ಮರಳು ಕಟ್ಟದ ನೀರಿಗಿಳಿಯದಂತೆ ಎಚ್ಚರಿಕೆ ಫಲಕ
ಕುಡಿಯುವ ನೀರಿನ ಮೂಲದಲ್ಲಿ ಫಲಕ ಅಳವಡಿಸಿದ ಸುಳ್ಯ ನಗರಸಭೆ
Team Udayavani, Apr 20, 2019, 6:00 AM IST
ಮರಳು ಕಟ್ಟದ ಬಳಿ ಸುಳ್ಯ ನ.ಪಂ. ಅಳವಡಿಸಿರುವ ಎಚ್ಚರಿಕೆ ಫಲಕ.
ಸುಳ್ಯ: ನಗರದ ಕುಡಿಯುವ ನೀರಿನ ಪೂರೈಕೆಗಾಗಿ ಕಲ್ಲುಮುಟ್ಲು ಬಳಿ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮರಳು ಕಟ್ಟಕ್ಕೆ ಇಳಿಯದಂತೆ ನ.ಪಂ. ಎಚ್ಚರಿಕೆ ಫಲಕ ಅಳವಡಿಸಿದೆ. ಪಯಸ್ವಿನಿ ನದಿ ನೀರಿಲ್ಲದೆ ಬರಡಾ ಗಿದ್ದು, ಇಡೀ ನಗರಕ್ಕೆ ನೀರೊದಗಿಸಲು ಮರಳು ಕಟ್ಟದಲ್ಲಿ ಸಂಗ್ರಹಗೊಂಡಿರುವ ನೀರನ್ನೇ ನಂಬಲಾಗಿದೆ. ಹೀಗಾಗಿ ನೀರು ಮಲೀನಗೊಳಿಸದಂತೆ ನ.ಪಂ. ಮರಳು ಕಟ್ಟ ಸ್ಥಳದಲ್ಲಿ ಫಲಕ ಅಳವಡಿಸಿದೆ.
ನೀರಿಗಿಳಿಯುವ ದುಸ್ಸಾಹಸ
ಫಲಕ ಅಳವಡಿಸಿದ ಮೇಲೂ ಕೆಲವರು ಈಜಾಟಕ್ಕೆಂದು ನೀರಿಗಿಳಿದ ಪ್ರಸಂಗ ನಡೆದಿದೆ. ಪ್ರತಿ ವರ್ಷವೂ ಇಂತಹ ಕೃತ್ಯಗಳು ಪುನಾರವರ್ತನೆ ಆಗುತ್ತಿವೆ. ಕೆಲ ದಿನಗಳ ಹಿಂದೆ ನದಿ ನೀರಿಗೆ ಇಳಿದ ವ್ಯಕ್ತಿಯೋರ್ವ ಮುಳುಗಿ ಮೃತಪಟ್ಟ ಘಟನೆಯೂ ನಡೆದಿತ್ತು. ಹೀಗಾಗಿ ನಗರದ ನೀರಿನ ದಾಹ ನೀಗಿಸುವ ಮರಳು ಕಟ್ಟದಲ್ಲಿ ಶುಚಿತ್ವ ಕಾಪಾಡಲು ಸ್ವತಃ ಜನರೇ ಎಚ್ಚರ ವಹಿಸಬೇಕಿದೆ.
ಫಲಕದಲ್ಲಿ ಏನಿದೆ?
ಮರಳು ಕಟ್ಟದ ಮೇಲ್ಭಾಗದ 50 ಮೀ. ಅಂತರದಲ್ಲಿ ಸಾರ್ವಜನಿಕರು ಸ್ನಾನ ಮಾಡುವುದಾಗಲಿ, ಈಜುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಮೀನು ಬೇಟೆ ಅಥವಾ ಇತ್ಯಾದಿಗಳ ಮೂಲಕ ನೀರನ್ನು ಕಲ್ಮಶಗೊಳಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ