚಂದ್ರ ಗಡಿ ಭದ್ರತಾ ಪಡೆಯಲ್ಲಿ ಅಸಿಸ್ಟೆಂಟ್‌ ಕಮಾಂ ಡೆಂಟ್‌ ಆಗಿದ್ದಾರೆ. ವಿಜಯಚಂದ್ರ ಯುಎವಿ ಪೈಲಟ್‌ ಆಗಿದ್ದಾರೆ. 

ನಿವೃತ್ತ ಸಿಬಿಐ ಅಧಿಕಾರಿಯ ಪುತ್ರರು
ಭಾರತ ಸರಕಾರದ ನಿವೃತ್ತ ಕ್ಯಾಬಿನೆಟ್‌ ಸೆಕ್ರೆಟರಿಯೇಟ್‌ ಚಂದ್ರಹಾಸ್‌ ಮತ್ತು ಗೃಹಿಣಿ ಲೀಲಾವತಿ ದಂಪತಿಯ ಮೂವರು ಮಕ್ಕಳಲ್ಲಿ ಜಯ-ವಿಜಯ ಸಹೋದರರು ದೇಶ ಸೇವೆಯಲ್ಲಿದ್ದರೆ, ಸಹೋದರಿ ಜಯಶ್ರೀ ಕೂಳೂರು ಸರಕಾರಿ ಪ.ಪೂ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಈರ್ವರು ಸಹೋದರರು ಪಣಂಬೂರು ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಥಮಿಕ, ಪದುವಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಶಿಕ್ಷಣ ಪಡೆದಿದ್ದಾರೆ. 

ಕನಸು ಬಲಿತದ್ದು ಕಾಲೇಜಿನಲ್ಲಿ
ಕಾಲೇಜು ಹಂತದಲ್ಲಿಯೇ ಎನ್‌ಸಿಸಿ ಯಲ್ಲಿದ್ದ ಈ ಸಹೋದರರಿಗೆ ದೇಶಸೇವೆಗೇ ಹೋಗಬೇಕೆಂಬ ಛಲ ಇತ್ತು. ಸ್ವಾತಂತ್ರÂ ಹೋರಾಟಗಾರರು, ರಾಷ್ಟ್ರ ರಕ್ಷಣೆಯ ಕುರಿತು ಮನೆಯಲ್ಲಿ ತಂದೆ ಹೇಳುತ್ತಿದ್ದ ಕತೆಗಳು ಮಕ್ಕಳಿಬ್ಬರಲ್ಲಿ ರಾಷ್ಟ್ರಸೇವೆ ಕನಸು ಕಟ್ಟಲು ಪೂರಕವಾಯಿತು. ಆ ಕನಸು ಬಲಿತದ್ದು ಕಾಲೇಜಿನಲ್ಲಿ. ಪದವಿ ಮುಗಿದ 
ತತ್‌ಕ್ಷಣವೇ ಅದಕ್ಕಾಗಿ ತಯಾರಿ ಮಾಡಿಕೊಂಡು ಪ್ರಯತ್ನದಲ್ಲಿ ಸಫಲರಾದರು. 

ಸಹೋದರರ ಸೇವೆ
ಜಯಚಂದ್ರ ಅವರು 2012ರಲ್ಲಿ ಅಸಿಸ್ಟೆಂಟ್‌ ಕಮಾಂಡೆಂಟ್‌ ಆಗಿ ಗಡಿ ಭದ್ರತಾ ಪಡೆಗೆ ನಿಯೋಜನೆಗೊಂಡರು. ಬಾಂಗ್ಲಾಗಡಿಯ ಕಿಶನ್‌ಗಂಜ್‌, ಗುಜರಾತ್‌ನ ದಂತೇವಾಡದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಕಾಶ್ಮೀರದಲ್ಲಿದ್ದಾರೆ. ಗೃಹಿಣಿಯಾಗಿರುವ ಪತ್ನಿ ರಕ್ಷಾ ಅವರ ನಿರಂತರ ಪ್ರೋತ್ಸಾಹ ಅವರ ಸೇವಾಬಲ. 

ಮೇ| ವಿಜಯ ಚಂದ್ರ ಅವರು 2009ರಲ್ಲಿ ಸೇನಾ ತರಬೇತಿಗೆ ತೆರಳಿ 2010ರಲ್ಲಿ ಕರ್ತವ್ಯಕ್ಕೆ ನಿಯೋಜನೆ ಗೊಂಡರು. ಮೊದಲು ಉತ್ತರ ಸಿಕ್ಕಿಂನ ಇಂಡೋ-ಚೀನ ಗಡಿಯ ಹೈ ಅಲ್ಟಿಟ್ಯೂಡ್‌ ಏರಿಯಾ ಆಗಿರುವ ಬಾಗ್ರಾಕೋಟೆಯಲ್ಲಿ, ಬಳಿಕ ಹಿಮಾಚಲ ಪ್ರದೇಶದ ಪಾಲಾಂಪುರ್‌ (2012-14), ಲೇಹ್‌ ಲಢಾಕ್‌ನ ಹೈ ಅಲ್ಟಿಟ್ಯೂಡ್‌ ಏರಿಯಾದಲ್ಲಿ (2014-16) ಕರ್ತವ್ಯ ನಿರ್ವಹಿಸಿದ್ದಾರೆ. ಎರಡೂವರೆ ವರ್ಷಗಳಿಂದ ಜಮ್ಮು ಕಾಶ್ಮೀರದಲ್ಲಿ ಯುಎವಿ ಪೈಲಟ್‌ (ಡ್ರೋನ್‌ ಪೈಲಟ್‌) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶತ್ರುಗಳ ಮೇಲೆ ಕಣ್ಗಾವಲು ಇರಿಸುವ ಡ್ರೋನ್‌ಗಳನ್ನು ಹಾರಾಡಿಸುವ ಕಾಯಕ ಅವರದು. ಪತ್ನಿ ಸ್ಮಿತಾ ಇವರ ದೇಶಸೇವೆಯ ಬೆನ್ನೆಲುಬು.

ಊರಿಗೆ ಬಂದರೆ ಹಬ್ಬದ ಸಂಭ್ರಮ
ಗಂಡು ಮಕ್ಕಳಿಬ್ಬರೂ ದೇಶಕ್ಕಾಗಿ ದುಡಿಯುವ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ವರ್ಷಕ್ಕೊಂದೆರಡು ಬಾರಿ ಊರಿಗೆ ಬರುತ್ತಾರೆ. ಆಗೆಲ್ಲ ಮನೆಯಲ್ಲಿ ಹಬ್ಬದ ಸಂಭ್ರಮ. 
-ಲೀಲಾವತಿ, ಜಯ-ವಿಜಯರ ತಾಯಿ

ನನಗೂ ಸಹೋದರ ವಿಜಯನಿಗೂ ಚಿಕ್ಕಂದಿನಿಂದಲೇ ದೇಶಕ್ಕಾಗಿ ದುಡಿಯಬೇಕೆಂಬ ಆಸಕ್ತಿ ಇತ್ತು. ಅದೀಗ ನನಸಾಗಿದೆ. ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿರುವುದರ ಬಗ್ಗೆ ಹೆಮ್ಮೆ ಇದೆ.
-ಜಯಚಂದ್ರ

ಕನಸು ನನಸಾದ ಖುಷಿ
ದೇಶಸೇವೆಯ ಕನಸು ಬಾಲ್ಯಕಾಲದಿಂದಲೂ ಇತ್ತು. ಅದಕ್ಕೆ ನೀರೆರೆದು ಪೋಷಿಸಿದ್ದು ಹೆತ್ತವರು. ಈಗ ಯುಎವಿ ಪೈಲಟ್‌ (ಡ್ರೋನ್‌ ಪೈಲಟ್‌) ಆಗುವ ಮೂಲಕ ಕನಸು ನನಸಾಗಿಸಿದ ಖುಷಿ ಇದೆ. ನನ್ನ ವೃತ್ತಿ ಆಯ್ಕೆಯಲ್ಲಿ ಪತ್ನಿಯ ನಿರಂತರ ಪ್ರೋತ್ಸಾಹವಿದೆ. ಪುತ್ರ ವಶಿಷ್‌u ಕೂಡ ದೇಶಸೇವೆಯಲ್ಲಿ ತೊಡಗಿಸಿಕೊಳ್ಳುವನೆಂಬ ಭರವಸೆ ಇದೆ.
-ಮೇಜರ್‌ ವಿಜಯಚಂದ್ರ

- ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.